ಹಿರೇಬಾಗೇವಾಡಿ: ಗ್ರಾಮದ ಬೈಲಹೊಂಗಲಕ್ಕೆ ತೆರಳುವ ಬಸ್ ತಂಗುದಾಣದ ಬಳಿ ಗುರುವಾರ ಟಿಪ್ಪರ್ ಹಾಯ್ದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಗ್ರಾಮದ ಪೇಟೆ ಬೀದಿ ನಿವಾಸಿ ಬಸಪ್ಪ ಬಸವಂತಪ್ಪ ಕಪರಿ(65) ಗಾಯಗೊಂಡಿದ್ದಾರೆ. ಇವರು ಬಸ್ ತಂಗುದಾಣದ ಬಳಿ ನಿಂತಿದ್ದಾಗ ಬಸಾಪುರ ಕಡೆಯಿಂದ ಜೆಲ್ಲಿಕಲ್ಲುಸಾಗಿಸುತ್ತಿದ್ದ ಟಿಪ್ಪರ್ ಹಾಯ್ದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿಬೈಕ್ ಜಖಂಗೊಂಡಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಟಿಪ್ಪರ್ ಹಾಯ್ದು ಬೈಕ್ ಸವಾರನಿಗೆ ಗಾಯ
ಹಿರೇಬಾಗೇವಾಡಿ: ಗ್ರಾಮದ ಬೈಲಹೊಂಗಲಕ್ಕೆ ತೆರಳುವ ಬಸ್ ...
Vijaya Karnataka 31 Jan 2020, 5:00 am