ಆ್ಯಪ್ನಗರ

ನೀರು ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಕೊಲೆ

ಯಮಕನಮರಡಿ: ತಮ್ಮ ಜಮೀನಿನಿಂದ ಅಕ್ರಮವಾಗಿ ...

Vijaya Karnataka 11 Apr 2020, 5:00 am
ಯಮಕನಮರಡಿ: ತಮ್ಮ ಜಮೀನಿನಿಂದ ಅಕ್ರಮವಾಗಿ ನೀರು ಹಾಯಿಸಿಕೊಂಡಿದ್ದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಹುಕ್ಕೇರಿ ತಾಲೂಕು ಇಂಗಳಿ ಗ್ರಾಮದ ಸದ್ದಾಂ ಇಸ್ಮಾಯಿಲ್‌ ಅಂಕಲಿ(26) ಅವರನ್ನು ವ್ಯಕ್ತಿಯೊಬ್ಬ ಕುಡಗೋಲಿನಿಂದ ಕೊಚ್ಚಿ ಕೊಲೆ ಗುರುವಾರ ರಾತ್ರಿ ಕೊಲೆ ಮಾಡಿದ್ದಾನೆ.
Vijaya Karnataka Web the man was murdered for questioning the water was stolen
ನೀರು ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಕೊಲೆ


ಅದೇ ಗ್ರಾಮದ ಗಜಬರಸಾಬ ಗುಲಾಬಸಾಬ ಮುಲ್ತಾನಿ ಕೊಲೆ ಆರೋಪಿ. ಕೊಲೆಯಾದ ಸದ್ದಾಂ ಅವರ ಹೊಲದಿಂದ ಆರೋಪಿ ಗಜಬರಸಾಬ ತನ್ನ ಜಮೀನಿಗೆ ಪೈಪ್‌ಲೈನ್‌ ಮೂಲಕ ಕದ್ದು ನೀರು ಹಾಯಿಸಿಕೊಳ್ಳುತ್ತಿದ್ದ. ಗುರುವಾರ ರಾತ್ರಿ ಇದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನೀರು ನಿಲ್ಲಿಸಿದ್ದಕ್ಕಾಗಿ ಕೈಯಲ್ಲಿದ್ದ ಕುಡಗೋಲಿನಿಂದ ಸದ್ದಾಂ ಅವರ ಎಡಗಾಲಿನ ಮೊಣಕಾಲಿಗೆ ಬಲವಾಗಿ ಏಟು ಕೊಟ್ಟಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗೆ ಗೋಕಾಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿಮಾರ್ಗಮಧ್ಯದಲ್ಲೇ ಸದ್ದಾಂ ಮೃತಪಟ್ಟಿದ್ದಾರೆ. ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ