ಆ್ಯಪ್ನಗರ

ಸಮಾದೇವಿ ಮಂದಿರದ ಬಾಗಿಲಿಗೆ ಬೆಳ್ಳಿ ಕವಚ

ಬೆಳಗಾವಿ: ನಗರದ ಗ್ರಾಮ ದೇವತೆ ಶ್ರೀ ಸಮಾದೇವಿ ಮಂದಿರದ ಗರ್ಭಗುಡಿ ಹೆಬ್ಬಾಗಿಲು, ಬಾಗಿಲ ಚೌಕಟ್ಟು ಮತ್ತು ಕದಗಳಿಗೆ ಬೆಳ್ಳಿಯ ಕವಚ ತೊಡಿಸಲಾಗುತ್ತಿದೆ...

Vijaya Karnataka 16 Feb 2019, 5:00 am
ಬೆಳಗಾವಿ : ನಗರದ ಗ್ರಾಮ ದೇವತೆ ಶ್ರೀ ಸಮಾದೇವಿ ಮಂದಿರದ ಗರ್ಭಗುಡಿ ಹೆಬ್ಬಾಗಿಲು, ಬಾಗಿಲ ಚೌಕಟ್ಟು ಮತ್ತು ಕದಗಳಿಗೆ ಬೆಳ್ಳಿಯ ಕವಚ ತೊಡಿಸಲಾಗುತ್ತಿದೆ.
Vijaya Karnataka Web BLG-1502-2-52-15RAJU-3


ಲಕ್ಷಾಂತರ ರೂ. ಗಳ ವೆಚ್ಚದಲ್ಲಿ ಸುಮಾರು 50 ಕೆಜಿ ಬೆಳ್ಳಿ ಬಳಕೆ ಮಾಡಿದ್ದು, ಸಾಂಗಲಿಯ ಪ್ರಸಿದ್ಧ ಕುಶಲಕರ್ಮಿ ಪುರುಷೋತ್ತಮ ಗಡಗಿಳ ವಂಶಸ್ಥರು ಕೆಲಸ ನಡೆಸಿದ್ದಾರೆ. ಸಮಾದೇವಿಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಭಕ್ತರು ಇದ್ದಾರೆ. ವಾರ್ಷಿಕ ಲಕ್ಷಾಂತರ ಭಕ್ತರು ಮಂದಿರಕ್ಕೆ ಭೇಟಿ ನೀಡುತ್ತಾರೆ.

ಈಗ ದೇವಿ ಮಂದಿರದ ಅಲಂಕಾರಿಕ ಕೆಲಸ ಕೈಗೆತ್ತಿಕೊಂಡಿರುವುದರಿಂದ ಭಕ್ತರು, ದಾನಿಗಳು ಕೈಜೋಡಿಸಬೇಕು. 50 ಸಾವಿರ ಇಲ್ಲವೆ ಅದಕ್ಕೂ ಹೆಚ್ಚಿಗೆ ದೇಣಿಗೆ ನೀಡಿದವರ ಹೆಸರನ್ನು ದೇವಸ್ಥಾನದ ವಿಶೇಷ ಫಲಕದಲ್ಲಿ ನಮೂದಿಸಲಾಗುತ್ತದೆ ಎಂದು ಶ್ರೀ ಸಮಾದೇವಿ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಬಾಪುಸಾಹೇಬ ಅನಗೋಳಕರ್‌ ಮತ್ತು ಆಡಳಿತ ಮಂಡಳಿಯವರು ಕೋರಿದ್ದಾರೆ.

ದೇಣಿಗೆಯನ್ನು ಮಂದಿರದ ಕಾರ್ಯಾಲಯದಲ್ಲಿ ನೀಡಿ ರಶೀದಿ ಪಡೆಯಬೇಕು. ಇಲ್ಲವೆ ಸಾರಸ್ವತ ಕೋ-ಆಪ್‌ ಬ್ಯಾಂಕ್‌ನ ಸಮಾದೇವಿ ಗಲ್ಲಿ ಶಾಖೆಯಲ್ಲಿ ಸೇವಿಂಗ್ಸ್‌ ಅಕೌಂಟ್‌ ಸಂಖ್ಯೆ 042200100017543, ಐಎಫ್‌ಎಸ್‌ಸಿ-ಎಸ್‌ಆರ್‌ಸಿಬಿ 0000042 ಇಲ್ಲಿಗೆ ತಮ್ಮ ಹಣವನ್ನು ಸಂದಾಯ ಮಾಡಬೇಕು.

ಹೆಚ್ಚಿನ ಮಾಹಿತಿಗೆ ಬಾಪುಸಾಹೇಬ ಅನಗೋಳಕರ್‌ ಮೊ: 9483272178, ಮಧುಸೂದನ ಕಿನಾರಿ ಮೊ: 9449736515, ಸುಭಾಷ ಅಂಗಡಿ ಮೊ: 9900672944, ಕಾಶಿನಾಥ ಕುದಳೆ ಮೊ: 9731321996, ಸೋಮಶೇಖರ ನಾಕಾಡಿ ಮೊ: 9449030763, ಅಶೋಕ ಮುರಕುಂಬಿ ಮೊ: 9449692210, ಕೆ.ಆರ್‌. ಬಾಬಶೇಟ್‌ ಮೊ: 9481737806 ಇಲ್ಲಿಗೆ ಸಂಪರ್ಕಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ