ಅಥಣಿ: ಸ್ವಯಂ ಪ್ರೇರಿತವಾಗಿ ಪಟ್ಟಣದ ಎಲ್ಲಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದು ಬರುವ ಭಾನುವಾರದವರೆಗೆ ಕೊರೊನಾ ಅಬ್ಬರ ಕಡಿಮೆಯಾಗದಿದ್ದಲ್ಲಿ ಲಾಕ್ಡೌನ್ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹಿರಿಯ ವ್ಯಾಪಾರಸ್ಥರಾದ ಭರತ ಸೋಮಯ್ಯ ಹಾಗೂ ಎಂ.ಡಿ.ತೊದಲಬಾಗಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ದಿನೇದಿನೆ ಕೊರೊನಾದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಸದ್ಯ ಜು.12ರವರೆಗೆ ಮಾತ್ರ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದು ಇದೇ ರೀತಿ ಕೊರೊನಾ ಹಾವಳಿ ಹೆಚ್ಚುತ್ತ ಹೋದಲ್ಲಿಲಾಕ್ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಅಥಣಿ ಪಟ್ಟಣದಲ್ಲಿ ಸೋಮವಾರ ಸರಕಾರಿ ಕಚೇರಿಗಳು, ಬ್ಯಾಂಕ್ಗಳು, ಸೊಸೈಟಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಸಂಸ್ಥೆ ಬಸ್ಗಳು ಅವಶ್ಯಕ ಶೆಡ್ಯೂಲ್ಗಳಲ್ಲಿಮಾತ್ರ ಸಂಚರಿಸಿವೆ.
ಪಟ್ಟಣದ ವಿಕ್ರಂಪುರ, ಶಾಂತಿನಗರ, ಶಂಕರನಗರ, ಸಾಯಿನಗರ, ನಾಲಬಂದ ಗಲ್ಲಿ,ಡೌರಿ ಗಲ್ಲಿ, ದೇಸಾಯಿ ವಾಡೆ ಹತ್ತಿರ, ಗಸ್ತಿ ಪ್ಲಾಟ್ ಸೀಲ್ಡೌನ್ ಆಗಿವೆ. ಮಹಾರಾಷ್ಟ್ರದಿಂದ ಗಡಿ ದಾಟಿ ಯಾರೂ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಿಪಿಐ ಶಂಕರಗೌಡ ಬಸನಗೌಡರ ಹೇಳಿದ್ದಾರೆ.
ಏತನ್ಮಧ್ಯೆ ಕೆಲ ಖಾಸಗಿ ಆಸ್ಪತ್ರೆಗಳು ಕೂಡ ಕ್ವಾರಂಟೈನ್ ಕೇಂದ್ರಗಳಾಗಿರುವುದರಿಂದ ಸರಕಾರಿ ಆಸ್ಪತ್ರೆಯಲ್ಲಿಎಲ್ಲರೀತಿಯ ರೋಗಿಗಳಿಗೂ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ದಿನೇದಿನೆ ಕೊರೊನಾದಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಸದ್ಯ ಜು.12ರವರೆಗೆ ಮಾತ್ರ ವ್ಯಾಪಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದು ಇದೇ ರೀತಿ ಕೊರೊನಾ ಹಾವಳಿ ಹೆಚ್ಚುತ್ತ ಹೋದಲ್ಲಿಲಾಕ್ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಅಥಣಿ ಪಟ್ಟಣದಲ್ಲಿ ಸೋಮವಾರ ಸರಕಾರಿ ಕಚೇರಿಗಳು, ಬ್ಯಾಂಕ್ಗಳು, ಸೊಸೈಟಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಸಂಸ್ಥೆ ಬಸ್ಗಳು ಅವಶ್ಯಕ ಶೆಡ್ಯೂಲ್ಗಳಲ್ಲಿಮಾತ್ರ ಸಂಚರಿಸಿವೆ.
ಪಟ್ಟಣದ ವಿಕ್ರಂಪುರ, ಶಾಂತಿನಗರ, ಶಂಕರನಗರ, ಸಾಯಿನಗರ, ನಾಲಬಂದ ಗಲ್ಲಿ,ಡೌರಿ ಗಲ್ಲಿ, ದೇಸಾಯಿ ವಾಡೆ ಹತ್ತಿರ, ಗಸ್ತಿ ಪ್ಲಾಟ್ ಸೀಲ್ಡೌನ್ ಆಗಿವೆ. ಮಹಾರಾಷ್ಟ್ರದಿಂದ ಗಡಿ ದಾಟಿ ಯಾರೂ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಿಪಿಐ ಶಂಕರಗೌಡ ಬಸನಗೌಡರ ಹೇಳಿದ್ದಾರೆ.
ಏತನ್ಮಧ್ಯೆ ಕೆಲ ಖಾಸಗಿ ಆಸ್ಪತ್ರೆಗಳು ಕೂಡ ಕ್ವಾರಂಟೈನ್ ಕೇಂದ್ರಗಳಾಗಿರುವುದರಿಂದ ಸರಕಾರಿ ಆಸ್ಪತ್ರೆಯಲ್ಲಿಎಲ್ಲರೀತಿಯ ರೋಗಿಗಳಿಗೂ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.