ಆ್ಯಪ್ನಗರ

ತ್ರಿಚಕ್ರ ವಾಹನ ವಿತರಣೆ ಮತ್ತೆ ಮುಂದೂಡಿಕೆ

ಎಂ.ಕೆ.ಹುಬ್ಬಳ್ಳಿ: ಎಸ್‌ಎಫ್‌ಸಿ ಅನುದಾನದಲ್ಲಿ2018-19 ಮತ್ತು 2019-20ನೇ ಸಾಲಿನ ...

Vijaya Karnataka 21 Feb 2020, 5:00 am
ಎಂ.ಕೆ.ಹುಬ್ಬಳ್ಳಿ: ಎಸ್‌ಎಫ್‌ಸಿ ಅನುದಾನದಲ್ಲಿ2018-19 ಮತ್ತು 2019-20ನೇ ಸಾಲಿನ ಕ್ರಿಯಾ ಯೋಜನೆಯಲ್ಲಿವಿಶೇಷಚೇತನರಿಗೆ ಶೇ. 5ರ ಅನುದಾನದಲ್ಲಿಮಂಜೂರಾದ 5 ತ್ರಿಚಕ್ರ ವಾಹನಗಳ ವಿತರಣೆಯನ್ನು ಮತ್ತೆ ಮುಂದೂಡಲಾಗಿದೆ.
Vijaya Karnataka Web 20MKH1 (1)_53
ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಿಸುವ ಕುರಿತು ಎಂ.ಕೆ.ಹುಬ್ಬಳ್ಳಿ ಪಪಂ ಕಚೇರಿಯಲ್ಲಿಅಧಿಕಾರಿಗಳು ಹಾಗೂ ಸದಸ್ಯರು ಚರ್ಚೆ ನಡೆಸುತ್ತಿರುವುದು.


ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿಶಾಸಕ ಮಹಾಂತೇಶ ದೊಡಗೌಡರ ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲು ಮುಂದಾದಾಗ, ಕೆಲವರು ಫಲಾನುಭವಿಗಳ ಆಯ್ಕೆಯಲ್ಲಿಲೋಪವಾಗಿದೆ ಎಂದು ಆರೋಪಿಸಿದ್ದರು. ಆಗ ಶಾಸಕರು ಅದನ್ನು ಸರಿಪಡಿಸಿ ವಾಹನ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ತೆರಳಿದ್ದರು. ನಂತರ ಶಾಸಕರ ಸೂಚನೆಯಂತೆ ಅಧಿಕಾರಿಗಳು ಶೇ. 75ರಷ್ಟು ಅಂಗವೈಕಲ್ಯ ಇರುವವರು ಫೆ. 19ರವರೆಗೆ ಅರ್ಜಿ ಸಲ್ಲಿಸಬಹುದು. ಫೆ. 20ರಂದು ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಿದ್ದರು.

ಈ ಹಿನ್ನೆಲೆಯಲ್ಲಿಒಟ್ಟು 27 ಜನ ಅರ್ಜಿ ಸಲ್ಲಿಸಿದ್ದರು. ಫೆ. 20ರಂದು ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಚೇರಿಗೆ ಹಾಜರಾಗಲು ಸೂಚಿಸಲಾಗಿತ್ತು. ಸೂಚಿಸಿದಂತೆ ಗುರುವಾರ ನಡೆದ ಸಭೆಗೆ 11 ಜನ ಫಲಾನುಭವಿಗಳು ಆಗಮಿಸಿದ್ದರು. ಆಗ ಮುಖ್ಯಾಧಿಕಾರಿ ಹಾಗೂ ಪಟ್ಟಣದ ಹಿರಿಯರು, ಹಾಜರಾಗದೆ ಇರುವವನ್ನು ಇನ್ನೊಂದು ಬಾರಿ ಕರೆಯಿಸಿ, ಹೆಚ್ಚಿನ ವಿಕಲತೆ ಹೊಂದಿದವರಿಗೆ ಆದ್ಯತೆ ನೀಡಲು ನಿರ್ಣಯಿಸಿದರು. ನಂತರ ಹಿರಿಯರು ಕಾರ್ಯಾಲಯದಿಂದ ತೆರಳಿದರು.

ಇದಾದ ನಂತರ ಪಪಂನ ಕೆಲವು ಸದಸ್ಯರು, ''ಈಗಾಗಲೇ ಪತ್ರಿಕೆಯಲ್ಲಿಫೆ. 20ರಂದು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಪ್ರಕಟಣೆ ನೀಡಲಾಗಿದೆ. ಆದ್ದರಿಂದ ಚೀಟಿ ಹಾಕಿ ಲಾಟರಿ ಮೂಲಕ ಆಯ್ಕೆ ಮಾಡಬೇಕು'', ಎಂದು ಪಟ್ಟುಹಿಡಿದರು. ಇದಕ್ಕೆ ಅಂಗವಿಕಲರ ಸಂಘದ ಕೆಲವು ಸದಸ್ಯರು ಇದಕ್ಕೆ ವಿರೋಧಿಸಿ, ''ಚೀಟಿ ಎತ್ತುವುದರಿಂದ ಹೆಚ್ಚಿನ ವಿಕಲತೆ ಇರುವವರಿಗೆ ಅನ್ಯಾಯವಾಗಬಹುದು, ಆದ್ದರಿಂದ ಚೀಟಿ ಹಾಕುವುದು ಬೇಡ'', ಎಂದರು. ಹೀಗಾಗಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆದರೂ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಆಗ ಮುಖ್ಯಾಧಿಕಾರಿ ಐ.ಸಿ. ಸಿದ್ನಾಳ ವಿತರಣಾ ಕಾರ್ಯವನ್ನು ಮತ್ತೆ ಒಂದು ವಾರ ಮುಂದೂಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ