ಆ್ಯಪ್ನಗರ

ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಯಾಗದ ಟ್ರೀ ಪಾರ್ಕ್

ರುದ್ರೇಶ ಸಂಪಗಾವಿ ಇಟಗಿ ನಂದಗಡ-ಖಾನಾಪುರ ನಡುವಿನ ಕೌಂದಲ್‌ ಗ್ರಾಮದ ಹೆದ್ದಾರಿ ...

Vijaya Karnataka 30 Sep 2019, 5:00 am
ರುದ್ರೇಶ ಸಂಪಗಾವಿ ಇಟಗಿ
Vijaya Karnataka Web 29 ITAGI 1_53

ನಂದಗಡ-ಖಾನಾಪುರ ನಡುವಿನ ಕೌಂದಲ್‌ ಗ್ರಾಮದ ಹೆದ್ದಾರಿ ಪಕ್ಕದಲ್ಲಿಅರಣ್ಯ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಟ್ರೀ ಪಾರ್ಕ್ ಉದ್ಘಾಟನೆ ಭಾಗ್ಯ ಕಾಣದೇ ಬಿಕೋ ಎನ್ನುವಂತಿದೆ.

ಟ್ರೀ ಪಾರ್ಕ್ ಕಾಮಗಾರಿ ಪೂರ್ಣಗೊಂಡು ವರ್ಷ ಪೂರೈಸಿದೆ. ಆದರೆ, ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಅರಣ್ಯ ಇಲಾಖೆ ಉದ್ಘಾಟಿಸದೇ ಹಾಗೇ ಬಿಟ್ಟಿತ್ತು. ಚುನಾವಣೆ ಮುಗಿದ ಬಳಿಕವೂ ಅಧಿಕಾರಿಗಳು ಉದ್ಘಾಟನೆಗೆ ಮುಂದಾಗಿಲ್ಲ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹಲವು ಸಾಮಗ್ರಿಗಳು ತುಕ್ಕು ಹಿಡಿದಿವೆ ಎನ್ನುತ್ತಾರೆ ಸಾರ್ವಜನಿಕರು.

ಏನೇನಿದೆ: 5 ಎಕರೆ ಪ್ರದೇಶದಲ್ಲಿಪ್ರಕೃತಿ ಸೊಬಗಿನ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಅರಣ್ಯದ ಯಾವುದೇ ಗಿಡ-ಮರಗಳಿಗೆ ಹಾನಿ ಮಾಡದೇ ಸಸ್ಯ ರಾಶಿಗಳ ಮಧ್ಯೆ ಔಷಧೀಯ ಸಸಿಗಳನ್ನು ನೆಡಲಾಗಿದೆ. ಒಳಗೆ ಕಾಲಿಟ್ಟರೆ ಜನರಿಗೆ ಜೌಷಧೀಯ ಸಸ್ಯಗಳ ಪರಿಚಯ ಆಗುತ್ತದೆ. ಪಾರ್ಕ್ಗೆ ಬರುವ ಮಕ್ಕಳಿಗೆ ಆಟವಾಡಲು ಮತ್ತು ಸಾಹಸದಲ್ಲಿತೊಡಗಿಕೊಳ್ಳಲು ವಿವಿಧ ಜೋಕಾಲಿಗಳು, ರೋಪ್‌ ವೇ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಅಳವಡಿಸಲಾಗಿದೆ. ಪಾರ್ಕ್ ಒಳಗಡೆ ಒಂದು ಬಂಡೆಯಿದ್ದು, ಸುತ್ತಲಿನ ಗ್ರಾಮಸ್ಥರು ಇದನ್ನು ಹೊಂಡ ದೇವರೆಂದು ಪೂಜಿಸುತ್ತಾರೆ. ಆದರೆ, ಇದುವರೆಗೆ ಲೋಕಾರ್ಪಣೆಗೊಳಿಸದಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಟ್ರೀ ಪಾರ್ಕ್ನಲ್ಲಿಟಿಕೇಟ್‌, ಫುಡ್‌ ಕೋರ್ಟ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಉದ್ಘಾಟಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು.
-ಶಶಿಧರ, ಎಸಿಎಫ್‌ ಖಾನಾಪುರ

ಟ್ರೀ ಪಾರ್ಕ್ ಕಾಮಗಾರಿ ಪೂರ್ಣಗೊಂಡಿದೆ. ತಕ್ಷಣ ಅರಣ್ಯ ಇಲಾಖೆಯವರು ಇದನ್ನು ಲೋಕಾರ್ಪಣೆಗೊಳಿಸಬೇಕು.
- ಜಿತೇಂದ್ರ ಮಾದಾರ, ಜಿಪಂ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ