ಆ್ಯಪ್ನಗರ

ಆಡುಗಳ ಕಳ್ಳತನ: ನಾಲ್ವರ ಬಂಧನ

ಯರಗಟ್ಟಿ ಸಮೀಪದ ಅಕ್ಕಿಸಾಗರ ಗ್ರಾಮದಲ್ಲಿ ಆಡುಗಳ ಕಳ್ಳತನ ...

Vijaya Karnataka 25 Oct 2019, 5:00 am
ಬೈಲಹೊಂಗಲ: ಯರಗಟ್ಟಿ ಸಮೀಪದ ಅಕ್ಕಿಸಾಗರ ಗ್ರಾಮದಲ್ಲಿಆಡುಗಳ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web theft of sheep four arrested
ಆಡುಗಳ ಕಳ್ಳತನ: ನಾಲ್ವರ ಬಂಧನ


ಹುಬ್ಬಳ್ಳಿಯ ವಿನಾಯಕ ಮೈಸೂರ (19), ಚಂದ್ರಶೇಖರ ಗುದ್ದಿ (19), ಸಚಿನ ಪಾಟೀಲ (22), ಸಂತೋಷ ನರಗುಂದ (24) ಬಂಧಿತರು, ಇವರಿಂದ 15 ಸಾವಿರ ರೂ.ನಗದು ಹಾಗೂ ಕ್ರೂಸರ್‌ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳು ಈ ಹಿಂದೆ ನಾಲ್ಕು ಆಡುಗಳ ಕಳ್ಳತನ ಮಾಡಿದ್ದರು.

ಈ ಹಿನ್ನೆಲೆಯಲ್ಲಿಪಿಎಸ್‌ಐ ಪ್ರವೀಣ ಗಂಗೊಳ್ಳಿ, ಸಿಬ್ಬಂದಿ ಸಂತೋಷ ದೇಯಣ್ಣವರ, ವಿಜಯ ಸಕ್ರಿ, ಎಚ್‌.ಆರ್‌.ನ್ಯಾಮಗೌಡರ, ಬಸವರಾಜ ಅರಳಿಕಟ್ಟಿ, ರಮೇಶ ಸಸಾಲಟ್ಟಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಮುರಗೋಡ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ