ಆ್ಯಪ್ನಗರ

ಖಾನಾಪುರ ತಾಲೂಕಿನಲ್ಲಿ ಸತತ ಮಳೆಯಿಂದಾಗಿ ಮೂರು ಸೇತುವೆಗಳು ಜಖಂ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಳೆ ಬಹುತೇಕ ತಗ್ಗಿದೆ...

Vijaya Karnataka 8 Aug 2020, 5:00 am
ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಳೆ ಬಹುತೇಕ ತಗ್ಗಿದೆ. ಆದರೆ, ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳಲ್ಲಿ ಮಾತ್ರ ನೀರಿನ ಹರಿವು ಎಂದಿನಂತೆ ಮುಂದುವರಿದಿದ್ದು, ತಾಲೂಕಿನ ಮೂರು ಸೇತುವೆಗಳು ಜಖಂಗೊಂಡಿವೆ.
Vijaya Karnataka Web 7KHANAPUR2_53
ಖಾನಾಪುರ ತಾಲೂಕು ತಿವೋಲಿ ಗ್ರಾಮದ ಬಳಿ ಸೇತುವೆ ಹಾಳಾಗಿರುವುದು.


ತಾಲೂಕಿನ ತಿವೋಲಿ ಗ್ರಾಮದ ಬಳಿಯ ಸೇತುವೆ ಸತತವಾಗಿ ನಾಲ್ಕನೇ ವರ್ಷವೂ ಅಲಾತ್ರಿ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಮಲಪ್ರಭಾ ನದಿಯ ಚಾಪಗಾಂವ-ಯಡೋಗಾ ಮಾರ್ಗಮಧ್ಯದ ಮತ್ತು ಪಾರಿಶ್ವಾಡ-ಇಟಗಿ ಮಾರ್ಗಮಧ್ಯದ ಸೇತುವೆಗಳಿಗೂ ಹಾನಿಯುಂಟಾಗಿದೆ.

ಸತತ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬಹುತೇಕ ಸೇತುವೆಗಳು ಶುಕ್ರವಾರ ಬೆಳಗ್ಗೆಯಿಂದ ಸಂಚಾರಕ್ಕೆ ಮುಕ್ತವಾಗಿವೆ. ವಿದ್ಯುತ್‌ ಕಂಬಗಳಿಗೆ ಹಾನಿಯುಂಟಾದ ಕಾರಣ ತಾಲೂಕಿನ 50ಕ್ಕೂ ಗ್ರಾಮಗಳಲ್ಲಿ ವಿದ್ಯುತ್‌ ಸರಬರಾಜು ಸ್ಥಗಿತಗೊಂಡು ಗ್ರಾಮಗಳು ಕತ್ತಲೆಯಲ್ಲಿಮುಳುಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ