ಆ್ಯಪ್ನಗರ

ಹೆದ್ದಾರಿಯ ಸರ್ವಿಸ್‌ ರಸ್ತೆಗಳಲ್ಲಿ ಸಂಚಾರ ದುಸ್ತರ

ಸಂಜೀವಕುಮಾರ ತಿಲಗರ ಎಂಕೆ...

Vijaya Karnataka 4 Sep 2018, 5:00 am
ಸಂಜೀವಕುಮಾರ ತಿಲಗರ ಎಂ.ಕೆ.ಹುಬ್ಬಳ್ಳಿ
Vijaya Karnataka Web BEL-03MKH1(1)


ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್‌ ರಸ್ತೆಗಳು ಹಲವಾರು ದಿನಗಳಿಂದ ದುರಸ್ತಿ ಕಾಣದೆ ಹದಗೆಟ್ಟಿದ್ದು, ವಾಹನ ಸವರಾರರಿಗೆ ತೀವ್ರ ಸಮಸ್ಯೆಯಾಗಿದೆ.

ಸರ್ವಿಸ್‌ ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿವೆ. ಮಳೆ ನೀರು ಸರಿಯಾಗಿ ಹರಿದು ಹೋಗುವ ವ್ಯವಸ್ಥೆಯೂ ಇಲ್ಲದೆ ಬೈಕ್‌ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಅನೇಕ ಕಡೆ ಸರ್ವಿಸ್‌ ರಸ್ತೆಗಳನ್ನು ಎತ್ತರಿಸದೇ ತಗ್ಗಿನಲ್ಲಿಯೇ ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಎತ್ತರ ಪ್ರದೇಶದಲ್ಲಿ ಇರುವ ಮಣ್ಣು ಸಹ ನೀರಿನೊಂದಿಗೆ ಹರಿದು ಬಂದು ರಸ್ತೆ ಮೇಲೆ ನಿಲ್ಲುತ್ತಿದೆ. ಇದರಿಂದ ರಸ್ತೆಯುದ್ದಕ್ಕೂ ಇರುವ ಜಮೀನು ಮಾಲೀಕರಿಗೆ ತಮ್ಮ ಜಮೀನುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಅಲ್ಲದೆ ಬೈಕ್‌, ಸೈಕಲ್‌, ಕಾರು ಮತ್ತಿತರ ವಾಹನಗಳ ಸವಾರರು ಸರ್ವಿಸ್‌ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಿದೆ.

ಅನೇಕ ಅಂಡರ್‌ ಪಾಸ್‌ಗಳಲ್ಲಿ ಮಣ್ಣು ಮಿಶ್ರಿತ ನೀರು ನಿಲ್ಲುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಸಮಸ್ಯೆಯಾಗುತ್ತಿದ್ದರೂ ಅನಿವಾರ್ಯವಾಗಿ ಅಂಡರ್‌ಪಾಸ್‌ನಲ್ಲಿಯೇ ತೆರಳಬೇಕಿದೆ. ಇಲ್ಲದಿದ್ದರೆ ಅನೇಕ ಕಿಮೀ ಸುತ್ತಿಬಳಸಿ ತೆರಳಬೇಕಿದೆ. ಅನೇಕ ಕಡೆ ಸರ್ವಿಸ್‌ ರಸ್ತೆ ಎರಡು ಕಡೆಯಿಂದ ಇಳಿಜಾರು ಮಾಡಿ ಮಧ್ಯದಲ್ಲಿ ಅಂಡರ್‌ ಪಾಸ್‌ ನಿರ್ಮಿಸಲಾಗಿದೆ. ಇದರಿಂದ ಮಳೆಯಾದ ತಕ್ಷ ಣ ಎರಡು ಇಳಿಜಾರಿನಿಂದ ನೀರು ಹರಿದು ಬಂದು ಅಂಡರ್‌ ಪಾಸ್‌ನಲ್ಲಿ ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ರಸ್ತೆಗಳು ಸಹ ಹಾಳಾಗುತ್ತಿವೆ.

ಅವೈಜ್ಞಾನಿಕವಾಗಿ ಸರ್ವಿಸ್‌ ರಸ್ತೆ ನಿರ್ಮಿಸಿದ್ದರಿಂದ ಸಮಸ್ಯೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅಂಡರ್‌ ಪಾಸ್‌ ನಿರ್ಮಿಸಿದ ಎಲ್ಲ ಕಡೆ ಮಳೆ ನೀರು ರಸ್ತೆಯ ಮೇಲೆ ಹರಿಯದಂತೆ ವ್ಯವಸ್ಥೆ ಮಾಡಬೇಕು. ಸರ್ವಿಸ್‌ ರಸ್ತೆಯಲ್ಲಿ ತುಂಬಿದ ಮಣ್ಣು ಹಾಗೂ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಅಂಡರ್‌ ಪಾಸ್‌ದಲ್ಲಿ ನೀರು ತುಂಬಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ