ಆ್ಯಪ್ನಗರ

ಬೆಳಗಾವಿ ಜಿಲ್ಲೆ ವಿಭಜಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ; ಡಿಸಿಎಂ ಸವದಿ ಸ್ಪಷ್ಟನೆ

ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾವನೆ ರಾಜ್ಯ ಸರಕಾರದ ಮುಂದೆ ಇಲ್ಲ ಎಂದು ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Vijaya Karnataka Web 4 Oct 2019, 11:45 am
ಬೆಳಗಾವಿ: ಸದ್ಯ ಬೆಳಗಾವಿ ಜಿಲ್ಲೆ ವಿಭಜಿಸುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web laxman


ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ಬೆಳಗಾವಿ ಜಿಲ್ಲಾ ವಿಭಜನೆಗೆ ಕಾಲ ಕೂಡಿ ಬಂದರೆ ಎಲ್ಲಾ ಗೊಂದಲಗಳನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳುತ್ತೇವೆಂದು ಹೇಳುವ ಮೂಲಕ ಜಿಲ್ಲಾ ವಿಭಜನೆ ಗೊಂದಲಕ್ಕೆ ತೆರೆ ಎಳೆದರು.

ಚಿಕ್ಕೋಡಿ, ಗೋಕಾಕ ಮತ್ತು ಅಥಣಿ ಜಿಲ್ಲೆ ರಚನೆಯ ಕೂಗು ಕೇಳಿ ಬಂದಿದೆ. ಅದರಂತೆ, ಬೆಳಗಾವಿ ಅಖಂಡ ಜಿಲ್ಲೆಯಾಗಿಯೇ ಉಳಿಯಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಜನಾಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಹೇಳಿದರು.

ಸಿಎಂಗೆ ತಟ್ಟಿದ ಜಿಲ್ಲಾ ವಿಭಜನೆ ಬಿಸಿ

ಇದೇ ವೇಳೆ, ಪೆಬ್ರವರಿ ತಿಂಗಳಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.

ಬೆಳಗಾವಿಗೆ ಯಡಿಯೂರಪ್ಪ ಭೇಟಿ: ಸಿಎಂ ಅಳಿಯ - ಪೊಲೀಸರ ನಡುವೆ ವಾಗ್ವಾದ, ರೈತರಿಂದ ಘೇರಾವ್‌

ಎರಡು ದಿನಗಳ ಕಾಲ ಜಿಲ್ಲಾಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಆಗಮಿಸುತ್ತಿದ್ದಂತೆ ಅವರಿಗೆ ಜಿಲ್ಲಾವಿಭಜನೆ ಹೋರಾಟದ ಬಿಸಿ ತಟ್ಟಿತು.

ವಿಮಾನ ನಿಲ್ದಾಣದಲ್ಲೇ ಸಿಎಂಗೆ ಎದುರಾದ ಗೋಕಾಕ ಜಿಲ್ಲಾಚಾಲನಾ ಸಮಿತಿ ಸದಸ್ಯರು ಬೆಳಗಾವಿ ಜಿಲ್ಲೆವಿಭಜಿಸಿ ಗೋಕಾಕ ಜಿಲ್ಲೆರಚಿಸುವಂತೆ ಸಾಂಕೇತಿಕವಾಗಿ ಮನವಿ ಪತ್ರ ಅರ್ಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ''ಬೆಳಗಾವಿ ಜಿಲ್ಲಾವಿಭಜನೆ ಸದ್ಯಕ್ಕಿಲ್ಲ. ವಿಭಜನೆ ಸಂದರ್ಭದಲ್ಲಿನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಣಯ ಕೈಗೊಳ್ಳುತ್ತೇವೆ'', ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ