ಆ್ಯಪ್ನಗರ

ಕಾಗವಾಡ ಕ್ಷೇತ್ರದಲ್ಲಿ ಕ್ವಾರಂಟೈನ್‌ ಇಲ್ಲ ಎಂದ ಸಚಿವ

ಕಾಗವಾಡ: ಕುಡಚಿ ಪಟ್ಟಣದ ಕೊರೊನಾ ಸೋಂಕಿತರನ್ನು...

Vijaya Karnataka 26 Apr 2020, 5:00 am
ಕಾಗವಾಡ: ಕುಡಚಿ ಪಟ್ಟಣದ ಕೊರೊನಾ ಸೋಂಕಿತರನ್ನು ಕಾಗವಾಡ ತಾಲೂಕಿನ ಯಾವುದೇ ಗ್ರಾಮದಲ್ಲಿಕ್ವಾರಂಟೈನ್‌ ಮಾಡುತ್ತಿಲ್ಲ. ಈ ನಿರ್ಧಾರವನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ರಾಜ್ಯದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ್‌ ಪಾಟೀಲ ಹೇಳಿದ್ದಾರೆ.
Vijaya Karnataka Web there is no quarantine in kagwad says minister
ಕಾಗವಾಡ ಕ್ಷೇತ್ರದಲ್ಲಿ ಕ್ವಾರಂಟೈನ್‌ ಇಲ್ಲ ಎಂದ ಸಚಿವ


ಉಗಾರ ಖುರ್ದ ಪಟ್ಟಣದಲ್ಲಿಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕುಡಚಿಯ ಸೋಂಕಿತರನ್ನು ಕ್ವಾರಂಟೈನ್‌ ಮಾಡಲು ಉಗಾರ, ಕಾಗವಾಡದ ಕೆಲವೆಡೆ ಸ್ಥಳದ ಹುಡುಕಾಟ ನಡೆದಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಈ ವಿಚಾರವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಅವರ ಗಮನಕ್ಕೆ ತಂದ ಬಳಿಕ ಆ ನಿರ್ಣಯ ಸದ್ಯಕ್ಕೆ ಕೈಬಿಡಲಾಗಿದೆ'', ಎಂದರು.

''ಕಾಗವಾಡ ಕ್ಷೇತ್ರದಲ್ಲಿಶ್ರೀಮಂತ ಪಾಟೀಲ ಫೌಂಡೇಶನ್‌ ವತಿಯಿಂದ ಎಲ್ಲಕಾರ್ಯಕರ್ತರು ಒಂದುಗೂಡಿ ಮನೆ ಮನೆಗಳಿಗೆ ಭೇಟಿ ನೀಡಿ 1 ಲಕ್ಷ ಮಾಸ್ಕ್‌, 5 ಸಾವಿರ ಲೀಟರ್‌ ಸ್ಯಾನಿಟೈಸರ್‌ ಮತ್ತು ಸುಮಾರು 20 ಟನ್‌ ತರಕಾರಿ ವಿತರಿಸಿದ್ದಾರೆ. ಈ ಮುಂದೆಯೂ ಸಮಸ್ಯೆಯಿದ್ದಲ್ಲಿಕಾರ್ಯಕರ್ತರು ಭೇಟಿ ನೀಡಿ ಸಹಕರಿಸಲಿದ್ದಾರೆ'', ಎಂದು ತಿಳಿಸಿದರು.

''ಕೃಷ್ಣಾ ನದಿಗೆ ನೀರಿನ ಪ್ರಮಾಣ ಇಳಿಮುಖವಾಗಿದ್ದರಿಂದ ಮಹಾರಾಷ್ಟ್ರದಿಂದ 4 ಟಿಎಂಸಿ ನೀರು ಹರಿಸಲು ಸಚಿವರಾದ ರಮೇಶ ಜಾರಕಿಹೊಳಿ, ಜಗದೀಶ ಶೆಟ್ಟರ್‌, ಡಿಸಿಎಂ ಲಕ್ಷತ್ರ್ಮಣ ಸವದಿ ಅವರೊಂದಿಗೆ ಚರ್ಚಿಸಲಾಗಿದೆ. ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಮಹಾರಾಷ್ಟ್ರದಲ್ಲಿಸಂಬಂಧಿಸಿದ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಹರಿಸಲು ಮುಂದಾಗಿದ್ದೇವೆ'', ಎಂದು ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ