ಆ್ಯಪ್ನಗರ

ಚನ್ನಮ್ಮನ ಕಿತ್ತೂರು ಪಟ್ಟಣದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಕಳವು

ಚನ್ನಮ್ಮನ ಕಿತ್ತೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ - 4ರ ಪಕ್ಕದಲ್ಲಿರುವ ...

Vijaya Karnataka 11 Nov 2020, 5:00 am
ಚನ್ನಮ್ಮನ ಕಿತ್ತೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ - 4ರ ಪಕ್ಕದಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಶನಿವಾರ ನಸುಕಿನ ಜಾವ ಕಳ್ಳತನವಾಗಿದೆ.
Vijaya Karnataka Web 10KTR02_53
ಸಿಸಿ ಟಿವಿಯಲ್ಲಿಸೆರೆಯಾದ ಕಳ್ಳತನದ ದೃಶ್ಯ.


ದೇವಸ್ಥಾನಕ್ಕೆ ಹಾಕಿದ ಬೀಗವನ್ನು ಗುದ್ದಲಿಯಿಂದ ಮುರಿದು, ಕಾಣಿಕೆ ಹುಂಡಿ ಒಡೆದು ಹಣ ಮತ್ತು ಸಾಯಿಬಾಬಾ ಮೂರ್ತಿಯ ಪಕ್ಕದಲ್ಲಿಇದ್ದ ಎರಡು ಹಿತ್ತಾಳೆಯ ಚಿಕ್ಕ ದೇವರ ಮೂರ್ತಿಗಳನ್ನು ಕಳವು ಮಾಡಲಾಗಿದೆ. ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿಸೆರೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಮುಖ ಶಿವಾನಂದ ಜಕಾತಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ