ಆ್ಯಪ್ನಗರ

ಸೊಗಲದಲ್ಲಿ ಸಂಕ್ರಾಂತಿ ಸೊಗಸು, ಸಂಗಮ

ಬೈಲಹೊಂಗಲ : ಮಕರ ಸಂಕ್ರಾಂತಿಯಂದು ಪುಣ್ಯ ಸ್ನಾನ ಮಾಡಲು ಮಂಗಳವಾರ ಸೊಗಲದ ಶ್ರೀ ಸೋಮೇಶ್ವರ ದೇವಾಲಯದ ಅಂಗಳದಲ್ಲಿ ಸಾವಿರಾರು ಜನರ ಸಂಗಮವಾಗಿತ್ತು...

Vijaya Karnataka 16 Jan 2019, 5:00 am
ಬೈಲಹೊಂಗಲ: ಮಕರ ಸಂಕ್ರಾಂತಿಯಂದು ಪುಣ್ಯ ಸ್ನಾನ ಮಾಡಲು ಮಂಗಳವಾರ ಸೊಗಲದ ಶ್ರೀ ಸೋಮೇಶ್ವರ ದೇವಾಲಯದ ಅಂಗಳದಲ್ಲಿ ಸಾವಿರಾರು ಜನರ ಸಂಗಮವಾಗಿತ್ತು.
Vijaya Karnataka Web BEL-15HTP3


ಮುಂಜಾನೆಯಿಂದ ತಂಡೋಪ ತಂಡವಾಗಿ ಆಗಮಿಸಿದ ಜನರು ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಪಡೆದರು. ಶಿವ - ಪಾರ್ವತಿ ವಿವಾಹವಾದ ಸ್ಥಳ ಸೊಗಲದಲ್ಲಿ ಸ್ನಾನ ಮಾಡಿದರೆ ಗಂಗಾ ನದಿಯಲ್ಲಿ ಮಿಂದಂತೆ ಎಂಬ ಭಾವನೆ ಇದೆ.

ಮಹಾರಾಷ್ಟ್ರ, ಗೋವಾ, ಕೇರಳ, ಹೈದ್ರಾಬಾದ ಹಾಗೂ ಕರ್ನಾಟಕದ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರು, ಸೊಗಲದ ವಿಶಾಲ ಗುಡ್ಡಬೆಟ್ಟದಲ್ಲಿ ಕುಳಿತು ಸಜ್ಜಿ ರೊಟ್ಟಿ , ವಿವಿಧ ಚಟ್ನಿ, ಕಾಯಿ ಪಲ್ಲೆಗಳು, ಬಾನ, ಮೊಸರಣ್ಣ , ಸಿಹಿ ಮಾದೋಲಿಯ ಭೋಜನ ಸವಿದು ಸಂತಸಪಟ್ಟರು. ನವಿಲು, ಜಿಂಕೆ, ಪಶು ಪಕ್ಷಿಗಳನ್ನು ನೋಡಿ ಆನಂದಿಸಿದರು. ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವ ದೃಶ್ಯ ಎಲ್ಲೆಡೆ ಸೊಗಸಾಗಿ ಕಂಡಿತು.

ವಾಹನಗಳು, ಚಕ್ಕಡಿಗಳು, ಎಲ್ಲಿ ನೋಡಿದರಲ್ಲಿ ಜನ ಸಾಗರದಿಂದ ಸೊಗಲ ಕ್ಷೇತ್ರ ಕಿಕ್ಕಿರಿದಿತ್ತು. ಪರಶಿವನ ಆವಾಸ ಸ್ಥಾನವಾದ ಸೊಗಲ ಕ್ಷೇತ್ರದ ಪ್ರಾಚೀನ ದೇವಾಲಯ, ಇತರ ದೇವಾಲಯಗಳು, ಜಿಂಕೆವನ, ಹುಲಿ ಗವಿಗೆ ಭೇಟಿ ನೀಡಿ ಆನಂದಿಸಿದರು. ಮುರಗೋಡ ಪಿಎಸ್‌ಐ ಪ್ರಸಾದ ಪಣ್ಣೇಕರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಶ್ರೀ ಸೋಮೇಶ್ವರ ಜೀರ್ಣೋದ್ಧಾರ ಕಮಿಟಿಯಿಂದ ಶಿಸ್ತು ನಿರ್ವಹಣೆ ಕಾರ್ಯ ಕೈಗೊಳ್ಳಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ