ಆ್ಯಪ್ನಗರ

ಇಂದು ಸಂಚಾರ ಮಾರ್ಗ ಬದಲಾವಣೆ

ಬೆಳಗಾವಿ: ಬಸವ ಜಯಂತಿ ಅಂಗವಾಗಿ ನಗರದಲ್ಲಿ ಮೇ 7ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸವೇಶ್ವರ ಭಾವಚಿತ್ರ, ರೂಪಕಗಳ ಮೆರವಣಿಗೆ ನಡೆಯುವ ...

Vijaya Karnataka 7 May 2019, 5:00 am
ಬೆಳಗಾವಿ : ಬಸವ ಜಯಂತಿ ಅಂಗವಾಗಿ ನಗರದಲ್ಲಿ ಮೇ 7ರಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಸವೇಶ್ವರ ಭಾವಚಿತ್ರ, ರೂಪಕಗಳ ಮೆರವಣಿಗೆ ನಡೆಯುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
Vijaya Karnataka Web traffic path change today
ಇಂದು ಸಂಚಾರ ಮಾರ್ಗ ಬದಲಾವಣೆ


ಕೆಎಲ್‌ಇ ರಸ್ತೆ, ಕೃಷ್ಣದೇವರಾಯ ವೃತ್ತದ ಮೂಲಕ ಚನ್ನಮ್ಮ ಸರ್ಕಲ್‌ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಲಕ್ಷ್ಮೀ ಕಾಂಪ್ಲೆಕ್ಸ್‌, ಸದಾಶಿವ ನಗರ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ವಿಶ್ವೇಶ್ವರಯ್ಯ ನಗರ, ಬಾಚಿ ಕ್ರಾಸ್‌, ಕ್ಲಬ್‌ ರಸ್ತೆ ಮಾರ್ಗವಾಗಿ ಗಾಂಧಿ ಸರ್ಕಲ್‌, ಶೌರ್ಯ ಸರ್ಕಲ್‌, ಗ್ಲೋಬ್‌ ಥಿಯೇಟರ್‌ ಸರ್ಕಲ್‌ ಮುಖಾಂತರ ಮುಂದೆ ಸಾಗಬೇಕು. ಚನ್ನಮ್ಮ ಸರ್ಕಲ್‌ ಮುಖಾಂತರ ಕಾಲೇಜ್‌ ರಸ್ತೆ ಮಾರ್ಗವಾಗಿ ಬೋಗಾರವೇಸ್‌ ಕಡೆಗೆ ಸಂಚರಿಸುವ ವಾಹನಗಳು ಚನ್ನಮ್ಮ ಸರ್ಕಲ್‌ದ ಗಣೇಶ ಮಂದಿರ ಹಿಂದೆ ಸಾಗಿ ಕ್ಲಬ್‌ ರಸ್ತೆ, ಗಾಂಧಿ ಸರ್ಕಲ್‌, ಶೌರ್ಯ ಚೌಕ್‌, ಶರ್ಕತ ಪಾರ್ಕ್‌, ಗ್ಲೋಬ್‌ ಥಿಯೇಟರ್‌ ಸರ್ಕಲ್‌ ಮುಖಾಂತರ ಮುಂದೆ ಸಾಗಬೇಕು.

ಕೇಂದ್ರ ಬಸ್‌ ನಿಲ್ದಾಣ ಕಡೆಯಿಂದ ಖಡೇ ಬಜಾರ್‌ ರಸ್ತೆ ಮೂಲಕ ಶನಿವಾರ ಖೂಟ ಕಡೆಗೆ ಸಂಚರಿಸುವ ಎಲ್ಲ ಮಾದರಿಯ ವಾಹನಗಳು ಕೇಂದ್ರ ಬಸ್‌ ನಿಲ್ದಾಣ ಹತ್ತಿರ ಬಲ-ಎಡ ತಿರುವು ಪಡೆದು ಆರ್‌ಟಿಒ ಸರ್ಕಲ್‌, ಹಳೆಯ ಪಿಬಿ ರಸ್ತೆಯ ಮೂಲಕ ತೆರಳಬೇಕು. ಜೀಜಾಮಾತಾ ಸರ್ಕಲ್‌, ದೇಶಪಾಂಡೆ ಪೆಟ್ರೋಲ್‌ ಪಂಪ್‌ ಕಡೆಗಳಿಂದ ನರಗುಂದಕರ ಭಾವೆ ಚೌಕ ಕಡೆಗೆ ಸಂಚರಿಸುವ ವಾಹನಗಳು ರವಿವಾರ ಪೇಟೆ, ಪಾಟೀಲ ಗಲ್ಲಿ, ಸ್ಟೇಶನ್‌ ರಸ್ತೆ ಮಾರ್ಗವಾಗಿ ಖಾನಾಪುರ ರಸ್ತೆಗೆ ಸಾಗಬೇಕು.

ಮೆರವಣಿಗೆ ಸಾಗುವ ಮಾರ್ಗವಾದ ಚನ್ನಮ್ಮ ಸರ್ಕಲ್‌ದಿಂದ ಕಾಕತಿವೇಸ್‌, ಶನಿವಾರ ಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ್‌ ರಸ್ತೆಯ ಎರಡೂ ಬದಿಯ ರಸ್ತೆಗಳಲ್ಲಿ ಮೇ 7 ರಂದು ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆವರೆಗೆ ವಾಹನ ನಿಲುಗಡೆ, ಸಂಚಾರ ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ