ಆ್ಯಪ್ನಗರ

ತಾವಂಶಿ ಶಾಲೆಗೆ ಬೆದರಿಕೆ ಪತ್ರ: ಆರೋಪಿ ಬಂಧನ

ಅಥಣಿ: ಹಳೆಯ ಪ್ರೇಮಿಗಳನ್ನು ಒಂದಾಗಿಸದಿದ್ದರೆ ತಾಂವಶಿ ಸರಕಾರಿ ಪ್ರೌಢ ಶಾಲೆಯನ್ನು ಧ್ವಂಸಗೊಳಿಸುವುದಾಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಬೆದರಿಕೆ ಪತ್ರ ...

Vijaya Karnataka 10 Jul 2018, 5:00 am
ಅಥಣಿ: ಹಳೆಯ ಪ್ರೇಮಿಗಳನ್ನು ಒಂದಾಗಿಸದಿದ್ದರೆ ತಾಂವಶಿ ಸರಕಾರಿ ಪ್ರೌಢ ಶಾಲೆಯನ್ನು ಧ್ವಂಸಗೊಳಿಸುವುದಾಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಬೆದರಿಕೆ ಪತ್ರ ರವಾನಿಸಿದ್ದ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Vijaya Karnataka Web BEL-09 ATHANI-02


ಚಿದಾನಂದ ಹಚ್ಚನಗಟ್ಟಿ (18)ಬಂಧಿತ. ಈತ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಖಿನ್ನತೆ ಹೊಂದಿದ್ದು ಇಂಥ ಬೆದರಿಕೆ ಪತ್ರ ರವಾನಿಸಲು ಕಾರಣವೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಳೆದ ಶುಕ್ರವಾರ ತಾಂವಶಿ ಪ್ರಾಥಮಿಕ ಶಾಲೆಯಲ್ಲಿ 5 ಪತ್ರಗಳು ಪತ್ತೆಯಾಗಿದ್ದು ಅದರಲ್ಲಿ ಹಳೆಯ ಪ್ರೇಮಿಗಳನ್ನು ಒಂದಾಗಿಸದಿದ್ದರೆ ಶಾಲೆ ಧ್ವಂಸಗೊಳಿಸುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಜತೆಗೆ ಇತ್ತೀಚೆಗಷ್ಟೇ ಇದೇ ಶಾಲೆಯಲ್ಲಿ ಬೆಂಕಿ ಹಚ್ಚಿ ಪ್ರಮುಖ ದಾಖಲೆಗಳ ನಾಶಕ್ಕೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೇರೆ ನಾಲ್ವರನ್ನು ಬಂಧಿಸಿದ್ದು ಧೈರ್ಯವಿದ್ದರೆ ತನ್ನನ್ನು ಬಂಧಿಸುವಂತೆ ಪತ್ರದಲ್ಲಿ ಸವಾಲೆಸೆಯಲಾಗಿತ್ತು.

ಪತ್ರಗಳು ಪತ್ತೆಯಾಗುತ್ತಿದ್ದಂತೆ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಚುರುಕುಗೊಳಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶಾಲೆಯಲ್ಲಿ ಬೆಂಕಿ ಅನಾಹುತದ ಬೆನ್ನಲ್ಲೇ ಬೆದರಿಕೆ ಪತ್ರಗಳು ಪತ್ತೆಯಾದ ಪ್ರಕರಣ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹುಟ್ಟಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ