ಆ್ಯಪ್ನಗರ

ಕಾಳಜಿ ಕೇಂದ್ರದಲ್ಲಿ ವಿತರಣೆಯ ಅವ್ಯವಸ್ಥೆ

ಘಟಪ್ರಭಾ: ಪ್ರವಾಹಕ್ಕೆ ತತ್ತರಿಸಿದ ಗೋಕಾಕ ತಾಲೂಕಿನ ...

Vijaya Karnataka 15 Aug 2019, 5:00 am
ಘಟಪ್ರಭಾ: ಪ್ರವಾಹಕ್ಕೆ ತತ್ತರಿಸಿದ ಗೋಕಾಕ ತಾಲೂಕಿನ ಶಿಂಗ್ಳಾಪುರ, ಲೋಳಸೂರ, ನಲ್ಲಾನಟ್ಟಿ, ಬಳೋಬಾಳ, ಬಸಳಿಗುಂದಿ, ಹುಣಶ್ಯಾಳ ಪಿ.ಜಿ., ಬೀರನಗಡ್ಡಿ, ಮಸಗುಪ್ಪಿ ಗ್ರಾಮದ ಜನರು ಇನ್ನೂ ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದಾರೆ.
Vijaya Karnataka Web BEL-14GPB-5


ಕಾಳಜಿ ಕೇಂದ್ರಗಳಲ್ಲಿ ಅವ್ಯವಸ್ಥೆ: ದಾನಿಗಳಿಂದ ಈ ಕೇಂದ್ರಗಳಿಗೆ ಅಕ್ಕಿ, ಬಟ್ಟೆ, ಕಾಳು ಸೇರಿದಂತೆ ಅಗತ್ಯ ವಸ್ತುಗಳ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದರೆ ಇಲ್ಲಿನ ಅವ್ಯವಸ್ಥೆಯಿಂದಾಗಿ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಬೆಳಗ್ಗೆ 10 ಗಂಟೆ ನಂತರ ಅಡುಗೆ ಮಾಡುವುದರಿಂದ ಮಕ್ಕಳು, ಗರ್ಭಿಣಿಯರಿಗೆ ಬೆಳಗ್ಗೆ ಹಾಲು, ಉಪಹಾರದ ವ್ಯವಸ್ಥೆ ಇಲ್ಲದಂತಾಗಿದೆ.

ನೆರಹೊರೆಯ ಗ್ರಾಮಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೆರವು ಬರುತ್ತಿರುವುದರಿಂದ ಅಧಿಕಾರಿಗಳು ನಿರಾಳರಾಗಿದ್ದು, ಕಾಳಜಿ ಕೇಂದ್ರಗಳ ಕಡೆಗೆ ಹೆಚ್ಚಾಗಿ ಬರುತ್ತಿಲ್ಲ. ಅಲ್ಲಿನ ಜನರು ಹಾಗೂ ಕೆಲವು ಯುವಕರು ಸೇವೆ ಮಾಡುತ್ತಿದ್ದಾರೆ. ''ಇಲ್ಲಿಯತನಕ ಸರಕಾರದಿಂದ ಯಾವುದೇ ನೆರವು ಬಂದಿಲ್ಲ. ದಾನಿಗಳು ಕೊಟ್ಟ ವಸ್ತುಗಳನ್ನು ಹಂಚುವಲ್ಲಿ ಕೆಲವು ಮುಖಂಡರು ತಾರತಮ್ಯ ಮಾಡುತ್ತಿದ್ದಾರೆ'', ಎಂದು ಕೆಲವು ಸಂತ್ರಸ್ತರು ಅಳಲು ತೋಡಿಕೊಂಡರು.

ಸಾಂಕ್ರಾಮಿಕ ರೋಗದ ಭೀತಿ: ಶಿಂಗ್ಳಾಪುರ ಗ್ರಾಮದಲ್ಲಿ ಇರುವ 500 ಮನೆಗಳಲ್ಲಿ 350ಕ್ಕೂ ಮನೆಗಳು ನೆಲಸಮವಾಗಿದೆ. ಶಿಂಗ್ಳಾಪುರ, ನಲ್ಲಾನಟ್ಟಿ, ಬಳೋಬಾಳ, ಬಸಳಿಗುಂದಿ ಗ್ರಾಮದಲ್ಲಿ ಪ್ರವಾಹ ಇಳಿದ ನಂತರ ಊರಿನಲ್ಲಿ ಕೊಳೆಚೆ ತುಂಬಿಕೊಂಡು ದುರ್ವಾಸನೆ ಬರುತ್ತಿದೆ. ಇದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಕೆಲವು ಕಡೆ ಎಮ್ಮೆ, ದನ-ಕರುಗಳಿಗೆ ಆಹಾರದ ಕೊರತೆ ಉಂಟಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ.

ಗೋಕಾಕ ತಾಲೂಕಿನಲ್ಲಿ ಬುಧವಾರ ಸತೀಶ ಶುಗರ್ಸ್‌ನ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನೆರೆ ಪೀಡಿತ ಪ್ರದೇಶದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಲೋಳಸೂರ ಸೇತುವೆ ಹಾಗೂ ಅಲ್ಲಿನ ರಸ್ತೆಗಳು ಪ್ರವಾಹಕ್ಕೆ ಸಂಪೂರ್ಣ ಹಾನಿಯಾಗಿದ್ದು , ದುರಸ್ತಿ ಕಾರ್ಯ ಸಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ