ಆ್ಯಪ್ನಗರ

ಶಿವಜ್ಯೋತಿ ತರುವಾಗ ಯುವಕನ ಸಾವು

ಇಚಲಕರಂಜಿ: ಶಿವಾಜಿ ಜಯಂತಿ ಪ್ರಯುಕ್ತ ಶಿವಜ್ಯೋತಿ ತರುವಾಗ ಅತಿಯಾದ ಉಬ್ಬಸದಿಂದ ಶಹಾಪುರ ಗ್ರಾಮದ ಸೌರಭ ಸಂಭಾಜಿ ಅತಿಗ್ರೆ (21) ಎಂಬ ಯುವಕ ಸೋಮವಾರ ಕುಸಿದು ...

Vijaya Karnataka 7 May 2019, 5:00 am
ಇಚಲಕರಂಜಿ : ಶಿವಾಜಿ ಜಯಂತಿ ಪ್ರಯುಕ್ತ ಶಿವಜ್ಯೋತಿ ತರುವಾಗ ಅತಿಯಾದ ಉಬ್ಬಸದಿಂದ ಶಹಾಪುರ ಗ್ರಾಮದ ಸೌರಭ ಸಂಭಾಜಿ ಅತಿಗ್ರೆ (21) ಎಂಬ ಯುವಕ ಸೋಮವಾರ ಕುಸಿದು ಮೃತಪಟ್ಟಿದ್ದಾನೆ.
Vijaya Karnataka Web BEL-6ICH8


ನಗರದ ಕೇಂದ್ರ ಬಸ್‌ ನಿಲ್ದಾಣದ ಹತ್ತಿರವಿರುವ ಬೃಹತ್‌ ಶಿವಛತ್ರಪತಿ ಪ್ರತಿಮೆಗೆ ಶಿವಜ್ಯೋತಿ ತರಲು ವಿವಿಧ ಸ್ಥಳಗಳಿಂದ ಬೆಳಗ್ಗಿನಿಂದಲೇ ಜನದಟ್ಟಣೆಯಾಗಿತ್ತು. ಶಹಾಪುರದ ಜಯ ಶಿವರಾಯ ತರುಣ ಮಂಡಳದ ವತಿಯಿಂದ ಪ್ರತಿವರ್ಷದಂತೆ ಶಿವಜ್ಯೋತಿಯನ್ನು ಒಯ್ಯುವ ಸಲುವಾಗಿ ಸೌರಭ ಅತಿಗ್ರೆ ತಮ್ಮ ಮಿತ್ರರೊಂದಿಗೆ ಆಗಮಿಸಿ ಜ್ಯೋತಿಯೊಂದಿಗೆ ಪುನಃ ಶಹಾಪುರದತ್ತ ಓಡುತ್ತ ಹೋಗುವಾಗ ನೆಲಕ್ಕೆ ಕುಸಿದ ದೃಶ್ಯ ಕಂಡ ಸ್ನೇಹಿತರು ತಕ್ಷ ಣ ಆತನನ್ನು ಐಜಿಎಂ ಆಸ್ಪತ್ರೆಗೆ ದಾಖಲಿಸಿದರು. ಆದರೆ ಉಪಚಾರಕ್ಕೆ ಮೊದಲು ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ