ಆ್ಯಪ್ನಗರ

ನಾಳೆ ರಾಜ್ಯಮಟ್ಟದ ಸಂಶೋಧನಾ ಸಂವಾದ

ಹಾರೂಗೇರಿ: ಸ್ಥಳೀಯ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿಆರ್‌ ದರೂರ ಸಂಶೋಧನಾ ...

Vijaya Karnataka 13 Oct 2019, 5:00 am
ಹಾರೂಗೇರಿ: ಸ್ಥಳೀಯ ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಬಿ.ಆರ್‌. ದರೂರ ಸಂಶೋಧನಾ ಕೇಂದ್ರ ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಬಿಸಿಎ ಮಹಾವಿದ್ಯಾಲಯದ ಸಭಾಭವನದಲ್ಲಿಅ.14ರಂದು 'ಸಂಶೋಧನ ವಿನ್ಯಾಸ ಮತ್ತು ವೈಧಾನಿಕತೆ' ವಿಷಯದ ಮೇಲೆ ರಾಜ್ಯಮಟ್ಟದ ಒಂದು ದಿನದ ಸಂವಾದ ಕಾರ್ಯಕ್ರಮ ನಡೆಯಲಿದೆ.
Vijaya Karnataka Web tomorrow state level research conversation
ನಾಳೆ ರಾಜ್ಯಮಟ್ಟದ ಸಂಶೋಧನಾ ಸಂವಾದ


ಸಂಸ್ಥೆ ಅಧ್ಯಕ್ಷ ಗಿರೀಶ ದರೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಯಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಸ.ಚಿ. ರಮೇಶ ಆಗಮಿಸುವರು. ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಗ್ರಂಥ ಲೋಕಾರ್ಪಣೆಗೊಳಿಸುವರು. ಹಂಪಿ ಕನ್ನಡ ವಿವಿ ಭಾಷಾ ನಿಕಾಯ ಡೀನ್‌ ಡಾ. ವೀರೇಶ ಬಡಿಗೇರ ಸಮಾರೋಪ ನುಡಿಗಳನ್ನಾಡುವರು. ವಿಶೇಷ ಆಮಂತ್ರಿತರಾಗಿ ಸಾಹಿತಿ ಡಾ. ಎಸ್‌.ಬಿ. ಉತ್ನಾಳ ಆಗಮಿಸಲಿದ್ದಾರೆ ಎಂದು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿ.ಎಸ್‌. ಮಾಳಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ