ಆ್ಯಪ್ನಗರ

ವ್ಯಾಪಾರಿ ಅಶೋಕ ಛಾಪರವಾಲ ಹತ್ಯೆ ಪ್ರಕರಣ: ಇಬ್ಬರ ಬಂಧನ

ಇಚಲಕರಂಜಿ: ತಾರದಾಳ-ಹಾತಕಣಂಗಲೆ ರಸ್ತೆಯಲ್ಲಿ ಇಲ್ಲಿನ ವ್ಯಾಪಾರಿ ಅಶೋಕ ಸತ್ಯನಾರಾಯಣ ಛಾಪರವಾಲ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಥಕಣಂಗಲೆ ಪೊಲೀಸರು ...

Vijaya Karnataka 21 Jan 2019, 5:00 am
ಇಚಲಕರಂಜಿ : ತಾರದಾಳ-ಹಾತಕಣಂಗಲೆ ರಸ್ತೆಯಲ್ಲಿ ಇಲ್ಲಿನ ವ್ಯಾಪಾರಿ ಅಶೋಕ ಸತ್ಯನಾರಾಯಣ ಛಾಪರವಾಲ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಥಕಣಂಗಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web BEL-20ICH7


ತಾರದಾಳದ ಸಂದೀಪ ಗುರವ (29) ಹಾಗೂ ನೇರ್ಲಿಯ ಪ್ರತೀಕ ಗುರವ (22) ಬಂಧಿತರು. ಇಬ್ಬರೂ ಮರವೊಂದರ ಕೆಳಗೆ ನಿಂತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಧಾವಿಸಿದ ಪೊಲೀಸರು ವಿಚಾರಿಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಹತ್ಯೆಯಾದ ಅಶೋಕ ಹಾಗೂ ಸಂದೀಪ ಗುರವ ಪೆನ್ಸಿಲ್‌ ತಯಾರಿಸುವ ಕಾರ್ಖಾನೆ ಪ್ರಾರಂಭಿಸಿದ್ದರು. ಅದನ್ನು ಸ್ವತಃ ಸಂದೀಪ ನಡೆಸುತ್ತಿದ್ದ. ಅಶೋಕ ಅವರಿಂದ ಶೇ.10ರ ಬಡ್ಡಿ ದರದಲ್ಲಿ ಹಣ ಪಡೆದಿದ್ದ. ತಾನು ಕೊಟ್ಟ ಹಣವನ್ನು ಬಡ್ಡಿ ಸಮೇತ ತೀರಿಸಬೇಕೆಂದು ಅಶೋಕ ಅವರು ಸಂದೀಪನಿಗೆ ಪೀಡಿಸುತ್ತಿದ್ದು ಇದನ್ನು ಸಹಿಸದೆ ಸಂದೀಪ ತನ್ನ ಸಹೋದರ ಪ್ರತೀಕಜತೆ ಸೇರಿ ಅಶೋಕ ಛಾಪರವಾಲನಿಗೆ ಚರಸ ಹಾಗೂ ಗಾಂಜಾ ವ್ಯಾಪಾರ ಪ್ರಾರಂಭಿಸೋಣವೆಂದು ನಂಬಿಸಿ ಅವರನ್ನು ತಾರದಾಳ ಗಡಿಯಲ್ಲಿ ಕರೆಸಿಕೊಂಡು ಹತ್ಯೆಗೈದಿರುವುದಾಗಿ ಆರೋಪಿತರು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಬೆಳಗಿನಜಾವ ಅಶೋಕ ಸತ್ಯನಾರಾಯಣ ಛಾಪರವಾಲ (39) ಅವರನ್ನು ಹರಿತ ಆಯುಧಗಳಿಂದ ಹತ್ಯೆಗೈದು ರಸ್ತೆ ಪಕ್ಕಕ್ಕೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಕುರಿತು ವ್ಯಾಪಾರಿಯ ಸಹೋದರ ಗಿರೀಶ ಛಾಪರವಾಲ ಹಾತಕಣಂಗಲೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ