ಸುಕುಮಾರ ಬನ್ನೂರೆ ಕಾಗವಾಡ
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡು ಶತಮಾನ ಪೂರೈಸಿದ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದಲ್ಲಿನ ಸರಕಾರಿ ಹಿರಿಯ ಕನ್ನಡ, ಮರಾಠಿ ಪ್ರಾಥಮಿಕ ಶಾಲೆಯ ಕೋಣೆಗಳು ಶಿಥಿಲಗೊಂಡಿದ್ದು, ಇಂತಹ ಅಪಾಯಕಾರಿ ಕೋಣೆಗಳಲ್ಲಿಯೇ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಮರಾಠಿ ಹಾಗೂ ಕನ್ನಡ ಭಾಷೆಯ ಒಟ್ಟು 700 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 26 ಕೋಣೆಗಳಿದ್ದು, ಇದರಲ್ಲಿಯ 8 ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ಹಳೆಯ ಕೋಣೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಚಾವಣಿಯ ಕೆಲ ಭಾಗಗಳು ಕುಸಿದು ಬೀಳುತ್ತಿವೆ. ಓದುತ್ತಿರುವಾಗ ಮಕ್ಕಳ ಮೇಲೆ ಕೆಲ ಭಾಗ ಕುಸಿದರೆ ಅನಾಹುತ ಸಂಭವಿಸಲಿದೆ. ಈ ಬಗ್ಗೆ ಶಾಲೆ ಮುಖ್ಯಾಧ್ಯಾಪಕ ರಾಜಾರಾಮ ಜಾಯಗೊಂಡೆ, ಪ್ರಭಾರಿ ಮುಖ್ಯಾಧ್ಯಾಪಕ ಪ್ರಕಾಶ ಸಾಂಗಾವೆ ಅವರು ಡಿಡಿಪಿಐ ಮತ್ತು ಕಾಗವಾಡ ಬಿಇಒ ಅವರಿಗೆ ಅನೇಕ ಬಾರಿ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ಶೈಕ್ಷ ಣಿಕ ಜಿಲ್ಲೆಯ ಆಗಿನ ಡಿಡಿಪಿಐ ಮಣ್ಣಿಕೇರಿ ಹಾಗೂ ಈಗಿನ ಡಿಡಿಪಿಐ ಎಂ.ಜಿ.ದಾಸರ್ ಖುದ್ದಾಗಿ ಪರಿಶೀಲಿಸಿದ್ದಾರೆ. ಇದೇ ರೀತಿ ಈ ಮೊದಲಿನ ಬಿಇಒಗಳು ಮತ್ತು ಇಂದಿನ ಬಿಇಒ ಎ.ಎಸ್. ಜೋಡಗೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪಾಲಕರು, ಎಸ್ಡಿಎಂಸಿ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆ ನಿರ್ಮಾಣವಾಗಿ 134 ವರ್ಷ ಗತಿಸಿದ್ದು, ಶತಮಾನೋತ್ಸವ ಕಂಡಿದೆ. ಈ ಶಾಲೆಯಲ್ಲಿ ಕಲಿತವರು ಅಧಿಕಾರಿಗಳು, ಜನಪ್ರತಿನಿಧಿಗಳು ಆಗಿದ್ದಾರೆ. ಆದರೆ ಶಾಲೆಯ ಸ್ಥಿತಿಯಲ್ಲಿ ಯಾವುದೇ ಧನಾತ್ಮಕ ಬದಲಾವಣೆಯಾಗಿಲ್ಲ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಶಾಲೆ ಅಭಿವೃದ್ಧಿಗೊಳಿಸಿ ಮಕ್ಕಳ ಸುರಕ್ಷ ತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಉಗಾರಖುರ್ದ ಶಾಲೆಯ ಕೋಣೆಗಳು ಶಿಥಿಲಗೊಂಡಿದ್ದು, ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ.
-ಶಶಿಕಾಂತ ಕಾಂಬಳೆ, ಉಗಾರ ಖುರ್ದ ಪುರಸಭೆ ಅಧ್ಯಕ್ಷ .
10 ವರ್ಷಗಳಿಂದ ಈ ಶಾಲೆಯಲ್ಲಿ ಮುಖ್ಯಾಧ್ಯಾಪಕನಾಗಿದ್ದೇನೆ. ಇಲ್ಲಿನ ಸಮಸ್ಯೆ ಕುರಿತು ಆಗಿನಿಂದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದೇನೆ. ಇದರಲ್ಲಿಯ ಕೆಲ ಕೋಣೆಗಳಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅನಾಹುತವಾಗದಂತೆ ದಿನನಿತ್ಯ ದೇವರಿಗೆ ಬೇಡಿಕೊಳ್ಳುತ್ತೇನೆ.
-ರಾಜಾರಾಮ ಜಾಯಗೊಂಡೆ, ಮುಖ್ಯಾಧ್ಯಾಪಕ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ.
ಶಿಥಿಲ ಕೋಣೆಗಳ ದುರಸ್ತಿಗೆ 2017 ಮತ್ತು 2018ರ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಈವರೆಗೆ ಮಂಜೂರಾತಿ ಬಂದಿಲ್ಲ. ಶಿಥಿಲ ಕೋಣೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸದೆ ಬೇರೆ ಕೋಣೆಗಳಲ್ಲಿ ಕಲಿಸಲು ಆದೇಶಿಸಿದ್ದೇನೆ.
-ಎ.ಎಸ್.ಜೋಡಗೇರಿ, ಕಾಗವಾಡ ಬಿಇಒ.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡು ಶತಮಾನ ಪೂರೈಸಿದ ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದಲ್ಲಿನ ಸರಕಾರಿ ಹಿರಿಯ ಕನ್ನಡ, ಮರಾಠಿ ಪ್ರಾಥಮಿಕ ಶಾಲೆಯ ಕೋಣೆಗಳು ಶಿಥಿಲಗೊಂಡಿದ್ದು, ಇಂತಹ ಅಪಾಯಕಾರಿ ಕೋಣೆಗಳಲ್ಲಿಯೇ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಮರಾಠಿ ಹಾಗೂ ಕನ್ನಡ ಭಾಷೆಯ ಒಟ್ಟು 700 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 26 ಕೋಣೆಗಳಿದ್ದು, ಇದರಲ್ಲಿಯ 8 ಕೋಣೆಗಳು ಸಂಪೂರ್ಣ ಶಿಥಿಲಗೊಂಡಿವೆ. ಹಳೆಯ ಕೋಣೆಗಳು ಮಳೆಗಾಲದಲ್ಲಿ ಸೋರುತ್ತಿವೆ. ಚಾವಣಿಯ ಕೆಲ ಭಾಗಗಳು ಕುಸಿದು ಬೀಳುತ್ತಿವೆ. ಓದುತ್ತಿರುವಾಗ ಮಕ್ಕಳ ಮೇಲೆ ಕೆಲ ಭಾಗ ಕುಸಿದರೆ ಅನಾಹುತ ಸಂಭವಿಸಲಿದೆ. ಈ ಬಗ್ಗೆ ಶಾಲೆ ಮುಖ್ಯಾಧ್ಯಾಪಕ ರಾಜಾರಾಮ ಜಾಯಗೊಂಡೆ, ಪ್ರಭಾರಿ ಮುಖ್ಯಾಧ್ಯಾಪಕ ಪ್ರಕಾಶ ಸಾಂಗಾವೆ ಅವರು ಡಿಡಿಪಿಐ ಮತ್ತು ಕಾಗವಾಡ ಬಿಇಒ ಅವರಿಗೆ ಅನೇಕ ಬಾರಿ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ಶೈಕ್ಷ ಣಿಕ ಜಿಲ್ಲೆಯ ಆಗಿನ ಡಿಡಿಪಿಐ ಮಣ್ಣಿಕೇರಿ ಹಾಗೂ ಈಗಿನ ಡಿಡಿಪಿಐ ಎಂ.ಜಿ.ದಾಸರ್ ಖುದ್ದಾಗಿ ಪರಿಶೀಲಿಸಿದ್ದಾರೆ. ಇದೇ ರೀತಿ ಈ ಮೊದಲಿನ ಬಿಇಒಗಳು ಮತ್ತು ಇಂದಿನ ಬಿಇಒ ಎ.ಎಸ್. ಜೋಡಗೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪಾಲಕರು, ಎಸ್ಡಿಎಂಸಿ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆ ನಿರ್ಮಾಣವಾಗಿ 134 ವರ್ಷ ಗತಿಸಿದ್ದು, ಶತಮಾನೋತ್ಸವ ಕಂಡಿದೆ. ಈ ಶಾಲೆಯಲ್ಲಿ ಕಲಿತವರು ಅಧಿಕಾರಿಗಳು, ಜನಪ್ರತಿನಿಧಿಗಳು ಆಗಿದ್ದಾರೆ. ಆದರೆ ಶಾಲೆಯ ಸ್ಥಿತಿಯಲ್ಲಿ ಯಾವುದೇ ಧನಾತ್ಮಕ ಬದಲಾವಣೆಯಾಗಿಲ್ಲ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಶಾಲೆ ಅಭಿವೃದ್ಧಿಗೊಳಿಸಿ ಮಕ್ಕಳ ಸುರಕ್ಷ ತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಉಗಾರಖುರ್ದ ಶಾಲೆಯ ಕೋಣೆಗಳು ಶಿಥಿಲಗೊಂಡಿದ್ದು, ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ.
-ಶಶಿಕಾಂತ ಕಾಂಬಳೆ, ಉಗಾರ ಖುರ್ದ ಪುರಸಭೆ ಅಧ್ಯಕ್ಷ .
10 ವರ್ಷಗಳಿಂದ ಈ ಶಾಲೆಯಲ್ಲಿ ಮುಖ್ಯಾಧ್ಯಾಪಕನಾಗಿದ್ದೇನೆ. ಇಲ್ಲಿನ ಸಮಸ್ಯೆ ಕುರಿತು ಆಗಿನಿಂದ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿದ್ದೇನೆ. ಇದರಲ್ಲಿಯ ಕೆಲ ಕೋಣೆಗಳಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅನಾಹುತವಾಗದಂತೆ ದಿನನಿತ್ಯ ದೇವರಿಗೆ ಬೇಡಿಕೊಳ್ಳುತ್ತೇನೆ.
-ರಾಜಾರಾಮ ಜಾಯಗೊಂಡೆ, ಮುಖ್ಯಾಧ್ಯಾಪಕ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ.
ಶಿಥಿಲ ಕೋಣೆಗಳ ದುರಸ್ತಿಗೆ 2017 ಮತ್ತು 2018ರ ಸಾಲಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಈವರೆಗೆ ಮಂಜೂರಾತಿ ಬಂದಿಲ್ಲ. ಶಿಥಿಲ ಕೋಣೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸದೆ ಬೇರೆ ಕೋಣೆಗಳಲ್ಲಿ ಕಲಿಸಲು ಆದೇಶಿಸಿದ್ದೇನೆ.
-ಎ.ಎಸ್.ಜೋಡಗೇರಿ, ಕಾಗವಾಡ ಬಿಇಒ.