ಆ್ಯಪ್ನಗರ

ಮುಂದುವರಿದ ಪೌರಕಾರ್ಮಿಕರ ಹೋರಾಟ

ಬೆಳಗಾವಿ: ಇಲ್ಲಿನ ಪೌರಕಾರ್ಮಿಕರ ವಸತಿ ಬೇಡಿಕೆ ಹೋರಾಟ ಮತ್ತೆ ಬಿಕ್ಕಟ್ಟಿಗೆ ಸಿಲುಕಿದ್ದು, ಹೋರಾಟಗಾರರ ಧರಣಿ ಸತ್ಯಾಗ್ರಹ ಮುಂದುವರಿದಿದೆ...

Vijaya Karnataka 31 May 2019, 5:00 am
ಬೆಳಗಾವಿ : ಇಲ್ಲಿನ ಪೌರಕಾರ್ಮಿಕರ ವಸತಿ ಬೇಡಿಕೆ ಹೋರಾಟ ಮತ್ತೆ ಬಿಕ್ಕಟ್ಟಿಗೆ ಸಿಲುಕಿದ್ದು, ಹೋರಾಟಗಾರರ ಧರಣಿ ಸತ್ಯಾಗ್ರಹ ಮುಂದುವರಿದಿದೆ.
Vijaya Karnataka Web BLG-3005-2-52-30RAJU-8


ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ನಡೆದ ಸಭೆ ಭರವಸೆಯನ್ನು ಪೌರಕಾರ್ಮಿಕ ನಾಯಕರು ಒಪ್ಪಿಕೊಂಡು ಈಗ ಪರಕಾರ್ಮಿಕರು ವಾಸವಾಗಿರುವ ಶಹಾಪುರ ಆನಂದವಾಡಿಯ ಕ್ವಾ ಟ್ರಸ್‌ನಲ್ಲಿನ ಹಳೆ ಮನೆಗಳನ್ನು ಖಾಲಿ ಮಾಡಲು ಸಮ್ಮತಿಸಿದ್ದರು. ಅದರಂತೆ ಆಡಳಿತ ಇಂದು ಹಳೆ ಮನೆಗಳನ್ನು ನೆಲಸಮ ಮಾಡಲು ಹೋಯಿತು.

ಆದರೆ ಧರಣಿ ನಿರತ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನೀಡಿದ ಭರವಸೆಯಂತೆ ಹಳೆ ಮನೆ ತೆರವು ಮಾಡಲಿರುವ ಕರ್ತವ್ಯ ನಿರತ ಮತ್ತು ನಿವೃತ್ತ ಪೌರಕಾರ್ಮಿಕರಿಗೆ ಕ್ವಾಟ್ರಸ್‌ದಲ್ಲಿರುವ ಇತರೆ ಮನೆಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಬೇಕು. ಈಗ ನೆಲಸಮ ಮಾಡಲಿರುವ ಮನೆಗಳು ಪುನಃ ನಿರ್ಮಾಣಗೊಂಡನಂತರ ಈ ಮೊದಲು ವಾಸ ಇದ್ದವರಿಗೆನೇ ಕೊಡಬೇಕು ಎನ್ನುವ ನಿರ್ಣಯ ಪ್ರತಿಯನ್ನು ಕೊಟ್ಟರೆ ಮಾತ್ರ ತೆರವು ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ.

ನಾವು ಯಾರದೇ ಬಾಯಿಮಾತಿನ ಭವರಸೆಗಳನ್ನು ನಂಬಲು ಸಿದ್ಧರಿಲ್ಲ. ಅವು ಕಾನೂನಾತ್ಮಕವಾಗಿ ದಾಖಲೆ ಆಗುವುದಿಲ್ಲ. ನಮಗೆ ಲಿಖಿತ ರೂಪದಲ್ಲೇ ಭರವಸೆ ಬೇಕು. ಇಲ್ಲದಿದ್ದರೆ ನಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಪಾಲಿಕೆಯ ದಕ್ಷಿಣ ಭಾಗದ ಮುಖ್ಯ ಎಂಜಿನಿಯರ್‌ ಲಕ್ಷ್ಮೇ ನಿಪ್ಪಾಣಿಕರ್‌ ಹಾಗೂ ಇತರೆ ಹಿರಿಯ ಅಧಿಕಾರಿಗಳು ತಡರಾತ್ರಿಯವರೆಗೆ ನಡೆಸಿದ ಮನವೊಲಿಕೆ ಚಟುವಟಿಕೆ ಫಲಿಸಲಿಲ್ಲ. ಪೌರಕಾರ್ಮಿಕರೆಲ್ಲರೂ ಒಟ್ಟಾಗಿ ನಿಂತು ಬೇಡಿಕೆ ಮಂಡಿಸುತ್ತಿದ್ದಾರೆ.

ಅಖಿಲ ಭಾರತೀಯ ಸಫಾಯಿ ಮಜದೂರ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ವಿಜಯ ನೀರಗಟ್ಟಿ, ಯಲ್ಲೇಶ ಬಚ್ಚಲಪುರಿ, ದೀಪಕ್‌ ವಾಘೇಲಾ, ರವಿ ಮೇಲಾಪುರಿ, ನಾರಾಯಣ ಅನಂತಪುರ, ಮಹೇಶ ಮಾಳಗಿ, ನರಸಿಂಗ್‌ ದಾಸನಗಾರ ಹಾಗೂ ಇತರೆ ಪೌರಕಾರ್ಮಿಕ ನಾಯಕರು ಹೋರಾಟದ ನೇತೃತ್ವ ವಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ