ಮುರಗೋಡ - ಹಲಕಿ ಕ್ರಾಸ್ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ
ಮುರಗೋಡ: ಗ್ರಾಮದಿಂದ ಹಲಕಿ ಕ್ರಾಸ್ ತಲುಪುವ ...
Vijaya Karnataka 2 Jun 2020, 5:00 am
ಮುರಗೋಡ: ಗ್ರಾಮದಿಂದ ಹಲಕಿ ಕ್ರಾಸ್ ತಲುಪುವ 4 ಕಿ.ಮೀ. ಮುಖ್ಯ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದೆ.
ಇದೀಗ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಈ ರಸ್ತೆಯಲ್ಲಿತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಅವುಗಳಲ್ಲಿನೀರು ತುಂಬಿಕೊಂಡಿದ್ದು, ವಾಹನ ಸವಾರರು ಆಯತಪ್ಪಿ ಬಿದ್ದು ಕೈ ಕಾಲು ಕೆತ್ತಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ.
ಇಲ್ಲಿನಿತ್ಯ ಬಸ್ಗಳು, ದ್ವಿಚಕ್ರ ವಾಹನಗಳು ಹಾಗೂ ಖಾಸಗಿ ವಾಹನಗಳು ಸಂಚರಿಸುವುದು ಅಧಿಕ. ಕೃಷಿ ಉತ್ಪನ್ನಗಳು ಸೇರಿದಂತೆ ನಾನಾ ವಸ್ತುಗಳನ್ನು ತುಂಬಿದ ಟ್ರಾತ್ರ್ಯಕ್ಟರ್, ಟ್ರಕ್ಗಳ ಚಾಲಕರು ಈ ರಸ್ತೆ ಮೂಲಕ ಸಾಗಲು ಪರದಾಡುವಂತಾಗಿದೆ.
ಸಮೀಪದ ಸುಬ್ಬಾಪುರ, ರಾಮಾಪುರ ತಾಂಡೆ, ಹೂಲಿಕೇರಿ ತಾಂಡೆ, ರುದ್ರಾಪುರ ತಾಂಡೆ, ತಲ್ಲೂರ ಸೇರಿದಂತೆ ಬಹುತೇಕ ಸುತ್ತಮುತ್ತಲಿನ ಹಲವಾರು ಗ್ರಾಮಗಳ ರಸ್ತೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿಅಧಿಕಾರಿಗಳು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಅನೇಕ ಸಲ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದರೂ ರಸ್ತೆಗಳು ಮಾತ್ರ ದುರಸ್ತಿ ಆಗಿಲ್ಲ. ಇನ್ನುಮೇಲಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಪ ಸದಸ್ಯ ಬಸವರಾಜ ಬಂಡಿವಡ್ಡರ ಅವರ ಗಮನ ಸೆಳೆದಾಗ ಅವರು, ''ರಸ್ತೆಗಳ ದುರವಸ್ಥೆಯನ್ನು ಗಮನಿಸಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು'', ಎಂಬ ಭರವಸೆ ನೀಡಿದ್ದಾರೆ.
ಇದೀಗ ಮುಂಗಾರು ಮಳೆ ಸುರಿಯುತ್ತಿರುವುದರಿಂದ ಈ ರಸ್ತೆಯಲ್ಲಿತಗ್ಗು ಗುಂಡಿಗಳು ನಿರ್ಮಾಣವಾಗಿವೆ. ಅವುಗಳಲ್ಲಿನೀರು ತುಂಬಿಕೊಂಡಿದ್ದು, ವಾಹನ ಸವಾರರು ಆಯತಪ್ಪಿ ಬಿದ್ದು ಕೈ ಕಾಲು ಕೆತ್ತಿಸಿಕೊಂಡು ಮನೆಗೆ ಹೋಗುತ್ತಿದ್ದಾರೆ.
ಇಲ್ಲಿನಿತ್ಯ ಬಸ್ಗಳು, ದ್ವಿಚಕ್ರ ವಾಹನಗಳು ಹಾಗೂ ಖಾಸಗಿ ವಾಹನಗಳು ಸಂಚರಿಸುವುದು ಅಧಿಕ. ಕೃಷಿ ಉತ್ಪನ್ನಗಳು ಸೇರಿದಂತೆ ನಾನಾ ವಸ್ತುಗಳನ್ನು ತುಂಬಿದ ಟ್ರಾತ್ರ್ಯಕ್ಟರ್, ಟ್ರಕ್ಗಳ ಚಾಲಕರು ಈ ರಸ್ತೆ ಮೂಲಕ ಸಾಗಲು ಪರದಾಡುವಂತಾಗಿದೆ.
ಸಮೀಪದ ಸುಬ್ಬಾಪುರ, ರಾಮಾಪುರ ತಾಂಡೆ, ಹೂಲಿಕೇರಿ ತಾಂಡೆ, ರುದ್ರಾಪುರ ತಾಂಡೆ, ತಲ್ಲೂರ ಸೇರಿದಂತೆ ಬಹುತೇಕ ಸುತ್ತಮುತ್ತಲಿನ ಹಲವಾರು ಗ್ರಾಮಗಳ ರಸ್ತೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿಅಧಿಕಾರಿಗಳು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಅನೇಕ ಸಲ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದರೂ ರಸ್ತೆಗಳು ಮಾತ್ರ ದುರಸ್ತಿ ಆಗಿಲ್ಲ. ಇನ್ನುಮೇಲಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಪ ಸದಸ್ಯ ಬಸವರಾಜ ಬಂಡಿವಡ್ಡರ ಅವರ ಗಮನ ಸೆಳೆದಾಗ ಅವರು, ''ರಸ್ತೆಗಳ ದುರವಸ್ಥೆಯನ್ನು ಗಮನಿಸಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು'', ಎಂಬ ಭರವಸೆ ನೀಡಿದ್ದಾರೆ.