ಆ್ಯಪ್ನಗರ

ಅಸುನೀಗಿದ ಮಂಗನಿಗೆ ಮಾನವೀಯತೆಯ ವಿದಾಯ

ತೆಲಸಂಗ : ಮಂಗಳವಾರ ಬೆಳಗ್ಗೆ ಗ್ರಾಮದಲ್ಲಿ ಮಂಗಗಳು ಕಚ್ಚಾಡಿ ಮನೆಯ ಕುಂಬಿಯಿಂದ ಕುಂಬಿಗೆ ...

Vijaya Karnataka 27 Mar 2019, 5:00 am
ತೆಲಸಂಗ : ಮಂಗಳವಾರ ಬೆಳಗ್ಗೆ ಗ್ರಾಮದಲ್ಲಿ ಮಂಗಗಳು ಕಚ್ಚಾಡಿ ಮನೆಯ ಕುಂಬಿಯಿಂದ ಕುಂಬಿಗೆ ಜಿಗಿಯುವ ವೇಳೆ ತಗಡು ತಗಲಿ ಮಂಗವೊಂದು ಅಸುನೀಗಿದ ಘಟನೆ ನಡೆದಿದೆ.
Vijaya Karnataka Web BEL-26TELSANG1


ಮಾನವೀಯತೆಗೆ ಮರುಗಿದ ಜನರು ಗಾಯಗೊಂಡು ರಕ್ತ ಸುರಿಯುತ್ತಿದ್ದ ಮಂಗಕ್ಕೆ ಚಿಕಿತ್ಸೆ ಕೊಡಿಸಲು ಮುಂದಾದರು. ಆದರೆ ಬಹಳಷ್ಟು ರಕ್ತಸ್ರಾವವಾದ್ದರಿಂದ ಸ್ಥಳದಲ್ಲಿಯೇ ಮಂಗ ಪ್ರಾಣ ಬಿಟ್ಟಿದೆ. ತಕ್ಷ ಣವೇ ಸೇರಿದ ಕೆಲ ಯುವಕರು ಪ್ರಾಣ ಬಿಟ್ಟ ಮಂಗವನ್ನು ಸ್ನಾನ ಮಾಡಿಸಿ ಗ್ರಾಮದ ಮುಖ್ಯ ಬಜಾರದಲ್ಲಿನ ಲಕ್ಷ್ಮೀ ದೇವಸ್ಥಾನದ ಮುಂದೆ ಸಾರ್ವಜನಿಕರ ದರ್ಶನಕ್ಕೆ ಕೂಡಿಸಿದರು.

ಕ್ಷ ಣಾರ್ಧದಲ್ಲಿಯೇ ಮಂಗ ಸಾವಿನ ಸುದ್ದಿ ಗ್ರಾಮದೆಲ್ಲೆಡೆ ಹರಡಿ ತಂಡೋಪತಂಡವಾಗಿ ಜನ ಬಂದು ದರ್ಶನ ಪಡೆದು ನಮಸ್ಕರಿಸತೊಡಗಿದರು. ಬೆಳಗಿನ 8ಗಂಟೆಯಿಂದ ಮಧ್ಯಾಹ್ನ 1ಗಂಟೆಯತನಕ ದರ್ಶನ ಮಾಡುತ್ತಿದ್ದವರ ಸರದಿ ನಿರಂತರವಾಗಿತ್ತು. ಮಂಗದ ಕಳೇಬರದ ಎದುರು ಸಂತರು ಅಭಂಗಗಳನ್ನು ಹಾಡಿ ಭಕ್ತಿಯ ಸಮರ್ಪಿಸಿದರು. ದರ್ಶನಕ್ಕೆ ಆಗಮಿಸಿದ ಜನರು ಊದಿನಕಡ್ಡಿ, ಕಾಯಿ, ಕರ್ಪೂರ ಬೆಳಗುವ ಮೂಲಕ ಭಕ್ತಿಯ ನಮನ ಸಲ್ಲಿಸಿದರು.

1ಗಂಟೆಗೆ ಅಲಂಕೃತ ಟ್ರ್ಯಾಕ್ಟರ್‌ ಮೇಲೆ ಮಂಗದ ಶವ ಇಟ್ಟು ಜಾಂಜ್‌ಪತಕದೊಂದಿಗೆ ಗ್ರಾಮದ ಮುಖ್ಯ ಬಜಾರದಿಂದ ಹೊರವಲಯದಲ್ಲಿನ ಹನುಮಾನ್‌ ದೇವಸ್ಥಾನದವರೆಗೆ ಭವ್ಯ ಮೆರವಣಿಯಲ್ಲಿ ತೆರಳಿ ಹನುಮಾನ ದೇವಸ್ಥಾನದ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಹಿರೇಮಠದ ವೀರೇಶ್ವರ ದೇವರು ಹಾಗೂ ಗಣ್ಯರು ಶವದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ