ಆ್ಯಪ್ನಗರ

ರೇಡಿಯೇಟರ್‌ನ ಬಿಸಿನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಬೆಳಗಾವಿ : ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ವ್ಯಾಪ್ತಿಯಲ್ಲಿ ಶಾಲಾ ವಾಹನದ ಎಂಜಿನ್‌ನ ರೇಡಿಯೇಟರ್‌ನಲ್ಲಿದ್ದ ಬಿಸಿನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳು ...

Vijaya Karnataka 23 Nov 2018, 5:00 am
ಬೆಳಗಾವಿ : ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ವ್ಯಾಪ್ತಿಯಲ್ಲಿ ಶಾಲಾ ವಾಹನದ ಎಂಜಿನ್‌ನ ರೇಡಿಯೇಟರ್‌ನಲ್ಲಿದ್ದ ಬಿಸಿನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳು ಗುರುವಾರ ಗಾಯಗೊಂಡಿದ್ದಾರೆ.
Vijaya Karnataka Web the radiators hot water struck four students
ರೇಡಿಯೇಟರ್‌ನ ಬಿಸಿನೀರು ಸಿಡಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ


ಸಂಕೇಶ್ವರ ಪಟ್ಟಣದ ಎಸ್‌ಡಿವಿಎಸ್‌ ಆಂಗ್ಲ ಮಾಧ್ಯಮ ಶಾಲೆಯ ಲಚಿಕೇತ ಕೋಳಿ (6), ಸಿದ್ಧಾರ್ಥ ಪಾಟೀಲ (5), ಶ್ರೀಶೈಲಕುಮಾರ ಮಠಪತಿ (4) ಹಾಗೂ ಅನುರಾಧಾ ಮಠಪತಿ(6) ಗಾಯಗೊಂಡಿರುವ ವಿದ್ಯಾರ್ಥಿಗಳು.

ಎಂದಿನಂತೆ ಸಂಕೇಶ್ವರ ಪಟ್ಟಣ ವ್ಯಾಪ್ತಿಯ ಗ್ರಾಮಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಾಗ ಶಾಲಾ ವಾಹನದ ಹಿಂಭಾಗದಲ್ಲಿರುವ ಎಂಜಿನ್‌ನ ರೇಡಿಯೇಟರ್‌ ಮುಚ್ಚಳ ಏಕಾಏಕಿ ತೆರೆದಿದ್ದರಿಂದ ಈ ಘಟನೆ ನಡೆದಿದೆ. ನಾಲ್ವರು ಮಕ್ಕಳಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು ಪ್ರಕರಣ ದಾಖಲಾಗಿಲ್ಲ ಎಂದು ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ