ಆ್ಯಪ್ನಗರ

ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ

ತೆಲಸಂಗ: ಗ್ರಾಮದ ಮಾಧವಾನಂದ ನಗರದ ತೆಲಸಂಗ ಕ್ರಾಸ್‌ನಲ್ಲಿ ಜಲಕುಂಭದಿಂದ ಸೋರಿಕೆಯಾದ ನೀರು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೊಂದರೆಯಾಗಿದ್ದು ತಕ್ಷ ಣವೇ ...

Vijaya Karnataka 26 Jul 2019, 5:00 am
ತೆಲಸಂಗ : ಗ್ರಾಮದ ಮಾಧವಾನಂದ ನಗರದ ತೆಲಸಂಗ ಕ್ರಾಸ್‌ನಲ್ಲಿ ಜಲಕುಂಭದಿಂದ ಸೋರಿಕೆಯಾದ ನೀರು ರಸ್ತೆಯಲ್ಲಿ ನಿಂತು ಸಂಚಾರಕ್ಕೆ ತೊಂದರೆಯಾಗಿದ್ದು ತಕ್ಷ ಣವೇ ಸರಿಪಡಿಸುವಂತೆ ಇಲ್ಲಿಯ ನಿವಾಸಿಗಳು ಆಗ್ರಹಿಸಿದ್ದಾರೆ.
Vijaya Karnataka Web BEL-25TELSANG1


''ನಮಗೆ ಈ ರಸ್ತೆ ದಾಟಿ ನಡೆದು ಹೋಗುವುದೇ ಕಷ್ಟವಾಗಿದೆ. ನೀರು ನಿಂತು ರಾಡಿಯಾಗಿರುವುದರಿಂದ ಈ ರಸ್ತೆಯಲ್ಲಿ ಬೈಕ್‌ ಹೋಗುವುದು ಕಷ್ಟವಾಗಿದೆ. ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ನಿದ್ರೆ ಮಾಡಲು ಬಿಡುತ್ತಿಲ್ಲ. ಸಾಂಕ್ರಾಮಿಕ ರೋಗದ ಭೀತಿಯೂ ಹೆಚ್ಚಿದೆ'' ಎಂದು ನಾಗರಿಕರು ದೂರಿದ್ದಾರೆ.

ತಕ್ಷ ಣವೇ ರಸ್ತೆಯ ತಗ್ಗು ಭರ್ತಿ ಮಾಡಿ ಸಮಸ್ಯೆ ಪರಿಹರಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ಸ್ಥಳೀಯರಾದ ಮಹ್ಮದ್‌ ಮುಲ್ಲಾ, ಅಣ್ಣಾಸಾಬ ಕೊಟ್ಟಲಗಿ, ಶಿವಮೂರ್ತಿ ಬಾಮಣೆ, ಪ್ರಕಾರ ಇಂಗಳಗಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ