ಆ್ಯಪ್ನಗರ

ಒಂದೇ ದಿನ ನಾಲ್ಕು ಕಡೆ ಕಳ್ಳತನ

ಒಂದೇ ದಿನ ನಾಲ್ಕು ಕಡೆ ಕಳ್ಳತನ - ಬೆಳಗಾವಿ ನಗರ, ಬೆಳಕೂಡ, ಮುಗಳಖೋಡಗಳಲ್ಲಿ ಘಟನೆ - ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ ಕಳ್ಳರು ವಿಕ ಸುದ್ದಿಲೋಕ ಬೆಳಗಾವಿ ಬೆಳಗಾವಿ ನಗರ ...

Vijaya Karnataka 28 Jul 2018, 5:00 am
ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬೆಳಕೂಡ, ಮುಗಳಖೋಡ ಮೊದಲಾದೆಡೆ ಗುರುವಾರ ರಾತ್ರಿ ಕಳ್ಳರು ಕೈಚಳಕ ತೋರಿದ್ದು, ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ್ದಾರೆ.
Vijaya Karnataka Web BLG-2707-2-52-27mahesh5


ಬೆಳಗಾವಿ ನಗರದಲ್ಲಿ ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳು ನಡೆದಿವೆ. ಬಸವೇಶ್ವರ ವೃತ್ತ ಬಳಿಯ ಶಾಂತಪ್ಪಣ್ಣ ಮಿರ್ಜಿ ಅರ್ಬನ್‌ ಸೊಸೈಟಿಯ ಶಟರ್‌ ಎತ್ತಿದ ಕಳ್ಳರು ಒಳ ನುಗ್ಗಲು ವಿಫಲ ಯತ್ನ ನಡೆಸಿದ್ದಾರೆ. ಶಟರ್‌ ಒಳಗಡೆ ಇರುವ ಗಾಜಿನ ಬಾಗಿಲು ಒಡೆದಿದ್ದಾರಾದರೂ ಗಾಜಿನ ಚೂರುಗಳ ಕಾರಣ ಒಳಗೆ ಹೋಗದೆ ಮರಳಿದ್ದಾರೆ. ಗಾಜಿನ ಚೂರು ಚುಚ್ಚಿದ ಪರಿಣಾಮ ರಕ್ತ ಸೋರಿಕೆಯಾಗಿರುವುದು ಸ್ಥಳದಲ್ಲಿ ಕಂಡು ಬಂದಿದೆ.

ಡಿಸಿಪಿ ಮಹಾನಿಂಗ ನಂದಗಾಂವಿ ಮತ್ತು ಟಿಳಕವಾಡಿ ಪಿಐ ಮೌನೇಶ ದೇಸೂರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಸೊಸೈಟಿ ಆಡಳಿತ ಮಂಡಳಿ ಟಿಳಕವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಇನ್ನೊಂದು ಪ್ರಕರಣದಲ್ಲಿ, ಪಾಟೀಲ ಗಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ಶನಿ ದೇವಸ್ಥಾನದಲ್ಲೂ ಕಳ್ಳತನ ನಡೆದಿದೆ. ಕಬ್ಬಿಣದ ಸರಳು ಬಳಸಿ ದೇವರ ಮೂರ್ತಿ ಮೇಲಿದ್ದ 45 ಸಾವಿರ ರೂ.ಮೌಲ್ಯದ 20 ಗ್ರಾಂ ತೂಕದ ಚಿನ್ನದ ಹಾರ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ದೇವಸ್ಥಾನದ ಅರ್ಚಕ ಆನಂದ ವಿಶ್ವನಾಥ ಅಧ್ಯಾಪಕ ಖಡೇ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ