ಆ್ಯಪ್ನಗರ

ಮಹಾರಾಷ್ಟ್ರದಿಂದ ತಾಲೂಕಿನ ಗ್ರಾಮಗಳಿಗೆ ಸಂಪರ್ಕಿಸುವ ಕಳ್ಳ ಮಾರ್ಗಗಳು ಬಂದ್‌

ಕಾಗವಾಡ: ನೆರೆಯ ಮಹಾರಾಷ್ಟ್ರದಿಂದ ತಾಲೂಕಿನ ಗ್ರಾಮಗಳಿಗೆ ...

Vijaya Karnataka 13 Jul 2020, 5:00 am
ಕಾಗವಾಡ: ನೆರೆಯ ಮಹಾರಾಷ್ಟ್ರದಿಂದ ತಾಲೂಕಿನ ಗ್ರಾಮಗಳಿಗೆ ಸಂಪರ್ಕಿಸುವ ಕಳ್ಳ ಮಾರ್ಗಗಳನ್ನು ಅಗೆದು ಮುಚ್ಚುವಲ್ಲಿಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web 12 KAGWAD 3 NEWS PHOTO_53
ಕಾಗವಾಡ ಪೊಲೀಸ್‌ ಠಾಣೆ ವತಿಯಿಂದ ಕುರುಂದವಾಡ-ಜುಗೂಳ ಮಾರ್ಗದ ಮಧ್ಯದಲ್ಲಿತಪಾಸಣೆ ಕೇಂದ್ರ ಪ್ರಾರಂಭಿಸಿರುವುದು.


ರಾಜ್ಯದಲ್ಲಿಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಎಲ್ಲಕಳ್ಳ ಮಾರ್ಗಗಳನ್ನು ಪತ್ತೆ ಹಚ್ಚಿ ಮುಚ್ಚುವಂತೆ ಜಿಲ್ಲಾಪೊಲೀಸ್‌ ಅಧಿಕಾರಿಗಳು ಸಿಬ್ಬಂದಿಗೆ ಆದೇಶಿಸಿದ್ದರು. ಬಳಿಕ ಪಿಎಸ್‌ಐ ಹನುಮಂತ ಧರ್ಮಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಳ್ಳ ಮಾರ್ಗಗಳನ್ನು ಅಗೆದು ಬಂದ್‌ ಮಾಡಿದ್ದಾರೆ. ಜುಗೂಳ ಗ್ರಾಮಕ್ಕೆ ಸಂಪರ್ಕಿಸುವ ಕುರುಂದವಾಡ-ಜುಗೂಳ ಮಾರ್ಗದ ಮಧ್ಯದಲ್ಲಿತಗ್ಗು ತೋಡಿ, ಚೆಕ್‌ಪೋಸ್ಟ್‌ ಆರಂಭಿಸಿ ಎಲ್ಲವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಅದೇ ರೀತಿ ಮಂಗಸೂಳಿ- ಅರಗ, ಲೋಕುರ-ನರವಾಡ ಸೇರಿದಂತೆ ಇನ್ನಿತರ ಕಳ್ಳ ಮಾರ್ಗಗಳನ್ನು ಬಂದ್‌ ಮಾಡಲು ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ