ಆ್ಯಪ್ನಗರ

ಆರ್‌ಎಸ್‌ಎಸ್‌ ದೇಶ ಸೇವಕರನ್ನು ಹುಟ್ಟುಹಾಕಿದೆ

ಯಕ್ಸಂಬಾ: ಹೆಡಗೆವಾರ ಅವರ ರಾಷ್ಟ್ರೀಯತೆಯ ...

Vijaya Karnataka 4 Nov 2019, 5:00 am
ಯಕ್ಸಂಬಾ: ಹೆಡಗೆವಾರ ಅವರ ರಾಷ್ಟ್ರೀಯತೆಯ ಚಿಂತನೆ, ಸಿದ್ಧಾಂತದೊಂದಿಗೆ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು 1948ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ, 1993ರ ಲಾತೂರ ಭೂಕಂಪ ಹಾಗೂ 2019ರ ಪ್ರವಾಹ ಸಂದರ್ಭದಲ್ಲಿಸೇವೆ ಮಾಡುವ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸುವ ಕಾರ್ಯಕರ್ತರನ್ನು ಹುಟ್ಟುಹಾಕಿದೆ ಎಂದು ಆರ್‌ಎಸ್‌ಎಸ್‌ನ ಬೆಳಗಾವಿ ವಿಭಾಗ ಬೌದ್ಧಿಕ ಪ್ರಮುಖ ರಾಮಚಂದ್ರ ಎಡಕೆ ಹೇಳಿದರು.
Vijaya Karnataka Web 3EXA3_53


ಅವರು, ಪಟ್ಟಣದಲ್ಲಿರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘಟಕದಿಂದ ಆಯೋಜಿಸಲಾಗಿದ್ದ ಹೋಬಳಿ ಸಮಾವೇಶ ಹಾಗೂ ಪಥಸಂಚಲನ ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದರು.

ಯಾರಿಗೂ ಧಿಕ್ಕಾರ, ಜಯಕಾರಗಳನ್ನು ಹಾಕದೆ, ಜಾತಿ-ಮತ ಭೇದಭಾವ ಬದಿಗಿಟ್ಟು ಭಾರತದ ಶಕ್ತಿಯನ್ನು ತೋರಿಸುವ ಏಕೈಕ ಸಂಘಟನೆ ಆರ್‌ಎಸ್‌ಎಸ್‌ ಎಂದು ಅವರು ಪ್ರತಿಪಾದಿಸಿದರು.

ಸಾನ್ನಿಧ್ಯ ವಹಿಸಿದ್ದ ನಿಪ್ಪಾಣಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಮಾವೇಶದ ನಿಮಿತ್ತ ಪಟ್ಟಣದ ಗೆಳೆಯರ ಬಳಗ ಶಾರದಾಲಯದಿಂದ ಚನ್ನಮ್ಮಾ ವೃತ್ತ, ಹಳೇ ಬಸ್‌ ನಿಲ್ದಾಣ, ಬಸವವೃತ್ತದಿಂದ ಕೊನೆಗೆ ಬೀರೇಶ್ವರ ಮಂದಿರದವರೆಗೆ ಸ್ವಯಂಸೇವಕರಿಂದ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸುನೀತಾ ಜಾಧವ, ಜಯಾನಂದ ಜಾಧವ, ಲಕ್ಷತ್ರ್ಮಣ ಕಬಾಡೆ, ಅಪ್ಪಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ