ಆ್ಯಪ್ನಗರ

ಇಂದು ರಾಜ್ಯ ಮಟ್ಟದ ಟ್ರ್ಯಾಕ್‌ ಸಿಂಗಿಂಗ್‌ ಸ್ಪರ್ಧೆ, ಸಂಗೀತ ಸಂಜೆ

ವಿಕ ಸುದ್ದಿಲೋಕ, ಬೈಲಹೊಂಗಲ ಪಟ್ಟಣದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಸಂಗೀತ ಸುಧೆ, ಟ್ರ್ಯಾಕ್‌ ಸಿಂಗಿಂಗ್‌ ಜೆಸಿಎಂ ಅವಾರ್ಡ್ಸ್ 2018 ಗ್ರ್ಯಾಂಡ್‌ ಫಿನಾಲೆ ಸ್ಪರ್ಧೆ ...

Vijaya Karnataka 4 Mar 2018, 5:00 am

ಬೈಲಹೊಂಗಲ: ಪಟ್ಟಣದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಸಂಗೀತ ಸುಧೆ, ಟ್ರ್ಯಾಕ್‌ ಸಿಂಗಿಂಗ್‌ ಜೆಸಿಎಂ ಅವಾರ್ಡ್ಸ್ 2018 ಗ್ರ್ಯಾಂಡ್‌ ಫಿನಾಲೆ ಸ್ಪರ್ಧೆ ಭಾನುವಾರ ಸಂಜೆ 6ಕ್ಕೆ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿಮಾನಿ ಬಳಗದ ಆಶ್ರಯದಲ್ಲಿ ನಡೆಯಲಿದೆ.

ಯುವ ಧುರೀಣ ಸಂತೋಷ ಹಡಪದ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸಂಗೀತದೊಂದಿಗೆ ಹಾಡುವ ಲೈವ್‌ ಶೋ ಇದಾಗಿದ್ದು, ಅಂತಿಮ ಹಂತ ಪ್ರವೇಶಿಸಿರುವ ಹತ್ತು ಗಾಯಕರ ನಡುವೆ ಈ ಸ್ಪರ್ಧೆ ಜರುಗಲಿದೆ. ಉತ್ತಮ ಗಾಯಕರಾಗಿ ಹೊರಹೊಮ್ಮಿದ ಮೂವರು ಅನುಕ್ರಮವಾಗಿ 20, 15, 10 ಸಾವಿರ ರೂ. ಬಹುಮಾನ ಹಾಗೂ ಟ್ರೋಫಿ ಪಡೆಯಲಿದ್ದಾರೆ ಎಂದರು.

ನಿವೃತ್ತ ಮುಖ್ಯಾಧ್ಯಾಪಕ ಎಂ.ಎ.ನಾಯಿಕ ಮಾತನಾಡಿ, ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಟ್ಟಣದ ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ, ಬೈಲೂರ ತೋಂಟದಾರ್ಯ ನಿಜಗುಣಾನಂದ ಸ್ವಾಮೀಜಿ, ಆರಾದ್ರಿಮಠದ ಮಹಾಂತೇಶ ಶಾಸ್ತ್ರಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಗಣ್ಯರು ಉಪಸ್ಥಿತರಿರುವರು. 10 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಸಂಗೀತ ಪ್ರೇಮಿಗಳಿಗೆ ಅಗತ್ಯ ಎಲ್ಲ ಅನುಕೂಲ ಕಲ್ಪಿಸಲಾಗಿದೆ. ಕಿರುತೆರೆ ಕಲಾವಿದೆ ರಂಜನಿ ರಾಘವನ್‌, ಸರಿಗಮಪ ಖ್ಯಾತಿಯ ಚನ್ನಪ್ಪ ಹುದ್ದಾರ, ಸುಹಾನಾ ಸಯ್ಯದ್‌, ಇಂಪನಾ, ಸುಪ್ರೀತ ಫಾಲ್ಗುಣ, ವಿಶ್ವಪ್ರಸಾದ ಗಾಣಗಿ ಪಾಲ್ಗೊಳ್ಳಲಿದ್ದಾರೆ ಎಂದರು.

Vijaya Karnataka Web track singing
ಇಂದು ರಾಜ್ಯ ಮಟ್ಟದ ಟ್ರ್ಯಾಕ್‌ ಸಿಂಗಿಂಗ್‌ ಸ್ಪರ್ಧೆ, ಸಂಗೀತ ಸಂಜೆ

ಯುವ ಧುರೀಣ ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಕಲಾವಿದ ಕುಮಾರ ಬೋರಕನವರ, ಚಂದ್ರಶೇಖರ ಸವದತ್ತಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ