ಆ್ಯಪ್ನಗರ

ಹಾಲಸಿದ್ಧನಾಥ ಕಾರ್ಖಾನೆಗೆ ಮೂವರು ಅವಿರೋಧ ಆಯ್ಕೆ

ನಿಪ್ಪಾಣಿ: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸೆ...

Vijaya Karnataka 11 Sep 2018, 5:00 am
ನಿಪ್ಪಾಣಿ: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸೆ.15 ರಂದು ಜರುಗಲಿರುವ ಪಂಚವಾರ್ಷಿಕ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಬಳಿಕ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ನೇತೃತ್ವದ ವಿಕಾಸ ಪೆನೆಲ್‌ನ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web BEL-10NPN4


ಕಬ್ಬು ಬೆಳೆಗಾರರ ಕ್ಷೇತ್ರ ('ಎ')ದ ಹಿಂದುಳಿದ ವರ್ಗದಿಂದ ರಾಜಾರಾಮ ಮಲ್ಹಾರಿ ಖೋತ (ಅಪ್ಪಾಚಿವಾಡಿ) ಮತ್ತು ಮಲ್ಲಪ್ಪ ಸಿದ್ರಾಮ ಪಿಸೋತ್ರೆ (ಗಳತಗಾ), ಪರಿಶಿಷ್ಟ ಪಂಗಡ ವರ್ಗದಿಂದ ಕಲ್ಲಪ್ಪ ಭೀಮಾ ನಾಯಿಕ (ಹುನ್ನರಗಿ) ಅವಿರೋಧ ಆಯ್ಕೆಯಾದರು. ಮಾಜಿ ಶಾಸಕ ಸುಭಾಷ ಜೋಶಿ ನೇತೃತ್ವದ ಸಹಕಾರ ಪೆನೆಲ್‌ ತನ್ನ ಎಲ್ಲ ಅಭ್ಯರ್ಥಿಗಳನ್ನು ಹಿಂಪಡೆದುದರಿಂದ ಇವರ ಆಯ್ಕೆ ಸುಗಮವಾಯಿತು.

ಇನ್ನುಳಿದ 13 ಸ್ಥಾನಗಳಿಗೆ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಾಮಾನ್ಯ ವರ್ಗದಿಂದ 21, ನಾಲ್ವರು ಮಹಿಳಾ ಆಕಾಂಕ್ಷಿಗಳು, ಪರಿಶಿಷ್ಟ ಜಾತಿ ವರ್ಗದ ಐವರು ಮತ್ತು 'ಬ' ವರ್ಗದಿಂದ ಇಬ್ಬರು ಕಣದಲ್ಲಿದ್ದಾರೆ. ಕಬ್ಬು ಬೆಳೆಗಾರ 'ಎ' ವರ್ಗದಿಂದ 16,978 ಮತ್ತು 'ಬ' ವರ್ಗದಿಂದ 2231 ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ