ಆ್ಯಪ್ನಗರ

ಲಾರಿ ಹಾಯ್ದು ಮೂವರು ಸ್ಥಳದಲ್ಲೇ ಸಾವು

ಕಾಗವಾಡ(ಬೆಳಗಾವಿ): ದಸರಾ ಹಬ್ಬದ ದುರ್ಗಾದೇವಿ ಮೂರ್ತಿ ...

Vijaya Karnataka 11 Oct 2019, 5:00 am
ಕಾಗವಾಡ(ಬೆಳಗಾವಿ): ದಸರಾ ಹಬ್ಬದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿಪಾಲ್ಗೊಂಡವರ ಮೇಲೆ ಲಾರಿ ಹಾಯ್ದ ಪರಿಣಾಮ ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದು, ಇನ್ನಿಬ್ಬರ ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web three died on the spot after hitting lorry
ಲಾರಿ ಹಾಯ್ದು ಮೂವರು ಸ್ಥಳದಲ್ಲೇ ಸಾವು


ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಪಾಟೀಲ ಗಲ್ಲಿಯ ಸಚಿನ್‌ ಕಲ್ಲಪ್ಪ ಪಾಟೀಲ(40), ಸಂಜೀವ ರಾವಸಾಹೇಬ ಪಾಟೀಲ(35) ಮತ್ತು ಅಭಿಲಾಷ್‌ ಅಶೋಕ ಗುಳಾಪ್ಪನವರ(3) ಮೃತಪಟ್ಟವರು. ಅಭಿಷೇಕ ಶಾಂತಿನಾಥ ಮಾಲಗಾಂವೆ(20), ರಾಜಶ್ರೀ ಪ್ರಕಾಶ ಪಾಟೀಲ(40) ಗಂಭೀರ ಗಾಯಗೊಂಡಿದ್ದು, ಅವರನ್ನು ಮಿರಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರ್ಗಾದೇವಿ ಮಂಡಳದ ಕಾರ್ಯಕರ್ತರು ಮೂರ್ತಿ ವಿಸರ್ಜನೆಗಾಗಿ ಕಾಗವಾಡ-ಗಣೇಶವಾಡಿ ಮಾರ್ಗದ ಮೂಲಕ ಮೆರವಣಿಗೆಯಲ್ಲಿತೆರಳುತ್ತಿದ್ದರು. ಈ ವೇಳೆ ಕಲಬುರಗಿಯಿಂದ ಸಿಮೆಂಟ್‌ ತುಂಬಿಕೊಂಡು ಕೊಲ್ಲಾಪುರಕ್ಕೆ ಹೋಗುತ್ತಿದ್ದ ಲಾರಿ ಮೆರವಣಿಗೆಯಲ್ಲಿಸಾಗುತ್ತಿದ್ದ ಭಕ್ತರ ಮೇಲೆ ಹಾಯ್ದಿದೆ. ಕಾಗವಾಡ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದ್ದು, ಪಿಎಸ್‌ಐ ಹನುಮಂತ ಶಿರಹಟ್ಟಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ