ಆ್ಯಪ್ನಗರ

ನಾಲ್ವರು ಬಡ್ಡಿ ದಂಧೆಕೋರರು ಅರೆಸ್ಟ್‌

ನಿಪ್ಪಾಣಿ: ಸಾಲ ಪಡೆದ 3 ಲಕ್ಷ ರೂಪಾಯಿಗೆ 18 ಲಕ್ಷ ...

Vijaya Karnataka 31 Oct 2019, 5:00 am
ನಿಪ್ಪಾಣಿ: ಸಾಲ ಪಡೆದ 3 ಲಕ್ಷ ರೂಪಾಯಿಗೆ 18 ಲಕ್ಷ ರೂ. ಬಡ್ಡಿ ಪಾವತಿಸಿದ್ದರೂ ಬಡ್ಡಿ ದಂಧೆಕೋರರು ನೀಡಿದ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
Vijaya Karnataka Web 30 NPN 2 P_53


ತಾಲೂಕಿನ ಕೋಡ್ನಿ ಗ್ರಾಮದ ರೈತ ರಾವ್‌ಸಾಹೇಬ ಪಾಟೀಲ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು.

ಘಟನೆಯ ಹಿನ್ನೆಲೆ: ರಾವ್‌ಸಾಹೇಬ ಅವರು ಎರಡು ವರ್ಷಗಳ ಹಿಂದೆ ಸಿದ್ದು ಹನುಮಂತ ಬುರುಡ ಎಂಬುವವರಿಂದ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಪಡೆದ ಸಾಲಕ್ಕೆ ತಮ್ಮ ಹೂಲ ಅಡವಿಟ್ಟು ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದರು. ಈವರೆಗೆ ಅವರು ಬಡ್ಡಿ ರೂಪದಲ್ಲಿಸುಮಾರು 18 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ ಎನ್ನಲಾಗಿದೆ. ಆದರೆ, ಈಚೆಗೆ ಬಡ್ಡಿ ಹಣ ನೀಡಿರಲಿಲ್ಲ. ಹೀಗಾಗಿ ಸಿದ್ದು ಬುರುಡ ಮತ್ತು ಅವರ ಕಡೆಯವರು ಬಡ್ಡಿ ಪಾವತಿಸುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದರು.

ಇದರಿಂದ ಬೇಸತ್ತ ರಾವ್‌ಸಾಹೇಬ್‌ ಅ.20ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಮನೆಯವರು ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಅ.21ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್‌ ಠಾಣೆಗೆ ತೆರಳಿದ ರಾವ್‌ಸಾಹೇಬ ಸಿದ್ದು ಬುರುಡ ಮತ್ತು ಅವರ ಸಂಗಡಿಗರ ವಿರುದ್ಧ ದೂರು ದಾಖಲಿಸಿದ್ದರು.

ನ್ಯಾಯಾಂಗ ವಶಕ್ಕೆ:
ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ನಡೆಸಿ ಬಡ್ಡಿ ದಂಧೆಕೋರರನ್ನು ಬಂಧಿಸಿದ್ದಾರೆ. ಸಿದ್ದು ಬುರುಡ, ಅಜಿತ್‌ ಪ್ರಕಾಶ ಮಾನಗಾಂವಕರ, ಶೀತಲ ರಮೇಶ ಭೋಸಲೆ, ಶಂಕರ ಮಧುಕರ ಕಾಂಬಳೆ ಎಂಬುವವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ. ಬಂಧಿತರಿಂದ ಅನಧಿಕೃತ ಬಂದೂಕು, 4 ಗುಂಡು, 20 ಲಕ್ಷ ಮೌಲ್ಯದ 4 ಕಾರ್‌, ಖಾಲಿ ಚೆಕ್‌ ಹಾಗೂ ಸಾಲದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ