ಆ್ಯಪ್ನಗರ

ಟಿಕೆಟ್‌ ಹಂಚಿಕೆ ಮಾಡುವುದು ನಾವಲ್ಲ, ಹೈಕಮಾಂಡ್‌

ಬೆಳಗಾವಿ: ''ಶಾಸಕ ಉಮೇಶ ಕತ್ತಿ ಅವರಾಗಲಿ, ನಾನಾಗಲಿ ಟಿಕೆಟ್‌ ...

Vijaya Karnataka 30 Sep 2019, 5:00 am
ಬೆಳಗಾವಿ: ''ಶಾಸಕ ಉಮೇಶ ಕತ್ತಿ ಅವರಾಗಲಿ, ನಾನಾಗಲಿ ಟಿಕೆಟ್‌ ಕೊಡುವುದಿಲ್ಲ. ಹೈಕಮಾಂಡ್‌ ಟಿಕೆಟ್‌ ಹಂಚಿಕೆ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ. ಅದರ ಪ್ರಕಾರ ನಾವು ನಡೆದುಕೊಳ್ಳುತ್ತೇವೆ'' ಎಂದು ಉಪಮುಖ್ಯಮಂತ್ರಿ ಲಕ್ಪ್ಮಣ ಸವದಿ ಹೇಳಿದ್ದಾರೆ.
Vijaya Karnataka Web 29 LBS 1_53


ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ಅನರ್ಹ ಶಾಸಕ ಮಹೇಶ ಕುಮಠಳ್ಳಿಗೆ ಬೈದಿದ್ದಾಗಿ ಹೇಳಿ ಬಹಳ ಹಿಂದಿನ ವಿಡಿಯೊವನ್ನು ಈಗ ವೈರಲ್‌ ಮಾಡಿದ್ದಾರೆ. ನಮ್ಮ ಪರವಾಗಿ ಬ್ಯಾಟಿಂಗ್‌ ಮಾಡಿದರೂ ಸ್ವಾಗತ. ವಿರೋಧ ಮಾಡಿದರೂ ಸ್ವಾಗತ ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ'' ಎಂದರು.

''ವಿರೋಧ ಪಕ್ಷದಲ್ಲಿದವರು ನಮ್ಮನ್ನು ಹೊಗಳಲು ಆಗುವುದಿಲ್ಲ. ನಮ್ಮನ್ನು ತೆಗಳಲೇಬೇಕು. ವಿರೋಧ ಪಕ್ಷದಲ್ಲಿದ್ದುಕೊಂಡು ಅವರ ಕೆಲಸ ಮಾಡುತ್ತಿದ್ದಾರೆ. ಆಡಳಿತದ ಪಕ್ಷದಲ್ಲಿದ್ದು ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಪರಿಹಾರ ಕೊಡಲು ಹಣದ ಕೊರತೆ ಇಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಗೆ 500 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರಕಾರ ಪರಿಹಾರ ನೀಡಲಿದೆ'' ಎಂದರು.

ಒಂದೇ ವಿಮಾನದಲ್ಲಿಪ್ರಯಾಣ:
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಭಾನುವಾರ ಉಪಮುಖ್ಯಮಂತ್ರಿ ಲಕ್ಪ್ಮ ಣ ಸವದಿ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ್‌ ಪಾಟೀಲ ಒಂದೇ ವಿಮಾನದಲ್ಲಿಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ರಮೇಶ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ