ಆ್ಯಪ್ನಗರ

ಗುಂಪು ಘರ್ಷಣೆ; ಮೂವರಿಗೆ ಗಾಯ

ನಗರದ ಕೃಷ್ಣದೇವರಾಯ ವೃತ್ತದ ಹತ್ತಿರ ಶನಿವಾರ ತಡರಾತ್ರಿ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದು ಮೂವರು ಗಾಯಗೊಂಡಿದ್ದಾರೆ...

Vijaya Karnataka 25 Mar 2019, 5:00 am
ಬೆಳಗಾವಿ: ನಗರದ ಕೃಷ್ಣದೇವರಾಯ ವೃತ್ತದ ಹತ್ತಿರ ಶನಿವಾರ ತಡರಾತ್ರಿ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದು ಮೂವರು ಗಾಯಗೊಂಡಿದ್ದಾರೆ.
Vijaya Karnataka Web three injured in group clash
ಗುಂಪು ಘರ್ಷಣೆ; ಮೂವರಿಗೆ ಗಾಯ


ರಾಮನಗರ ವಡ್ಡರವಾಡಿಯ ನಿವಾಸಿಗಳಾದ ಮಾರುತಿ ರಾಮು ಗಾಡಿವಡ್ಡರ (35), ಲಕ್ಷ ್ಮಣ ಕೃಷ್ಣಾ ಗಾಡಿವಡ್ಡರ (19) ಹಾಗೂ ಮಾರುತಿ ಶೆಟ್ಟೆಪ್ಪ ಬೀರನೊಳ್ಳಿ (39) ಎಂಬುವರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶೇಖ್‌ ಕಾಲೇಜು ರಸ್ತೆಯಲ್ಲಿ ನಿಂತಿದ್ದ ಖಾಸಗಿ ಬಸ್‌ ಹಾರ್ನ್‌ ಬಾರಿಸಿದ್ದಕ್ಕೆ ಕಿರಿಕಿರಿಗೊಂಡ ಕೆಲವು ಯುವಕರು ಬಸ್‌ ಚಾಲಕ ಆಶ್ಬಾಕ್‌ನೊಂದಿಗೆ ವಾಗ್ವಾದ ನಡೆಸಿದ್ದಾರೆ. ರಸ್ತೆಯಲ್ಲಿ ನಿಂತಿದ್ದಕ್ಕೆ ಹಾರ್ನ್‌ ಬಾರಿಸಿರುವುದಾಗಿ ವಾಹನ ಚಾಲಕ ತಿಳಿಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಯುವಕರ ಗುಂಪು ಬಸ್‌ ಚಾಲಕನ ಮೇಲೆ ಹಲ್ಲೆ ನಡೆಸಿ ಸಮೀಪದ ಹೋಟೆಲ್‌ಗೆ ತೆರಳಿದ್ದಾರೆ. ಗಾಂಧಿನಗರದ ಸ್ನೇಹಿತರೊಂದಿಗೆ ಹೊಟೇಲ್‌ಗೆ ಬಂದ ಚಾಲಕ ಯುವಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದಿದ್ದು, ವಡ್ಡರವಾಡಿಯ ಯುವಕರ ಗುಂಪಿನಲ್ಲಿ ಮೂವರು ಗಾಯಗೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಮಾಳಮಾರುತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಘರ್ಷಣೆಯಲ್ಲಿ ತೊಡಗಿದ್ದ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಎರಡೂ ಗುಂಪಿನಿಂದ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ