ಆ್ಯಪ್ನಗರ

ಸವದತ್ತಿ ಪುರಸಭೆ ಮತ್ತೊಮ್ಮೆ ಕಮಲದ ಮಡಿಲಿಗೆ

ಸವದತ್ತಿ: ಸ್ಥಳೀಯ ಯಲ್ಲಮ್ಮಾ ಪುರಸಭೆಗೆ ಬಿಜೆಪಿಯ ಅತಿ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಕಮಲ ಪ್ರಾಬಲ್ಯ ಸಾಧಿಸಿದೆ...

Vijaya Karnataka 4 Sep 2018, 5:00 am
ಸವದತ್ತಿ: ಸ್ಥಳೀಯ ಯಲ್ಲಮ್ಮಾ ಪುರಸಭೆಗೆ ಬಿಜೆಪಿಯ ಅತಿ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಕಮಲ ಪ್ರಾಬಲ್ಯ ಸಾಧಿಸಿದೆ.
Vijaya Karnataka Web BEL-3SDT28


ಪುರಸಭೆಯ 27 ಸ್ಥಾನಗಳಿಗೆ 56 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು. ಬಿಜೆಪಿಯ 17, ಕಾಂಗ್ರೆಸ್‌ನ 9 ಮತ್ತು ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.

ಶಾಸಕ ಆನಂದ ಮಾಮನಿಯವರ ಪ್ರಯತ್ನಕ್ಕೆ 17 ಸ್ಥಾನಗಳಲ್ಲಿ ಜಯ ಸಿಕ್ಕಿದ್ದು, ಕಾಂಗ್ರೆಸ್‌ನ ವಿಶ್ವಾಸ ವೈದ್ಯ, ಆನಂದ ಚೋಪ್ರಾ, ಸದಾಶಿವ ಕೌಜಲಗಿ ತಂಡ 9 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ.

2013ರಿಂದ 2018ರ ಅವಧಿಯಲ್ಲಿ ಪುರಸಭೆ ಸದಸ್ಯರಾಗಿದ್ದ ಐವರಲ್ಲಿ ಭಾರಿ ಪೈಪೋಟಿಯಲ್ಲಿದ್ದ ವಾರ್ಡ್‌ 5ರ ಕಾಂಗ್ರೆಸ್‌ ಅಭ್ಯರ್ಥಿ, ಪುರಸಭೆ ಮಾಜಿ ಸದಸ್ಯ ಕಲಿಮಸಾಬ ಚೂರಿಖಾನ ಪರಾಭವಗೊಂಡರೆ, ವಾರ್ಡ್‌ 15ರಲ್ಲಿ ಬಿಜೆಪಿ ಅಭ್ಯರ್ಥಿ, ಪುರಸಭೆ ಮಾಜಿ ಉಪಾಧ್ಯಕ್ಷ ಸುಭಾಸ ರಜಪೂತ ಹಾಗೂ ವಾರ್ಡ್‌ 17ರಲ್ಲಿ ಪುರಸಭೆ ಮಾಜಿ ಸದಸ್ಯ ಕಲ್ಲಪ್ಪ ಪೂಜೇರ ಪರಾಭವಗೊಂಡಿದ್ದಾರೆ. ವಾರ್ಡ 21ರಲ್ಲಿ ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಕಾರದಗಿ ಹಾಗೂ ವಾರ್ಡ್‌ 14ರಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಮೌಲಾಸಾಬ ತಬ್ಬಲಜಿ ಮರು ಆಯ್ಕೆಯಾಗಿದ್ದಾರೆ.

ವಿಶೇಷ ಆಯ್ಕೆ: ವಾರ್ಡ್‌ 18ರಲ್ಲಿನ ಬಿಜೆಪಿ ಅಭ್ಯರ್ಥಿ ಶಿವನಗೌಡ ಪಾಟೀಲ ಮತ್ತು ಕಾಂಗ್ರೆಸ್‌ನ ನಾರಾಯಣಪ್ರಸಾದ ಸುಭೇದಾರ ಸಮನಾಗಿ 344 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಶಿವನಗೌಡ ಪಾಟೀಲರಿಗೆ 2 ಅಂಚೆ ಮತಗಳು ಬಂದಿದ್ದರಿಂದ ಅವರು ಆಯ್ಕೆಯಾಗಿದ್ದಾರೆ. ವಾರ್ಡ್‌ 19ರ ಬಿಜೆಪಿ ಅಭ್ಯರ್ಥಿ ಗಂಗಾ ಪಟ್ಟಣಶೆಟ್ಟಿ ಕಾಂಗ್ರೆಸ್‌ನ ಆರತಿ ಕೌಜಲಗಿಯವರಿಗಿಂತ 500 ಮತಗಳ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದಾರೆ.

ವಿಜಯೋತ್ಸವ ಆಚರಣೆ: ಪುರಸಭೆಗೆ ಬಿಜೆಪಿಯಿಂದ ಆಯ್ಕೆಯಾದ 17 ಸದಸ್ಯರು ಶಾಸಕ ಆನಂದ ಮಾಮನಿ ಅವರೊಂದಿಗೆ ವಿಜಯೋತ್ಸವ ಆಚರಿಸಿದರು.

ಈ ವೇಳೆ ಶಾಸಕ ಮಾಮನಿ ಮಾತನಾಡಿ, ಮತದಾರರು ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಗೆ ಮತ್ತೆ ಅಧಿಕಾರ ನೀಡಿದ್ದಾರೆ. ಪ್ರತಿಪಕ್ಷ ದವರು ಮೀಸಲಾತಿಯಲ್ಲಿ ಏನೇ ಕುತಂತ್ರ ಮಾಡಿದರೂ ಮತದಾರರು ಅವರಿಗೆ ತಕ್ಕ ಪಾಠ ಕಲಿಸಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಜನರ ಆಶಯಗಳಿಗೆ ಕುಂದು ಬರದಂತೆ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲಾಗುವುದು. ಇಲ್ಲಿನ ಪುರಸಭೆಯನ್ನು ಮಾದರಿಯಾಗಿಸಲಾಗುವುದು ಎಂದು ಭರವಸೆ ನೀಡಿದರು.

ಶಿವಾನಂದ ಹೂಗಾರ, ರಾಜಶೇಖರ ಕಾರದಗಿ, ಪ್ರವೀಣ ಪಟ್ಟಣಶೆಟ್ಟಿ, ದೀಪಕ ಜಾನ್ವೇಕರ, ಮೌಲಾಸಾಬ ತಬ್ಬಲಜಿ, ಶಿವನಗೌಡ ಪಾಟೀಲ, ಅರ್ಜುನ ಅಮ್ಮೋಜಿ, ಮಹಾಂತೇಶ ಪಂಪನವರ, ಶ್ರೀಶೈಲ ಕತ್ತಿ, ನಿಂಗಪ್ಪ ಬೆಟಸೂರ, ಯಲ್ಲಪ್ಪ ರುದ್ರಾಕ್ಷಿ, ಸುನಿಲ ಸುಳ್ಳದ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ