ಆ್ಯಪ್ನಗರ

‘ದಿ ಯಂಗ್‌ ಸ್ಪಿರಿಟ್‌’ ಕೃತಿ ಬಿಡುಗಡೆ

ಉಗರಗೋಳ: ಶಾಲಾ ಹಂತದಲ್ಲಿ ಗಳಿಸುವ ವಿದ್ಯೆಗೆ ಮೇಲು, ಕೀಳು ಎನ್ನುವ ಭೇದವಿಲ್ಲ...

Vijaya Karnataka 19 Jul 2019, 5:00 am
ಉಗರಗೋಳ : ಶಾಲಾ ಹಂತದಲ್ಲಿ ಗಳಿಸುವ ವಿದ್ಯೆಗೆ ಮೇಲು, ಕೀಳು ಎನ್ನುವ ಭೇದವಿಲ್ಲ. ಬಡವನಾಗಲೀ, ಶ್ರೀಮಂತನಾಗಲೀ ಸತತ ಅಧ್ಯಯನದಿಂದ ವಿದ್ಯೆಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಿದೆ. ಅದು ಮುಂದೆ ಶ್ರೀಮಂತವಾಗಿಯೇ ಇರುತ್ತದೆ ಎಂದು ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ ಹೇಳಿದರು.
Vijaya Karnataka Web BEL-18UGL1


ಅವರು, ಗ್ರಾಮದ ರೇಣುಕಾ ದೇವಿ ಹೈಸ್ಕೂಲ್‌ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಯುವ ಬರಹಗಾರ ನದೀಮ ಬಾಬುಸಾಬ ಮುಲ್ಲಾ ಅವರ 'ದಿ ಯಂಗ್‌ ಸ್ಪಿರಿಟ್‌' ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಐಎಎಸ್‌ ಹಾಗೂ ಕೆಎಎಸ್‌ ಓದುವ ವಿದ್ಯಾರ್ಥಿಗಳಿಗೆ ದೇವಸ್ಥಾನ ಟ್ರಸ್ಟ್‌ ವತಿಯಿಂದ ಸಹಾಯ ಹಾಗೂ ತಮ್ಮಿಂದ ಪ್ರತಿ ಸಾರಿ 10 ಸಾವಿರ ರೂ. ಧನಸಹಾಯ ನೀಡುವ ಭರವಸೆ ನೀಡಿದರು.

ಉಗರಗೋಳದ ನೂರಾನಿ ಚಾಮಿಯಾ ಮಜೀದ್‌ನ ಮೌಲ್ವಿ ಮೌಲಾನಾ ಶರೀಫ್‌ ಬುಡನಖಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವ ಬರಹಗಾರ ನದೀಮ ಬಾಬುಸಾಬ ಮುಲ್ಲಾ ಅವರ 'ದಿ ಯಂಗ್‌ ಸ್ಪಿರಿಟ್‌' ಇಂಗ್ಲಿಷ್‌ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ನಿವೃತ್ತ ಮುಖ್ಯಶಿಕ್ಷಕ ವೈ.ಆರ್‌. ಚನ್ನಪ್ಪಗೌಡ್ರ, ನಿವೃತ್ತ ಉಪಪ್ರಾಚಾರ್ಯ ಪ್ರಭಾವತಿ ತುರಮರಿ, ಗ್ರಾಪಂ ಉಪಾಧ್ಯಕ್ಷೆ ಬಸಮ್ಮ ಗುಡೆನ್ನವರ ಮುಖ್ಯಶಿಕ್ಷಕಿ ಆರ್‌.ಪಿ. ಪವಾರ, ಆನಂದ ಬೋವಿ, ಪಿಡಿಒ ಮಹೇಶ ತೇಗೂರ, ಪಿಡಿಒ ಪ್ರಶಾಂತ ತೋಟಗಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ