ಆ್ಯಪ್ನಗರ

ಬಸ್‌ ನಿಲ್ದಾಣದ ಬಳಿ ಕಸದ ಕಿರಿಕಿರಿ

ಎಂ.ಕೆ. ಹುಬ್ಬಳ್ಳಿ: ಸಮೀಪದ ಕಾದರವಳ್ಳಿ ಕ್ರಾಸ್‌ (ಇಟಗಿ ಕ್ರಾಸ್‌) ಬಸ್‌ ನಿಲ್ದಾಣದ ...

Vijaya Karnataka 16 Oct 2019, 5:00 am
ಎಂ.ಕೆ. ಹುಬ್ಬಳ್ಳಿ: ಸಮೀಪದ ಕಾದರವಳ್ಳಿ ಕ್ರಾಸ್‌ (ಇಟಗಿ ಕ್ರಾಸ್‌) ಬಸ್‌ ನಿಲ್ದಾಣದ ಬಳಿ ಕಸದ ರಾಶಿ ತುಂಬಿಕೊಂಡಿದ್ದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಕುಳಿತುಕೊಳ್ಳುವಂತಾಗಿದೆ.
Vijaya Karnataka Web 15MKH1(1)_53


ಇದು ಕಾದರವಳ್ಳಿ, ತುರಮರಿ, ಹುಣಶೀಕಟ್ಟಿ, ಕಡತನಾಳ, ದೇವರಶೀಗಿಹಳ್ಳಿ, ಮಾರ್ಗನಕೊಪ್ಪ, ಕ್ಯಾರಕೊಪ್ಪ, ಇಟಗಿ, ಗಂದಿಗವಾಡ, ತೋಲಗಿ ಇನ್ನೂ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಕೇಂದ್ರಸ್ಥಾನವಾಗಿದೆ. ರಾಷ್ಟ್ರೀಯ ಹೆದ್ದಾರಿ -4 ಸರ್ವಿಸ್‌ ರಸ್ತೆಗೆ ಹೊಂದಿಕೊಂಡು ಕಾದರವಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಈ ಪ್ರದೇಶದಲ್ಲಿರಾಶಿ ರಾಶಿ ತ್ಯಾಜ್ಯವನ್ನು ಎಸೆಯಲಾಗಿದೆ. ಇದರ ಪಕ್ಕದಲ್ಲಿಯೇ ಚಹಾದ ಅಂಗಡಿಗಳು, ಸಾರಾಯಿ ಅಂಗಡಿಗಳು ಇವೆ. ಚಹಾದ ಕೈಗಾಡಿ ಅಂಗಡಿಗಳಲ್ಲಿಯೇ ಜನರು ಆಹಾರ ಸೇವನೆ ಮಾಡುತ್ತಾರೆ.

ಕಾದರವಳ್ಳಿ ಕ್ರಾಸ್‌, ಕಾದರವಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. ಈ ಪಂಚಾಯಿತಿಯ ಅಧಿಕಾರಿಗಳಿಗೆ ಸ್ವಚ್ಛ ಭಾರತ ಅಭಿಯಾನದ ಘೋಷಣೆ ಕೇಳುತ್ತಿಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ದೇವಸ್ಥಾನ, ಬಸ್‌ ನಿಲ್ದಾಣ, ಚರ್ಚ್, ಗ್ರಾಮದ ಇನ್ನು ಅನೇಕ ಸಾರ್ವಜನಿಕ ಸ್ಥಳಗಳ ಪಕ್ಕದಲ್ಲಿಕಸ ಕಡ್ಡಿ , ತ್ಯಾಜ್ಯ ಎಸೆಯದಂತೆ ಕ್ರಮ ಜರುಗಿಸಬೇಕು. ತ್ಯಾಜ್ಯ ಎಸೆಯಲು ಕಸದ ತೊಟ್ಟಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ