ಆ್ಯಪ್ನಗರ

ಪ್ರಾದೇಶಿಕ ಅಸಮತೋಲನ ವಿರುದ್ಧ ಹೋರಾಟ ನಿಲ್ಲದು

ಚಿಕ್ಕೋಡಿ: ಉತ್ತರ ಕರ್ನಾಟಕದ ಬಗ್ಗೆ ನಾನು ಪ್ರಸ್ತಾಪ ...

Vijaya Karnataka 15 Mar 2020, 5:00 am
ಚಿಕ್ಕೋಡಿ: ಉತ್ತರ ಕರ್ನಾಟಕದ ಬಗ್ಗೆ ನಾನು ಪ್ರಸ್ತಾಪ ಮಾಡಿದಾಗಲೆಲ್ಲಪರ, ವಿರೋಧ ಎದುರಾಗುವುದು ಸಹಜ. ಆದರೆ, ಉಕ ಜನರಿಗೆ ಒಳ್ಳೆಯದಾಗಬೇಕು ಎನ್ನುವುದು ನನ್ನ ಉದ್ದೇಶ. ಅಧಿಕಾರ ಇರಲಿ, ಇಲ್ಲದಿರಲಿ ಯಾವುದೇ ಕಾರಣಕ್ಕೂ ಪ್ರಾದೇಶಿಕ ಅಸಮತೋಲನದ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲಎಂದು ಮಾಜಿ ಸಚಿವ, ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.
Vijaya Karnataka Web the fight against regional imbalance is not stop
ಪ್ರಾದೇಶಿಕ ಅಸಮತೋಲನ ವಿರುದ್ಧ ಹೋರಾಟ ನಿಲ್ಲದು


ಶನಿವಾರ ತಮ್ಮ 60ನೇ ಜನ್ಮದಿನದ ನಿಮಿತ್ತ ಮನೆ ದೇವರಾದ ಚಿಕ್ಕೋಡಿ ತಾಲೂಕಿನ ಶಿರಗಾಂವ ಬಸವೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿ ಪೂಜಾಭಿಷೇಕ ಸಲ್ಲಿಸಿ ಅವರು ಮಾತನಾಡಿದರು. ''ನಮಗೆ ಯಾವ ಅಧಿಕಾರ ಸಿಕ್ಕಿದೆ ಎನ್ನುವುದು ಮುಖ್ಯವಲ್ಲ. ದೊರೆತ ಅವಕಾಶವನ್ನು ಜನಪರ ಕಾರ್ಯಗಳಿಗೆ ವಿನಿಯೋಗ ಮಾಡುವುದು ಮುಖ್ಯ. ಇದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ನನ್ನ 35 ವರ್ಷದ ರಾಜಕಾರಣದಲ್ಲಿ8 ಬಾರಿ ಶಾಸಕನಾಗಿ, ಸಚಿವನಾಗಿ ಅಧಿಕಾರದ ಮೂಲಕ ಜನರಿಗೆ ಅನುಕೂಲ ಮಾಡಿದ್ದೇನೆ. ಅಧಿಕಾರ ಶಾಶ್ವತವಲ್ಲ, ಮಾಡಿದ ಕಾರ್ಯಗಳು ಶಾಶ್ವತವೆಂದು ನಂಬಿ ರಾಜಕಾರಣ ಮಾಡಿದ್ದೇನೆ. ಇದರಿಂದಲೇ ಜನ ನನ್ನನ್ನು ಇಷ್ಟೊಂದು ಸಲ ಆಯ್ಕೆಗೊಳಿಸಿದ್ದಾರೆ'', ಎಂದರು. ತಂಗಿಯರಾದ ಪೂರ್ಣಿಮಾ , ಹರ್ಷಾ ಕಣವಿ, ಮಗಳು ಸ್ನೇಹಾ. ಅಳಿಯ ನಿತಿನ್‌, ಸೊಸೆ ಶ್ರುತಿ ನಿಖಿಲ್‌ ಕತ್ತಿ, ಮೊಮ್ಮಕ್ಕಳು ಆರ್ಯನ್‌, ಆರೈನಾ, ಆರವ, ಅಯಾಂಚ್‌ ಮತ್ತು ಬೆಂಗಳೂರು ವಿವಿ ವಿಶ್ರಾಂತಿ ಕುಲಪತಿ ಪ್ರಭುದೇವ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ