ಆ್ಯಪ್ನಗರ

ಪ್ರವಾಹದಿಂದ ವ್ಯಾಪಾರಸ್ಥರ ಬದುಕೇ ಅಸ್ತವ್ಯಸ್ತ

ಬಸನಗೌಡ ಪಾಟೀಲ ಸುರೇಬಾನ ಮಲಪ್ರಭಾ ನದಿ ಪ್ರವಾಹದಿಂದ ಸುರೇಬಾನ ಸುತ್ತಮುತ್ತಲಿನ ...

Vijaya Karnataka 15 Sep 2019, 5:00 am
ಬಸನಗೌಡ ಪಾಟೀಲ ಸುರೇಬಾನ
Vijaya Karnataka Web 14 SBN 2_53

ಮಲಪ್ರಭಾ ನದಿ ಪ್ರವಾಹದಿಂದ ಸುರೇಬಾನ ಸುತ್ತಮುತ್ತಲಿನ ವ್ಯಾಪಾರಸ್ಥರ ಬದುಕು ಮೂರಾಬಟ್ಟೆಯಾಗಿದ್ದು, ಅವರು ಇನ್ನೂ ಚೇತರಿಸಿಕೊಳ್ಳುವ ಹಂತದಲ್ಲೇ ಇದ್ದಾರೆ.

ಪ್ರವಾಹ ಪೀಡಿತ ಕುಟುಂಬಗಳಿಗೆ ಸರಕಾರ ತಾತ್ಕಾಲಿಕ ಜೀವನೋಪಾಯಕ್ಕೆಂದು 10 ಸಾವಿರ ರೂ. ನೀಡಿದೆ. ಆದರೆ ಈ ಭಾಗದಲ್ಲಿನ ಕಿರಾಣಿ ಅಂಗಡಿ, ಬಟ್ಟೆ ಅಂಗಡಿ, ರಸಗೊಬ್ಬರ ಅಂಗಡಿ, ಗ್ಯಾರೇಜು, ಕಾರ್ಪೆಂಟರ್‌ ಅಂಗಡಿ ಸೇರಿದಂತೆ ಅನೇಕ ವ್ಯಾಪಾರಿಗಳ ಸಾಮಗ್ರಿಗಳು ನದಿ ನೀರಿನಲ್ಲಿಕೊಚ್ಚಿ ಹೋಗಿವೆ. ಸಾಲ ಮಾಡಿ ಸ್ವಯಂ ಉದ್ಯೋಗ ಮಾಡಿಕೊಂಡಿದ್ದ ವ್ಯಾಪಾರಿಗಳ ಬಾಳನ್ನು ನದಿ ಪ್ರವಾಹ ಕತ್ತಲಾಗಿಸಿದೆ. ಏಳೆಂಟು ವರ್ಷಗಳಿಂದ ಬರಗಾಲ ಆವರಿಸಿದ್ದರಿಂದ ರೈತರಿಗೆ, ಕೂಲಿಕಾರರಿಗೆ ಕೊಟ್ಟ ಬಾಕಿ ಬರದೇ ಇರುವುದು ವ್ಯಾಪಾರಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಸರಕಾರ ನೀಡಿರುವ ತಾತ್ಕಾಲಿಕ ಪರಿಹಾರ ಯಾವುದಕ್ಕೂ ಸಾಲದಂತಾಗಿದೆ.

ಯಂತ್ರಗಳು ನಾಶ:
ಟ್ರಾತ್ರ್ಯಕ್ಟರ್‌ ಸೇರಿದಂತೆ ವಿವಿಧ ವಾಹನಗಳ ಬಿಡಿಭಾಗಗಳು, ಇಟ್ಟಿಗೆ ತಯಾರಿ ಯಂತ್ರಗಳು ಸೇರಿದಂತೆ ನಾನಾ ಯಂತ್ರಗಳು ಪ್ರವಾಹದಲ್ಲಿನಾಶವಾಗಿವೆ. ರಸಗೊಬ್ಬರ ವ್ಯಾಪಾರಿಗಳ ಗೋದಾಮಿನಲ್ಲಿಇಟ್ಟಿದ್ದ ಗೊಬ್ಬರಗಳು ನೀರಿಗೆ ಆಹುತಿಯಾಗಿವೆ.

ಡಬ್ಬಾ ಅಂಗಡಿಗಳು ನಾಪತ್ತೆ:
ರಸ್ತೆ ಬದಿಯಲ್ಲಿಗ್ಯಾರೇಜ್‌, ದ್ವಿಚಕ್ರವಾಹನ ದುರಸ್ತಿ, ಹಗ್ಗ ಸೇರಿದಂತೆ ಅನೇಕ ವಸ್ತುಗಳ ವ್ಯಾಪಾರ ಮಾಡುತ್ತಿದ್ದವರ ಡಬ್ಬಾ ಅಂಗಡಿಗಳು ದಿಕ್ಕಾಪಾಲಾಗಿವೆ.

ಕಾರ್ಯರೂಪಕ್ಕೆ ಬಾರದ ಸಿಎಂ ಸೂಚನೆ:
ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸುರೇಬಾನ ಹಾಗೂ ಹಂಪಿಹೊಳಿ ಗ್ರಾಮಕ್ಕೆ ಇತ್ತೀಚೆಗಷ್ಟೇ ಆಗಮಿಸಿದ್ದರು. ಆಗ ಸಂತ್ರಸ್ತ ವ್ಯಾಪಾರಸ್ಥರಿಗೆ ತಾತ್ಕಾಲಿಕ 10 ಸಾವಿರ ರೂ. ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೂ ಅದರ ಬಗೆಗೆ ಯಾವುದೇ ಕ್ರಮ ಕೈಗೊಂಡಿಲ್ಲಎಂದು ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಾರೆ.

* ಸುರೇಬಾನ ಸುತ್ತಮುತ್ತಲಿನ ವ್ಯಾಪಾರಸ್ಥರ ಹಾನಿ ಕುರಿತು ಸಮೀಕ್ಷೆ ನಡೆಸಿ, ಪರಿಹಾರ ನೀಡುವಂತೆ ಸ್ಥಳೀಯ ವರ್ತಕರ ಸಂಘದಿಂದ ತಹಸೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೀಘ್ರ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕಿದೆ.
- ನಾಗರಾಜ ಬೇವಿನಕಟ್ಟಿ, ಸುರೇಬಾನ ವರ್ತಕರ ಸಂಘದ ಅಧ್ಯಕ್ಷ

* ವ್ಯಾಪಾರಸ್ಥರಿಗೂ ಮುಖ್ಯಮಂತ್ರಿ ಪರಿಹಾರ ಘೋಷಣೆ ಮಾಡಿದ್ದಾರೆ. ಆರ್ಥಿಕ ಇಲಾಖೆಗೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದಾರೆ. ಲಿಖಿತ ಆದೇಶ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
- ಬಸನಗೌಡ ಕೋಟೂರ, ತಹಸೀಲ್ದಾರ, ರಾಮದುರ್ಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ