ಆ್ಯಪ್ನಗರ

ಸುಪಾರಿ ಜಗಳದಲ್ಲಿಸ್ನೇಹಿತರಿಂದಲೇ ಯುವಕನ ಕೊಲೆ

ಇಚಲಕರಂಜಿ: ನಗರದ ಶಹಾಪುರದ ಅರಗೆಮಳಾ ಪರಿಸರದಲ್ಲಿ ನೇಕಾರಿಕೆ

Vijaya Karnataka 29 Dec 2019, 5:00 am
ಇಚಲಕರಂಜಿ: ನಗರದ ಶಹಾಪುರದ ಅರಗೆಮಳಾ ಪರಿಸರದಲ್ಲಿನೇಕಾರಿಕೆ ಮಾಡಿಕೊಂಡಿದ್ದ ಯುವಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
Vijaya Karnataka Web 28ICH2_53
ಹೈದರ್‌ ಶಹಾ ನೂರ್‌ ಕಲಾವಂತ


ಹೈದರ್‌ ಶಹಾ ನೂರ್‌ ಕಲಾವಂತ (24) ಹತ್ಯೆಗೊಳಗಾದವ. ಆತನ ಇಬ್ಬರು ಸ್ನೇಹಿತರೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ಗಣೇಶ ನಾರಾಯಣ ಇಂಗಳೆ (23) ಹಾಗೂ ಯೋಗೇಶ ಹಣಮಂತ ಶಿಂಧೆ (23) ಎಂಬಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಹೈದರ್‌ನ ಶವವನ್ನು ಬೈಕ್‌ ಮೂಲಕ ಒಯ್ಯುತ್ತಿದ್ದಾಗ ಗೃಹರಕ್ಷಕ ದಳದ ಜವಾನ ಹಾಗೂ ನಾಗರಿಕರು ಸಂದೇಹಗೊಂಡು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಹೈದರ್‌ ಕೆಲಸಮಾಡುವ ಸ್ಥಳದಲ್ಲಿಆತನ ಮೊಬೈಲ್‌ ಕಳುವಾಗಿತ್ತು. ಕಳುವಿನ ಶಂಕಿತ ವ್ಯಕ್ತಿಯನ್ನು ಥಳಿಸಲು ಮಿತ್ರರಾದ ಗಣೇಶ ಹಾಗೂ ಯೋಗೇಶ್‌ಗೆ ಹೈದರ್‌ 5 ಸಾವಿರ ನಗದು ಹಾಗೂ ಮದ್ಯ ಸುಪಾರಿಯಾಗಿ ನೀಡುವುದಾಗಿ ವಾಗ್ದಾನ ಮಾಡಿದ್ದನೆನ್ನಲಾಗಿದೆ. ಹೈದರ್‌ನ ಆಜ್ಞೆಯಂತೆ ಶುಕ್ರವಾರ ಸಂಜೆ ಮೊಬೈಲ್‌ ಕಳುವು ಶಂಕಿತನನ್ನು ಥಳಿಸಲು ಇಬ್ಬರೂ ತೆರಳಿದಾಗ ಅಲ್ಲಿಯ ಸಾರ್ವಜನಿಕರೇ ಇಬ್ಬರಿಗೂ ಥಳಿಸಿ ಓಡಿಸಿದ್ದರು.

ಇಷ್ಟರ ಮಧ್ಯೆಯೂ ತಮ್ಮ ಕೆಲಸ ಮಾಡಿದ ಆರೋಪಿತರು ನಂತರ ಹೈದರ್‌ನಲ್ಲಿಸುಪಾರಿ ಹಣ ಕೇಳಿದಾಗ ಹೈದರ್‌ ನಿರಾಕರಿಸಿದ್ದು ಮೂವರ ಮಧ್ಯೆ ಜಗಳ ನಡೆದಿತ್ತೆನ್ನಲಾಗಿದೆ. ಈ ವೇಳೆ ಪೇವರ್‌ ಬ್ಲಾಕ್‌ ಹಾಗೂ ಕಲ್ಲಿನಿಂದ ಯೋಗೇಶ ಹಾಗೂ ಗಣೇಶ ಸೇರಿ ಹೈದರನ ಮೇಲೆ ಹಲ್ಲೆಮಾಡಿ ಕೊಲೆಗೈದಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಪರ ಪೊಲೀಸ್‌ ಅಧೀಕ್ಷಕ ಶ್ರೀನಿವಾಸ ಘಾಡಗೆ ಪೊಲೀಸ್‌ ಉಪಾಧೀಕ್ಷಕ ಗಣೇಶ ಬಿರಾದಾರ ಭೇಟಿ ನೀಡಿ ಮಾಹಿತಿ ಪಡೆದಿದ್ದು ಗ್ರಾಮಾಂತರ ಪೋಲಿಸ್‌ ಠಾಣೆಯ ಸಹಾಯಕ ಪೊಲೀಸ್‌ ನಿರೀಕ್ಷಕ ಗಜೇಂದ್ರ ಲೋಹಾರ ಅಧಿಕ ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ