ಪ್ರಮೋದ ಹರಿಕಾಂತ ಬೆಳಗಾವಿ
ಕೋವಿಡ್- 19 ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನರಲ್ಲಿ ಮಾಂಸಾರದ ಬಗ್ಗೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಸರಕಾರಿ ವಸತಿ ನಿಯಲಗಳಲ್ಲಿಮಕ್ಕಳಿಗೆ ಚಿಕನ್, ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ. ಚಿಕನ್, ಮೊಟ್ಟೆಯಿಂದ ಕೋವಿಡ್-19 ಕೊರೊನಾ ವೈರಸ್ ಹರಡುವುದಿಲ್ಲಎಂದು ರಾಜ್ಯ, ಕೇಂದ್ರ ಸರಕಾರಗಳು ಸ್ಪಷ್ಟಪಡಿಸಿವೆ.
ಆದರೂ, ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಇರುವ ಕಾರಣಕ್ಕೆ ಜಿಲ್ಲೆಯ ವಸತಿ ನಿಲಯಗಳಲ್ಲಿಚಿಕನ್, ಮೊಟ್ಟೆ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿ ದಿನ ತರಕಾರಿ ಊಟವನ್ನೇ ಬಡಿಸಲಾಗುತ್ತಿದೆ. ರಾಜ್ಯದ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಪ್ರತಿ ವಾರ ಚಿಕನ್, ಮೊಟ್ಟೆ ನೀಡಲಾಗುತ್ತಿತ್ತು. ಕೋವಿಡ್-19 ವೈರಸ್ನಿಂದ ಜನ ಚಿಕನ್, ಮೊಟ್ಟೆ ತಿನ್ನಲು ಭಯ ಪಡಲು ಆರಂಭಿಸಿದ್ದಾರೆ. ರಾಜ್ಯ ಸರಕಾರ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದರೂ ಕುಕ್ಕುಟೋದ್ಯಮ ದಿನದಿಂದ ದಿನಕ್ಕೆ ನೆಲಕಚ್ಚುತ್ತಿದೆ. ವಿದ್ಯಾರ್ಥಿಗಳೂ ಸಹ ಅದೇ ಭಯದಲ್ಲಿಚಿಕನ್, ಮೊಟ್ಟೆ ನಿರಾಕರಿಸುತ್ತಿದ್ದಾರೆ ಎಂದು ವಸತಿ ನಿಲಯದ ಸಿಬ್ಬಂದಿ ತಿಳಿಸಿದರು.
ವಿದ್ಯಾರ್ಥಿಗಳು ಮನೆಗೆ: ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಬೆಳಗಾವಿಯಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿಎಸ್ಸೆಸ್ಸೆಲ್ಸಿ, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದವರನ್ನು ಮನೆಗೆ ಕಳುಹಿಸಲಾಗಿದೆ. ಅವರೆಲ್ಲರಿಗೂ ಈ ಹಿಂದೆ ಮಾಂಸಾಹಾರ ಬಿಟ್ಟು, ಕೇವಲ ತರಕಾರಿ ಊಟವನ್ನೇ ಬಡಿಸಲಾಗುತ್ತಿತ್ತು. ಈಗ ಎರಡು ತರಗತಿಗಳ ವಿದ್ಯಾರ್ಥಿಗಳಿಗೆ ಸಸ್ಯಾಹಾರವನ್ನೇ ನೀಡಲಾಗುತ್ತಿದೆ.
ಸ್ವಚ್ಛತೆಗೂ ಸವಾಲು: ವಸತಿ ನಿಲಯಗಳಲ್ಲಿಇರುವ ವಿದ್ಯಾರ್ಥಿಗಳಿಗೆ ಸ್ವಚ್ಛತೆಯೂ ಸವಾಲಾಗಿ ಕಾಡುತ್ತಿದೆ. ಉದಾಹರಣೆಗೆ ಸವದತ್ತಿಯ ಯಲ್ಲಮ್ಮ ಗುಡ್ಡದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ನಿಯಲದಲ್ಲಿವಿದ್ಯಾರ್ಥಿಗಳು ಕಟ್ಟಡದ ಕಟ್ಟೆಯ ಮೇಲೆಯೇ ಬಟ್ಟೆಗಳನ್ನು ಒಣಗಿಸುತ್ತಿದ್ದಾರೆ. ವಸತಿ ನಿಲಯದ ಆವರಣದಲ್ಲಿಹಂದಿಗಳ ರಾಶಿಯೂ ಹೆಚ್ಚಾಗಿದೆ. ಜಿಲ್ಲೆಯ ಬಹುತೇಕ ವಸತಿ ನಿಲಯಗಳಲ್ಲಿಇಂಥ ಸಮಸ್ಯೆ ಕಾಡುತ್ತಿವೆ.
ಕೋವಿಡ್- 19 ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನರಲ್ಲಿ ಮಾಂಸಾರದ ಬಗ್ಗೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಸರಕಾರಿ ವಸತಿ ನಿಯಲಗಳಲ್ಲಿಮಕ್ಕಳಿಗೆ ಚಿಕನ್, ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗಿದೆ. ಚಿಕನ್, ಮೊಟ್ಟೆಯಿಂದ ಕೋವಿಡ್-19 ಕೊರೊನಾ ವೈರಸ್ ಹರಡುವುದಿಲ್ಲಎಂದು ರಾಜ್ಯ, ಕೇಂದ್ರ ಸರಕಾರಗಳು ಸ್ಪಷ್ಟಪಡಿಸಿವೆ.
ಆದರೂ, ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಆತಂಕ ಇರುವ ಕಾರಣಕ್ಕೆ ಜಿಲ್ಲೆಯ ವಸತಿ ನಿಲಯಗಳಲ್ಲಿಚಿಕನ್, ಮೊಟ್ಟೆ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿ ದಿನ ತರಕಾರಿ ಊಟವನ್ನೇ ಬಡಿಸಲಾಗುತ್ತಿದೆ. ರಾಜ್ಯದ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಪ್ರತಿ ವಾರ ಚಿಕನ್, ಮೊಟ್ಟೆ ನೀಡಲಾಗುತ್ತಿತ್ತು. ಕೋವಿಡ್-19 ವೈರಸ್ನಿಂದ ಜನ ಚಿಕನ್, ಮೊಟ್ಟೆ ತಿನ್ನಲು ಭಯ ಪಡಲು ಆರಂಭಿಸಿದ್ದಾರೆ. ರಾಜ್ಯ ಸರಕಾರ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದರೂ ಕುಕ್ಕುಟೋದ್ಯಮ ದಿನದಿಂದ ದಿನಕ್ಕೆ ನೆಲಕಚ್ಚುತ್ತಿದೆ. ವಿದ್ಯಾರ್ಥಿಗಳೂ ಸಹ ಅದೇ ಭಯದಲ್ಲಿಚಿಕನ್, ಮೊಟ್ಟೆ ನಿರಾಕರಿಸುತ್ತಿದ್ದಾರೆ ಎಂದು ವಸತಿ ನಿಲಯದ ಸಿಬ್ಬಂದಿ ತಿಳಿಸಿದರು.
ವಿದ್ಯಾರ್ಥಿಗಳು ಮನೆಗೆ: ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಬೆಳಗಾವಿಯಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿಎಸ್ಸೆಸ್ಸೆಲ್ಸಿ, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದವರನ್ನು ಮನೆಗೆ ಕಳುಹಿಸಲಾಗಿದೆ. ಅವರೆಲ್ಲರಿಗೂ ಈ ಹಿಂದೆ ಮಾಂಸಾಹಾರ ಬಿಟ್ಟು, ಕೇವಲ ತರಕಾರಿ ಊಟವನ್ನೇ ಬಡಿಸಲಾಗುತ್ತಿತ್ತು. ಈಗ ಎರಡು ತರಗತಿಗಳ ವಿದ್ಯಾರ್ಥಿಗಳಿಗೆ ಸಸ್ಯಾಹಾರವನ್ನೇ ನೀಡಲಾಗುತ್ತಿದೆ.
ಸ್ವಚ್ಛತೆಗೂ ಸವಾಲು: ವಸತಿ ನಿಲಯಗಳಲ್ಲಿಇರುವ ವಿದ್ಯಾರ್ಥಿಗಳಿಗೆ ಸ್ವಚ್ಛತೆಯೂ ಸವಾಲಾಗಿ ಕಾಡುತ್ತಿದೆ. ಉದಾಹರಣೆಗೆ ಸವದತ್ತಿಯ ಯಲ್ಲಮ್ಮ ಗುಡ್ಡದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ನಿಯಲದಲ್ಲಿವಿದ್ಯಾರ್ಥಿಗಳು ಕಟ್ಟಡದ ಕಟ್ಟೆಯ ಮೇಲೆಯೇ ಬಟ್ಟೆಗಳನ್ನು ಒಣಗಿಸುತ್ತಿದ್ದಾರೆ. ವಸತಿ ನಿಲಯದ ಆವರಣದಲ್ಲಿಹಂದಿಗಳ ರಾಶಿಯೂ ಹೆಚ್ಚಾಗಿದೆ. ಜಿಲ್ಲೆಯ ಬಹುತೇಕ ವಸತಿ ನಿಲಯಗಳಲ್ಲಿಇಂಥ ಸಮಸ್ಯೆ ಕಾಡುತ್ತಿವೆ.