ಆ್ಯಪ್ನಗರ

ಗಣ್ಯರಿಗಾಗಿ ಸಂಚಾರ ಬಂದ್‌; ಜನರಿಗೆ ತೀವ್ರ ತೊಂದರೆ

ಬೆಳಗಾವಿ/ಬಾಳೆಕುಂದ್ರಿ: ಶನಿವಾರ ಒಂದೇ ದಿನ ಹಲವು ಗಣ್ಯರು ಬೆಳಗಾವಿಗೆ ಬಂದಿದ್ದರಿಂದ ನಗರದ ಸಂಚಾರ ವ್ಯವಸ್ಥೆ ಸಂಪೂರ್ಣ ಬದಲಾಗಿ ಜನಸಾಮಾನ್ಯರು ತೀವ್ರ ತೊಂದರೆಗೆ ...

Vijaya Karnataka 16 Sep 2018, 5:00 am
ಬೆಳಗಾವಿ/ಬಾಳೆಕುಂದ್ರಿ: ಶನಿವಾರ ಒಂದೇ ದಿನ ಹಲವು ಗಣ್ಯರು ಬೆಳಗಾವಿಗೆ ಬಂದಿದ್ದರಿಂದ ನಗರದ ಸಂಚಾರ ವ್ಯವಸ್ಥೆ ಸಂಪೂರ್ಣ ಬದಲಾಗಿ ಜನಸಾಮಾನ್ಯರು ತೀವ್ರ ತೊಂದರೆಗೆ ಒಳಗಾದರು.
Vijaya Karnataka Web BEL-15 BLK 1 PTO


ಕೆಎಲ್‌ಎಸ್‌ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಬಂದರೆ, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಕೆಲ ಗಣ್ಯರು ಶುಕ್ರವಾರವೇ ಬಂದು ನಗರದಲ್ಲಿ ವಾಸ್ತವ್ಯ ಹೂಡಿದ್ದರು. ರಾಷ್ಟ್ರಪತಿ ಬರುವ ಹಿನ್ನೆಲೆಯಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಐಟಿ ಕಾಲೇಜುವರೆಗೆ ಬೆಳಗ್ಗೆ 10 ಗಂಟೆಯಿಂದ ಸಾರ್ವಜನಿಕ ವಾಹನ ಸಂಚಾರ ನಿಷೇಧಿಸಲಾಗಿತ್ತು.

ಪ್ರಮುಖ ಮಾರ್ಗವೇ ಬಂದ್‌ ಆಗಿದ್ದರಿಂದ ಸಾರ್ವಜನಿಕರು ವಿಪರೀತ ತೊಂದರೆ ಅನುಭವಿಸಿದರು. ಗಣ್ಯರ ಪ್ರಯಾಣದ ವೇಳೆ ಖಾನಾಪುರ ರಸ್ತೆ ಮತ್ತು ಚನ್ನಮ್ಮ ವೃತ್ತದ ವರೆಗೆ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣಪತಿ ವೀಕ್ಷಣೆಗೆ ಬಂದ ಗ್ರಾಮೀಣ ಭಾಗದ ಜನರು ಕೂಡ ಇದರಿಂದ ತೊಂದರೆ ಅನುಭವಿಸಿದರು. ಮಧ್ಯಾಹ್ನ ಸುಮಾರು ಒಂದು ಗಂಟೆ ನಂತರ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬಂತು.

ಸಿಎಂಗೂ ಬಿಸಿ: ಮಧ್ಯಾಹ್ನ 11.15ರ ವೇಳೆಗೆ ಎಚ್‌.ಡಿ. ಕುಮಾರಸ್ವಾಮಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಚನ್ನಮ್ಮ ವೃತ್ತದ ಕಡೆ ಬಂದಿದ್ದರು. ಅದಕ್ಕಾಗಿ ಚನ್ನಮ್ಮ ವೃತ್ತಕ್ಕೆ ಸೇರುವ ಇತರ ರಸ್ತೆಗಳ ಸಂಚಾರ ಬಂದ್‌ ಮಾಡಲಾಗಿತ್ತು. ಆದರೆ, ಕೆಎಲ್‌ಇ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಅವರೂ ಇದೇ ವೇಳೆಗೆ ಚನ್ನಮ್ಮ ವೃತ್ತದ ಕಡೆ ಬಂದಿದ್ದರಿಂದ ಸಂಚಾರಿ ಪೊಲೀಸರು ಗೊಂದಲಕ್ಕೆ ಒಳಗಾದರು. ನ್ಯಾಯಮೂರ್ತಿಗಳು ಸಂಚರಿಸುವ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿದ್ದರಿಂದ ಅವರ ಬೆಂಗಾವಲು ಸಿಬ್ಬಂದಿ, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಬ್ಯಾರಿಕೇಡ್‌ ಪಕ್ಕಕ್ಕೆ ಸರಿಸಿ ಮುಂದೆ ಸಾಗಿದರು. ಹೀಗಾಗಿ ಮುಖ್ಯಮಂತ್ರಿಗಳು ಸಂಚರಿಸುತ್ತಿದ್ದ ವಾಹನ ಕೆಲ ನಿಮಿಷ ಚನ್ನಮ್ಮ ವೃತ್ತದಲ್ಲಿಯೇ ನಿಂತಿತ್ತು. ನ್ಯಾಯಮೂರ್ತಿ ಅವರ ವಾಹನ ತೆರಳಿದ ಬಳಿಕ ಸಿಎಂ ಇದ್ದ ವಾಹನ ಸಾಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ