ಆ್ಯಪ್ನಗರ

ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಸಿಕ್ಕಿಲ್ಲ; ಬಿಜೆಪಿ ಶಾಸಕ ಬೇಸರ!

ಸಿಎಂ ಬಸವರಾಜ ಬೊಮ್ಮಾಯಿ, ಸ್ಪೀಕರ್ ಬಸವರಾಜ ಕಾಗೇರಿ, ಉಪಾಧ್ಯಕ್ಷರು ಎಲ್ಲರೂ ಉತ್ತರ ಕರ್ನಾಟಕ ಭಾಗದವರೇ ಆದರೂ, ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಮಂಗಳವಾರ, ಬುಧವಾರ ಚರ್ಚೆಗೆ ಅವಕಾಶ ಕೊಡ್ತೇವೆ ಎಂದರೂ ಕೊಟ್ಟಿಲ್ಲ. ನಿನ್ನೆಯೂ ಕೇಳಿದ್ದೆ. ಆದರೂ ಕೊಟ್ಟಿಲ್ಲ. ಇವತ್ತು ವಿಧಾನಸಭೆ ಪ್ರವೇಶ ಮಾಡಿದ ತಕ್ಷಣ ಸ್ಪೀಕರ್‌ಗೆ ಕೇಳುತ್ತೇನೆ ಎಂದು ಎ.ಎಸ್‌ ನಡಹಳ್ಳಿ ಹೇಳಿದರು.

Vijaya Karnataka Web 24 Dec 2021, 12:22 pm
ಬೆಳಗಾವಿ: ಹತ್ತು ದಿನಗಳ ಕಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತಾಗಿ ಚರ್ಚೆ ಆಗಿಲ್ಲ ಎಂದು ಆಡಳಿತ ಪಕ್ಷದ ಶಾಸಕ ಎ.ಎಸ್ ನಡಹಳ್ಳಿ ಬೇಸರ ವ್ಯಕ್ತಪಡಿಸಿದರು.
Vijaya Karnataka Web As Nadadhalli


ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ಉತ್ತರ ಕರ್ನಾಟಕ ಜನರಿಗೆ ನ್ಯಾಯ ಕೊಡುವ ಉದ್ದೇಶದಿಂದ ಅಧಿವೇಶನ ನಡೆದಿದೆ. ಆದರೆ ಹತ್ತು ದಿನಗಳಿಂದ ಚರ್ಚೆ ಮಾಡಲು ಅವಕಾಶ ಕೊಟ್ಟಿಲ್ಲ. ಇದು ಅತ್ಯಂತ ನೋವಿನ ಸಂಗತಿ ಎಂದರು. ಸಿಎಂ ಬಸವರಾಜ ಬೊಮ್ಮಾಯಿ, ಸ್ಪೀಕರ್ ಬಸವರಾಜ ಕಾಗೇರಿ, ಉಪಾಧ್ಯಕ್ಷರು ಎಲ್ಲರೂ ಉತ್ತರ ಕರ್ನಾಟಕ ಭಾಗದವರೇ ಆದರೂ, ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಮಂಗಳವಾರ, ಬುಧವಾರ ಚರ್ಚೆಗೆ ಅವಕಾಶ ಕೊಡ್ತೇವೆ ಎಂದರೂ ಕೊಟ್ಟಿಲ್ಲ. ನಿನ್ನೆಯೂ ಕೇಳಿದ್ದೆ. ಆದರೂ ಕೊಟ್ಟಿಲ್ಲ. ಇವತ್ತು ವಿಧಾನಸಭೆ ಪ್ರವೇಶ ಮಾಡಿದ ತಕ್ಷಣ ಸ್ಪೀಕರ್‌ಗೆ ಕೇಳುತ್ತೇನೆ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಗಮನಹರಿಸಿ: ಶಾಸಕರಿಂದ ಒಕ್ಕೊರಲ ಕೂಗು
ಉತ್ತರ ಕರ್ನಾಟಕ ಭಾಗದ ಜನರು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದೇವೆ. ಸುವರ್ಣ ಸೌಧ ಕಟ್ಟಿರೋದೆ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಮಾಡಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ರಾಜಕೀಯವಾಗಿ ಚರ್ಚೆ ಮಾಡೋದಾದರೆ ಯಾಕೆ ಇಲ್ಲಿ ಅಧಿವೇಶನ ನಡೆಸಬೇಕು? ಎಂದು ಪ್ರಶ್ನಿಸಿದರು. ನೀರಾವರಿ ಸಮಸ್ಯೆ, ಬಡತನ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಹಿಂದುಳಿದ ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿವೆ. ಈ ವ್ಯವಸ್ಥೆಯಿಂದ ನೋವಾಗಿದೆ. ನಾನು ಯಾವುದೇ ಪಕ್ಷದ ಪರವಾಗಿ, ವಿರೋಧವಾಗಿಲ್ಲ ಮಾತಾಡುತ್ತಿಲ್ಲ. ಅವಕಾಶ ನೀಡದೆ ಇದ್ದರೆ ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಇದೇ ವಿಚಾರವಾಗಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಮೂರು ದಿನಗಳ ಕಾಲ ಬೇರೆ ಚರ್ಚೆಗಳಾಗಿವೆ. ಬೇಡದ ವಿಷಯಗಳ ಚರ್ಚೆಗೆ ಕಾಲಹರಣವಾಗಿದೆ. ಕಾಂಗ್ರೆಸ್‌ನವರು ಧರಣಿ ಪ್ರೊಟೆಸ್ಟ್ ಮಾಡಿ ಕಾಲ ಕಳೆದ್ರು. ನಮಗೂ ನೋವಿದೆ ಹೆಚ್ಚಿನ ಚರ್ಚೆಯಾಗಬೇಕಿತ್ತು. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆಯಾಗಬೇಕಿತ್ತು. ಸರ್ಕಾರ ಇರುವುದೇ ವಿಧೇಯಕ ತರೋಕೆ. ಆದರೆ ಕಾಲಹರಣ ಮಾಡಿದ್ದು ಸರಿಯಲ್ಲ. ಮುಂದೆ ಸರಿಪಡಿಸಿಕೊಳ್ಳೋಣ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ