ಆ್ಯಪ್ನಗರ

ನಿಜಗುಣಾನಂದ ಶ್ರೀಗಳಿಗೆ ಬೆದರಿಕೆ ಪತ್ರ

ಬೆಳಗಾವಿ: ಕಿತ್ತೂರು ತಾಲೂಕು ಬೈಲೂರಿನ ನಿಷ್ಕಲ ಮಂಟಪದ ಚನ್ನಬಸವೇಶ್ವರ ...

Vijaya Karnataka 25 Jan 2020, 5:00 am
ಬೆಳಗಾವಿ: ಕಿತ್ತೂರು ತಾಲೂಕು ಬೈಲೂರಿನ ನಿಷ್ಕಲ ಮಂಟಪದ ಚನ್ನಬಸವೇಶ್ವರ ಜ್ಞಾನಪೀಠದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಕೊಲೆ ಬೆದರಿಕೆಯ ಅನಾಮಧೇಯ ಪತ್ರ ಬಂದಿದ್ದು, ಅವರೊಂದಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸೇರಿ 15 ವಿಚಾರವಾದಿಗಳ ಹೆಸರು ಉಲ್ಲೇಖಿಸಲಾಗಿದೆ.
Vijaya Karnataka Web 24PRAMOD4081519
ಬೈಲೂರು ನಿಷ್ಕಲ ಮಂಟಪಕ್ಕೆ ಬಂದ ಬೆದರಿಕೆ ಪತ್ರ.


ಕನ್ನಡ ಭಾಷೆಯಲ್ಲಿಕೈ ಬರಹದಲ್ಲಿರುವ ಪತ್ರ ಬೈಲೂರು ನಿಷ್ಕಲ ಮಂಟಪಕ್ಕೆ ಗುರುವಾರ ತಲುಪಿದೆ. ಇದನ್ನು ಮಠ ಹಾಗೂ ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಮೂಢ ನಂಬಿಕೆ ವಿರುದ್ಧ ಮಾತನಾಡುವ ನಿಜಗುಣಾನಂದ ಸ್ವಾಮೀಜಿಗಳಿಗೆ ಕೆಲ ತಿಂಗಳ ಹಿಂದೆಯೂ ದೂರವಾಣಿ ಮೂಲಕ ಬೆದರಿಕೆ ಕರೆ ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅದು ಶಿವಮೊಗ್ಗದಿಂದ ಬಂದಿರುವುದು ಪತ್ತೆಯಾಗಿತ್ತು.

''ನಿಜಗುಣಾನಂದ ಸ್ವಾಮೀಜಿ ಕೆಲ ತಿಂಗಳಿಂದ ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿದ್ದಾರೆ. ಬೆದರಿಕೆ ಪತ್ರದ ಮಾಹಿತಿಯನ್ನು ಕಲಬುರಗಿ ಪೊಲೀಸ್‌ ವರಿಷ್ಠಾಧಿಕಾರಿಗೆ ನೀಡಲಾಗಿದೆ. ಶ್ರೀಗಳು ಬೆಳಗಾವಿಗೆ ಬಂದ ಬಳಿಕ ಭದ್ರತೆ ಕೊಡಲಾಗುವುದು. ಆದರೆ, ಪತ್ರದ ಬಗ್ಗೆ ಮಠದಿಂದ ಯಾವುದೇ ದೂರು ಬಂದಿಲ್ಲ'' ಎಂದು ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

15 ಜನರ ಲಿಸ್ಟ್‌
ಬೆದರಿಕೆ ಪತ್ರದಲ್ಲಿಸ್ವಾಮೀಜಿ ಅವರ ಜತೆಗೆ ಇನ್ನೂ 15 ಜನರನ್ನು ಜ.29ರಿಂದ ಸಂಹಾರ ಮಾಡುವುದಾಗಿ ಎಚ್ಚರಿಸಲಾಗಿದೆ. ಭಜರಂಗದಳದ ಮಾಜಿ ನಾಯಕ ಮಹೇಂದ್ರ ಕುಮಾರ ಅವರ ಹೆಸರು ಮೊದಲಿದೆ. ನಂತರದಲ್ಲಿಕ್ರಮವಾಗಿ ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ವೀರಭದ್ರ ಚನ್ನಮಲ್ಲಸ್ವಾಮಿ, ಚಿತ್ರನಟ ಪ್ರಕಾಶ ರಾಜ್‌, ಜ್ಞಾನಪ್ರಕಾಶ ಅಸುರಿ ಸ್ವಾಮಿ, ನಟ ಚೇತನಕುಮಾರ, ಬ.ಟಿ.ಲಲಿತ್‌ ನಾಯ್‌್ಕ, ಮೈಸೂರಿನ ಪ್ರೊ. ಮಹೇಶ ಚಂದ್ರಗುರು, ಪ್ರೊ. ಭಗವಾನ್‌, ಪತ್ರಕರ್ತ ದಿನೇಶ ಅಮ್ಮಿನಮಟ್ಟು, ಸಾಹಿತಿ ಚಂದ್ರಶೇಖರ ಪಾಟೀಲ್‌, ಡುಂಡಿ ಗಣೇಶ, ಅಗ್ನಿ ಶ್ರೀಧರ, ಬೃಂದಾ ಕಾರಟ್‌ ಹಾಗೂ ಕೊನೆಯಲ್ಲಿಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರು ಬರೆಯಲಾಗಿದೆ.

ಪತ್ರದಲ್ಲೇನಿದೆ?:
ನಿಜಗುಣಾನಂದ ಸ್ವಾಮಿಗಳೆ, ನಿಮ್ಮ ಮತ್ತು ನಿಮ್ಮ ಜೊತೆಯಲ್ಲಿರುವ ಧರ್ಮದ್ರೋಹಿಗಳು, ದೇಶದ್ರೋಹಿಗಳ ಸಂಹಾರಕ್ಕೆ 2020 ಜನವರಿ 29 ರಿಂದ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ಧರಾಗಿ ನಿಜಗುಣಾನಂದ ಸ್ವಾಮಿಗಳೆ. ಕೇವಲ ನೀವು ಮಾತ್ರ ಅಲ್ಲ. ಮುಂದೆ ನೋಡಿ ನಿಮ್ಮ ಜೊತೆ ಅಂತಿಮ ಯಾತ್ರೆಗೆ ಇವರುಗಳನ್ನೂ ನೀವು ಸಿದ್ಧಮಾಡಬೇಕು. ಅವರಿಗೆ ನೀವೇ ಹೇಳಿ.. ಎಂದು ಪತ್ರದಲ್ಲಿದೆ. ಅದರ ಕೆಳಗೆ ಸ್ವಾಮೀಜಿ ಸೇರಿದಂತೆ 15 ಜನರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ