ಆ್ಯಪ್ನಗರ

ಕಚೇರಿ ಕಟ್ಟಡ ಮಾಲೀಕರ ವಶಕ್ಕೆ

ಬೆಳಗಾವಿ: ಬಹುಕೋಟಿ ರೂ...

Vijaya Karnataka 14 Aug 2019, 5:00 am
ಬೆಳಗಾವಿ: ಬಹುಕೋಟಿ ರೂ. ಠೇವಣಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ಆನಂದ ಅಪ್ಪುಗೋಳ ಅವರ ಮಾಲೀಕತ್ವದ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಮತ್ತು ಭೀಮಾಂಬಿಕಾ ಮಹಿಳಾ ಸೊಸೈಟಿ ಕೇಂದ್ರ ಕಚೇರಿ ಕಟ್ಟಡವನ್ನು ಕಟ್ಟಡದ ಮೂಲ ಮಾಲೀಕರು ಮಂಗಳವಾರ ಕಬ್ಜಾ ಪಡೆದುಕೊಂಡಿದ್ದಾರೆ.
Vijaya Karnataka Web BLG-1308-2-52-13SANGOLLI


ರಿಸಲ್ದಾರ ಗಲ್ಲಿಯ ಮಹೇಶ ವೀರುಪಾಕ್ಷಪ್ಪ ಮಹಾಂತಶೆಟ್ಟಿ ಎನ್ನುವವರಿಗೆ ಸೇರಿದ ಕಟ್ಟಡದಲ್ಲಿ ಕಳೆದ 18 ವರ್ಷಗಳಿಂದ ಬಾಡಿಗೆ ಆಧಾರದ ಮೇಲೆ ಸಂಗೊಳ್ಳಿ ರಾಯಣ್ಣ ಮತ್ತು ಭೀಮಾಂಬಿಕಾ ಸೊಸೈಟಿಗೆ ಸಂಬಂಧಿಸಿದ ಕೇಂದ್ರ ಕಚೇರಿ ತೆರೆಯಲಾಗಿತ್ತು. ಆದರೆ, 2017ರಿಂದ ಬಾಡಿಗೆ ಮತ್ತು ಕಚೇರಿಗೆ ಬಳಕೆ ಮಾಡಿದ ವಿದ್ಯುತ್‌ ಬಿಲ್‌ ಕೂಡ ಪಾವತಿಸಿರಲಿಲ್ಲ. ಇದೇ ಕಾರಣದಿಂದ 2018ರಲ್ಲಿ 3ನೇ ಸಿವಿಲ್‌ ನ್ಯಾಯಾಲಯದಲ್ಲಿ ಕಟ್ಟಡ ಮಾಲೀಕರು ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಕಟ್ಟಡದ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯತೆ ಹಿನ್ನೆಲೆಯಲ್ಲಿ ಬಾಡಿಗೆ ಮತ್ತು ಪರಿಹಾರ ಪ್ರರಕಣದ ವಿಚಾರಣೆ ಕಾಯ್ದಿರಿಸಿ ಕಟ್ಟಡ ಮಾಲೀಕರಿಗೆ ಕಬ್ಜಾ ನೀಡುವಂತೆ ಒಂದು ತಿಂಗಳ ಕಾಲಾವಧಿ ನೀಡಿ ಜೂನ್‌ ತಿಂಗಳಲ್ಲಿ ನಿರ್ದೇಶನ ನೀಡಿತ್ತು. ಆದರೆ, ಸೊಸೈಟಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಕಟ್ಟಡ ಮಾಲೀಕ ಮಹೇಶ ಮಹಾಂತಶೆಟ್ಟಿ ಅವರಿಗೆ ಕಟ್ಟಡವನ್ನು ಕಬ್ಜಾ ನೀಡಿದ್ದಾರೆ ಎಂದು ಕಟ್ಟಡ ಮಾಲೀಕರ ಪರ ವಕೀಲ ಸಚಿನ್‌ ಶಿವಣ್ಣವರ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ