ಆ್ಯಪ್ನಗರ

ಮೂವರು ದರೋಡೆಕೋರರ ಬಂಧನ: ಲಕ್ಷಾಂತರ ಮೌಲ್ಯದ ನಗ ನಾಣ್ಯ ವಶ

ಬೆಳಗಾವಿ: ಸಂಕೇಶ್ವರ ಠಾಣೆ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ...

Vijaya Karnataka 7 Sep 2018, 5:00 am
ಬೆಳಗಾವಿ: ಸಂಕೇಶ್ವರ ಠಾಣೆ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಬೆಲೆಯ ವಾಹನ, ಒಡವೆ, ವಸ್ತು ಹಾಗೂ ದರೋಡೆಗೆ ಬಳಕೆ ಮಾಡಿದ ಅಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web BLG-0609-2-52-6RAJU-4


ಕಲಬುರಗಿ ಜಿಡಿಎ ಕಾಲನಿಯ ಸೋಮಶೇಖರ ಹಣಮಂತಪ್ಪ ಮಡಿವಾಳ, ಬೆಂಗಳೂರು ವಿವಿಪುರಂನ ಯಶವಂತ ಬಸನಿಂಗಪ್ಪ ನಾಗಶೆಟ್ಟಿ ಮತ್ತು ಚಾಮರಾಜ ಪೇಟೆಯ ಸಂದೀಪ್‌ ಮಹಾದೇವ ಬಂಧಿತರು.

ಇವರಿಂದ 10 ಲಕ್ಷ ರೂ. ಬೆಲೆಯ ನೀಲಿಬಣ್ಣದ ಇಕೋ ಸ್ಪೋರ್ಟ್ಸ್ ಕಾರು, 3 ಚಾಕುಗಳು, 1 ಡಿಫೆನ್ಸ್‌ ಪೆಪ್ಪರ್‌ ಸೆ್ೊ್ರ, ಟಿಕ್ಸೋ ಪಟ್ಟಿ, ಇತರೆ ವಸ್ತುಗಳು, 45 ಸಾವಿರ ರೂ. ಬೆಲೆಯ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನ್ಯಾಯಾಂಗ ವಶದಲ್ಲಿದ್ದು, ದರೋಡೆ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.

ಈ ಹಿಂದೆ ಹುಕ್ಕೇರಿ ತಾಲೂಕಿನ ಅಮ್ಮಣಗಿಯಲ್ಲಿ ಆರೋಪಿಗಳು ದರೋಡೆ ನಡೆಸಿದ್ದರು. ಈ ಕುರಿತು ಮಹಾದೇವ ಈರಪ್ಪ ಪರೀಟ ಎನ್ನುವವರು ದೂರು ನೀಡಿದ್ದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಕೇಶ್ವರ ಠಾಣೆಯ ಪಿಎಸ್‌ಐಗಳಾದ ಎಂಆರ್‌ಎಂ ತಹಸೀಲ್ದಾರ, ಎ.ಪಿ. ಹೊಸಮನಿ, ಸಿಬ್ಬಂದಿ ಎ.ಎಸ್‌. ಸನದಿ, ಎಂ.ಎಸ್‌. ಕಬ್ಬೂರ, ಬಿ.ಎಸ್‌. ಕಪರಟ್ಟಿ, ವಿಠ್ಠಲ ನಾಯಕ, ಎಂ.ಎಸ್‌. ಹಾರೂಗೇರಿ ಒಳಗೊಂಡ ತಂಡ ತನಿಖೆ ನಡೆಸಿತ್ತು. ದರೋಡೆ ಸ್ಥಳದಲ್ಲಿ ಸಿಕ್ಕಿದ್ದ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ