ಆ್ಯಪ್ನಗರ

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಬೆಳಗಾವಿ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ...

Vijaya Karnataka 20 Nov 2019, 5:00 am
ಬೆಳಗಾವಿ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಹುಕ್ಕೇರಿ ತಾಲೂಕಿನ ಶಿರೂರ ಡ್ಯಾಂನಲ್ಲಿಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ.
Vijaya Karnataka Web the missing young man was found dead
ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ


ಬೆಳಗಾವಿಯ ಅಮನ್‌ ನಗರದ ತೌಸೀಫ್‌ ಇಮ್ತಿಯಾಜ್‌ ನಾಯಕ್‌ (28) ಮೃತ ವ್ಯಕ್ತಿ. ಶಿರೂರ್‌ ಡ್ಯಾಂ ನೀರಿನಲ್ಲಿತೌಸೀಫ್‌ ಮೃತ ದೇಹ ತೇಲುತ್ತಿರುವುದು ಕಂಡು ಬರುತ್ತಿದ್ದಂತೆ ಯಮಕನಮರಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಮೀಪದಲ್ಲಿಮೃತ ವ್ಯಕ್ತಿಯ ಬೈಕ್‌ ಕೂಡ ಪತ್ತೆಯಾಗಿದೆ. ಹೀಗಾಗಿ ತೌಸೀಫ್‌ ಸಾವಿನ ಕುರಿತು ಸಂದೇಹವಿರುವುದಾಗಿ ತೌಸೀಫ್‌ ಕುಟುಂಬ ಸದಸ್ಯರು ದೂರಿನಲ್ಲಿದಾಖಲಿಸಿದ್ದಾರೆ.

ಕಳೆದ 8 ವರ್ಷಗಳಿಂದ ದುಬೈನಲ್ಲಿನೌಕರಿ ಮಾಡುತ್ತಿದ್ದ ತೌಸೀಫ್‌ ರಜೆ ಸಿಕ್ಕಾಗ ಬೆಳಗಾವಿಗೆ ಬಂದು ಹೋಗುತ್ತಿದ್ದ. ಈತನ ಮದುವೆ ನ.18ರಂದೇ ನಿಶ್ಚಯವಾಗಿತ್ತು. ಮದುವೆ ಆಮಂತ್ರಣ ಪತ್ರಿಕೆಗಳನ್ನೂ ವಿತರಿಸಲಾಗಿತ್ತು.

ಈ ನಡುವೆ ನ.14 ರಂದು ಬೈಕ್‌ ಮೇಲೆ ಮನೆಯಿಂದ ಹೊರ ಹೋದ ತೌಸೀಫ್‌ ಮರಳಿ ಬರದೆ ಕಾಣೆಯಾಗಿದ್ದ. ಈ ಕುರಿತು ಕುಟುಂಬ ಸದಸ್ಯರು ಕೂಡ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿನಾಪತ್ತೆ ದೂರು ದಾಖಲಿಸಿದ್ದರು. ಯಮಕನಮರಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ