ಚನ್ನಮ್ಮನ ಕಿತ್ತೂರು: ಕೆಲವರ ಆಕ್ಷೇಪನೆಯಿಂದಾಗಿ ಕಳೆದ ಒಂದು ವರ್ಷದಿಂದ ಉದ್ಘಾಟನೆ ಭಾಗ್ಯ ಕಾಣದೆ ಮುಸುಕು ಧರಿಸಿಯೇ ಇದ್ದ ಚನ್ನಮ್ಮಾಜಿ ಬಲಗೈಬಂಟರಾದ ಸಂಗೊಳ್ಳಿರಾಯಣ್ಣ ಹಾಗೂ ಅಮಟೂರ ಬಾಳಪ್ಪರ ಮೂರ್ತಿಗಳ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ.
ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮೂರ್ತಿ ಉದ್ಘಾಟನೆಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಭೆಯಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಮಹಾಂತೇಶ ದೊಡಗೌಡರ ಹಾಗೂ ಕಿತ್ತೂರ ಪ್ರಾಧಿಕಾರ ಆಯುಕ್ತರೂ ಆಗಿರುವ ಬೈಲಹೊಂಗಲ ಉಪವಿಭಾಗಾಧಿಕಾರಿ ಭಜಂತ್ರಿ ಅವರು ಈ ವಿಚಾರದಲ್ಲಿ ಎದ್ದಿರುವ ವಿವಾದಗಳಿಗೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಬಾರಿಯ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಈ ಎರಡೂ ಮೂರ್ತಿಗಳನ್ನು ಸ್ಥಾಪಿಸಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿತ್ತು. ಆದರೆ ಮೂರ್ತಿಗಳ ಅಳತೆ ಹಾಗೂ ಸ್ಥಾಪನಾ ಸ್ಥಳದ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು.
ಸಭೆಯಲ್ಲಿ ಶಾಸಕ ಮಹಾಂತೇಶ ದೊಡಗೌಡ ಮಾತನಾಡಿ, ಮೂರ್ತಿಗಳನ್ನು ಈಗಾಗಲೇ ಸ್ಥಾಪಿತ ಸ್ಥಳದಲ್ಲೇ ಜನಾಪೇಕ್ಷೆಯಂತೆ ಇನ್ನಷ್ಟು ಎತ್ತರಕ್ಕೆ ಏರಿಸಿ ಮುಂಬರುವ ಉತ್ಸವದ ಪೂರ್ವದಲ್ಲೇ ಸ್ಥಾಪಿಸಿ ಉದ್ಘಾಟಿಸೋಣ. ಈ ಬಗ್ಗೆ ವಿವಾದಗಳನ್ನು ಹುಟ್ಟು ಹಾಕುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಗಡಾದ ಮರಡಿಯಲ್ಲಿ ರಾಕ್ ಗಾರ್ಡನ್ ನಿರ್ಮಿಸಿ ಅಲ್ಲಿ ಚನ್ನಮ್ಮಾಜಿ ಇತಿಹಾಸ ಸಾರುವ ಕೆಲಸವಾಗಬೇಕು. ಐತಿಹಾಸಿಕ ತುಂಬುಕೆರೆಯ ಮಧ್ಯದಲ್ಲಿ ಎತ್ತರವಾದ ಚನ್ನಮ್ಮಾಜಿ ಮೂರ್ತಿ ಸ್ಥಾಪಿಸಬೇಕು. ಕಿತ್ತೂರ ಅರಸರ ಯಶಸ್ಸಿಗೆ ಕಾರಣೀಕರ್ತರಾದ ರಾಜಗುರುಗಳ ಸಮಾಧಿಗಳು ಚೌಕಿಮಠದಲ್ಲಿದ್ದು ಅಲ್ಲಿ ಅಭಿವ್ಧದ್ಧಿ ಕಾರ್ಯಗಳನ್ನು ಪ್ರಾಧಿಕಾರ ಮಾಡಬೇಕು ಎಂದರು.
ಪ್ರಾಧಿಕಾರ ಆಯುಕ್ತ ಭಜಂತ್ರಿ ಮಾತನಾಡಿ, ಕಿತ್ತೂರ ಅಭಿವೃದ್ಧಿಗೆ ಪ್ರಾಧಿಕಾರದ ವತಿಯಿಂದ ಎಲ್ಲ ಸಹಕಾರ ನೀಡಲಾಗುವುದು. ಇದಕ್ಕೆ ಇಲ್ಲಿನ ಜನರ ಸಹಕಾರ ಅಷ್ಟೇ ಮುಖ್ಯವಾಗಿದೆ ಎಂದರು.
ಸಂದೀಪ ದೇಶಪಾಂಡೆ, ಮಹೇಶ ಚನ್ನಂಗಿ, ಪಪಂ ಸದಸ್ಯ ಹನುಮಂತ ಲಂಗೊಟಿ, ಡಿ.ಎಚ್. ಪಾಟೀಲ, ಬಸನಗೌಡ ಸಿದ್ರಾಮಣಿ, ಸಿ.ಕೆ. ಮೆಕ್ಕೇದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮಣಿ, ಪಪಂ ಸದಸ್ಯ ಕೃಷ್ಣಾ ಬಾಳೇಕುಂದ್ರಿ ಹಾಗೂ ಅನೇಕ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಸ್ವಾಗತಿಸಿ, ವಂದಿಸಿದರು.
ಬೆಂಗಳೂರಿನಲ್ಲಿ ನಡೆಯುವ ಚನ್ನಮ್ಮಾಜಿ ಜಯಂತಿ ಕಾರ್ಯಕ್ರಮ ಕಿತ್ತೂರಲ್ಲಿ ನಡೆಯಬೇಕು. ಚನ್ನಮ್ಮಾಜಿ ಹೆಸರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಕಿತ್ತೂರಿನಲ್ಲಿಯೇ ಆಚರಿಸುವಂತಾಗಬೇಕು ಎಂದು ಸಚಿವೆ ಜಯಮಾಲಾ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ.
- ಮಹಾಂತೇಶ ದೊಡಗೌಡರ, ಶಾಸಕ
ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಮೂರ್ತಿ ಉದ್ಘಾಟನೆಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಸಭೆಯಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಮಹಾಂತೇಶ ದೊಡಗೌಡರ ಹಾಗೂ ಕಿತ್ತೂರ ಪ್ರಾಧಿಕಾರ ಆಯುಕ್ತರೂ ಆಗಿರುವ ಬೈಲಹೊಂಗಲ ಉಪವಿಭಾಗಾಧಿಕಾರಿ ಭಜಂತ್ರಿ ಅವರು ಈ ವಿಚಾರದಲ್ಲಿ ಎದ್ದಿರುವ ವಿವಾದಗಳಿಗೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಬಾರಿಯ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಈ ಎರಡೂ ಮೂರ್ತಿಗಳನ್ನು ಸ್ಥಾಪಿಸಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿತ್ತು. ಆದರೆ ಮೂರ್ತಿಗಳ ಅಳತೆ ಹಾಗೂ ಸ್ಥಾಪನಾ ಸ್ಥಳದ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು.
ಸಭೆಯಲ್ಲಿ ಶಾಸಕ ಮಹಾಂತೇಶ ದೊಡಗೌಡ ಮಾತನಾಡಿ, ಮೂರ್ತಿಗಳನ್ನು ಈಗಾಗಲೇ ಸ್ಥಾಪಿತ ಸ್ಥಳದಲ್ಲೇ ಜನಾಪೇಕ್ಷೆಯಂತೆ ಇನ್ನಷ್ಟು ಎತ್ತರಕ್ಕೆ ಏರಿಸಿ ಮುಂಬರುವ ಉತ್ಸವದ ಪೂರ್ವದಲ್ಲೇ ಸ್ಥಾಪಿಸಿ ಉದ್ಘಾಟಿಸೋಣ. ಈ ಬಗ್ಗೆ ವಿವಾದಗಳನ್ನು ಹುಟ್ಟು ಹಾಕುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಐತಿಹಾಸಿಕ ಗಡಾದ ಮರಡಿಯಲ್ಲಿ ರಾಕ್ ಗಾರ್ಡನ್ ನಿರ್ಮಿಸಿ ಅಲ್ಲಿ ಚನ್ನಮ್ಮಾಜಿ ಇತಿಹಾಸ ಸಾರುವ ಕೆಲಸವಾಗಬೇಕು. ಐತಿಹಾಸಿಕ ತುಂಬುಕೆರೆಯ ಮಧ್ಯದಲ್ಲಿ ಎತ್ತರವಾದ ಚನ್ನಮ್ಮಾಜಿ ಮೂರ್ತಿ ಸ್ಥಾಪಿಸಬೇಕು. ಕಿತ್ತೂರ ಅರಸರ ಯಶಸ್ಸಿಗೆ ಕಾರಣೀಕರ್ತರಾದ ರಾಜಗುರುಗಳ ಸಮಾಧಿಗಳು ಚೌಕಿಮಠದಲ್ಲಿದ್ದು ಅಲ್ಲಿ ಅಭಿವ್ಧದ್ಧಿ ಕಾರ್ಯಗಳನ್ನು ಪ್ರಾಧಿಕಾರ ಮಾಡಬೇಕು ಎಂದರು.
ಪ್ರಾಧಿಕಾರ ಆಯುಕ್ತ ಭಜಂತ್ರಿ ಮಾತನಾಡಿ, ಕಿತ್ತೂರ ಅಭಿವೃದ್ಧಿಗೆ ಪ್ರಾಧಿಕಾರದ ವತಿಯಿಂದ ಎಲ್ಲ ಸಹಕಾರ ನೀಡಲಾಗುವುದು. ಇದಕ್ಕೆ ಇಲ್ಲಿನ ಜನರ ಸಹಕಾರ ಅಷ್ಟೇ ಮುಖ್ಯವಾಗಿದೆ ಎಂದರು.
ಸಂದೀಪ ದೇಶಪಾಂಡೆ, ಮಹೇಶ ಚನ್ನಂಗಿ, ಪಪಂ ಸದಸ್ಯ ಹನುಮಂತ ಲಂಗೊಟಿ, ಡಿ.ಎಚ್. ಪಾಟೀಲ, ಬಸನಗೌಡ ಸಿದ್ರಾಮಣಿ, ಸಿ.ಕೆ. ಮೆಕ್ಕೇದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮಣಿ, ಪಪಂ ಸದಸ್ಯ ಕೃಷ್ಣಾ ಬಾಳೇಕುಂದ್ರಿ ಹಾಗೂ ಅನೇಕ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ ಸ್ವಾಗತಿಸಿ, ವಂದಿಸಿದರು.
ಬೆಂಗಳೂರಿನಲ್ಲಿ ನಡೆಯುವ ಚನ್ನಮ್ಮಾಜಿ ಜಯಂತಿ ಕಾರ್ಯಕ್ರಮ ಕಿತ್ತೂರಲ್ಲಿ ನಡೆಯಬೇಕು. ಚನ್ನಮ್ಮಾಜಿ ಹೆಸರಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಕಿತ್ತೂರಿನಲ್ಲಿಯೇ ಆಚರಿಸುವಂತಾಗಬೇಕು ಎಂದು ಸಚಿವೆ ಜಯಮಾಲಾ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ.
- ಮಹಾಂತೇಶ ದೊಡಗೌಡರ, ಶಾಸಕ