ಬೆಳಗಾವಿ : ಎಂಟು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದೆ.
ಸವದತ್ತಿ ತಾಲೂಕಿನ ಮಾಟೊಳ್ಳಿ ಗ್ರಾಮದ ಕೆಂಚಪ್ಪ ಶಿವರಾಯಪ್ಪ ಎತ್ತಿನಗುಡ್ಡ, ವೀರೇಶ ಕೆಂಚಪ್ಪ ಎತ್ತಿನಗುಡ್ಡ, ಸೋಮಲಿಂಗ ಕೆಂಚೆಪ್ಪ ಎತ್ತಿನಗುಡ್ಡ, ಪ್ರಕಾಶ ಕೆಂಚೆಪ್ಪ ಎತ್ತಿನಗುಡ್ಡ, ಶಿವರಾಯಪ್ಪ ಕೆಂಚೆಪ್ಪ ಎತ್ತಿನಗುಡ್ಡ, ಶಿವಾನಂದ ಶಿವರಾಯಪ್ಪ ಎತ್ತಿನಗುಡ್ಡ, ಸುರೇಶ ಶಿವರಾಯ ಎತ್ತಿನಗುಡ್ಡ, ಫಕೀರಪ್ಪ ರಾಮನಿಂಗಪ್ಪ ನರಗುಂದ, ಮಹಾದೇವ ಸೋಮಪ್ಪ ಮಾಕಿ, ಸುರೇಶ ಮೂಗಪ್ಪ ಅವರೊಳ್ಳಿ, ರಾಮಪ್ಪ ಇಟ್ಟಪ್ಪ ಇಂಗಳಗಿ, ಭೀಮರಾಯಪ್ಪ ಶಿವರಾಯಪ್ಪ ಎತ್ತಿನಗುಡ್ಡ ಖುಲಾಸೆಗೊಂಡವರು.
ಪ್ರಕರಣದ ವಿವರ: ಮಾಟೊಳ್ಳಿ ಗ್ರಾಮದ ಕ್ರಾಸ್ ಬಳಿ 2011ರ ಜು.29 ರಂದು ಆ ಗ್ರಾಮದ ಸಿಡ್ಲಪ್ಪ ತಳವಾರ, ರುಕ್ಮವ್ವ ಸಿಡ್ಲಪ್ಪ ತಳವಾರ ಮತ್ತು ಮಲ್ಲಪ್ಪ ಅಂಗಡಿ ಎನ್ನುವವರನ್ನು ಇವರೆಲ್ಲರು ಅಟ್ಟಾಡಿಸಿಕೊಂಡು ಹೋಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು ಎನ್ನುವ ಆರೋಪ ಹೊರಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷಿ ಪುರಾವೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರೂ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದೆ.
ದೂರಿನ ಹಿನ್ನೆಲೆ: ಕೊಲೆಗೂ ಮುಂಚೆ ವರ್ಷದ ಹಿಂದೆ ತಮ್ಮ ಕುಟುಂಬದ ಯುವತಿಯನ್ನು ಆರೋಪಿಗಳ ಪೈಕಿ ನಾಲ್ವರು ಚುಡಾಯಿಸುತ್ತಿದ್ದರು ಎಂದು ತಳವಾರ ಕುಟುಂಬದವರು ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತರ ಪರ ತೀರ್ಪು ಪ್ರಕಟಿಸಿತ್ತು. ಅಸಮಾಧಾನಗೊಂಡಿದ್ದ ತಳವಾರ ಕುಟುಂಬದ ಸದಸ್ಯರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದರು. ಇದರಿಂದ ಕ್ರುದ್ಧರಾದ ಎತ್ತಿನಗುಡ್ಡ ಕುಟುಂಬದವರು 2011ರ ಜ.29ರಂದು ಸಿಡ್ಲಪ್ಪ ತಳವಾರ, ರುಕ್ಮವ್ವ ಸಿಡ್ಲಪ್ಪ ತಳವಾರ ಮತ್ತು ಇವರಿಗೆ ಕಾನೂನು ಸಲಹೆ ನೀಡುತ್ತಿದ್ದ ಅದೇ ಗ್ರಾಮದ ಮಲ್ಲಪ್ಪ ಅಂಗಡಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿತರ ಪರವಾಗಿ ಹಿರಿಯ ನ್ಯಾಯವಾದಿ ಎ.ಜಿ.ಮುಳವಾಡಮಠ ಮತ್ತು ಕೆ.ಟಿ.ಪಾಟೀಲ ವಕಾಲತ್ತು ವಹಿಸಿದ್ದರು.
ಸವದತ್ತಿ ತಾಲೂಕಿನ ಮಾಟೊಳ್ಳಿ ಗ್ರಾಮದ ಕೆಂಚಪ್ಪ ಶಿವರಾಯಪ್ಪ ಎತ್ತಿನಗುಡ್ಡ, ವೀರೇಶ ಕೆಂಚಪ್ಪ ಎತ್ತಿನಗುಡ್ಡ, ಸೋಮಲಿಂಗ ಕೆಂಚೆಪ್ಪ ಎತ್ತಿನಗುಡ್ಡ, ಪ್ರಕಾಶ ಕೆಂಚೆಪ್ಪ ಎತ್ತಿನಗುಡ್ಡ, ಶಿವರಾಯಪ್ಪ ಕೆಂಚೆಪ್ಪ ಎತ್ತಿನಗುಡ್ಡ, ಶಿವಾನಂದ ಶಿವರಾಯಪ್ಪ ಎತ್ತಿನಗುಡ್ಡ, ಸುರೇಶ ಶಿವರಾಯ ಎತ್ತಿನಗುಡ್ಡ, ಫಕೀರಪ್ಪ ರಾಮನಿಂಗಪ್ಪ ನರಗುಂದ, ಮಹಾದೇವ ಸೋಮಪ್ಪ ಮಾಕಿ, ಸುರೇಶ ಮೂಗಪ್ಪ ಅವರೊಳ್ಳಿ, ರಾಮಪ್ಪ ಇಟ್ಟಪ್ಪ ಇಂಗಳಗಿ, ಭೀಮರಾಯಪ್ಪ ಶಿವರಾಯಪ್ಪ ಎತ್ತಿನಗುಡ್ಡ ಖುಲಾಸೆಗೊಂಡವರು.
ಪ್ರಕರಣದ ವಿವರ: ಮಾಟೊಳ್ಳಿ ಗ್ರಾಮದ ಕ್ರಾಸ್ ಬಳಿ 2011ರ ಜು.29 ರಂದು ಆ ಗ್ರಾಮದ ಸಿಡ್ಲಪ್ಪ ತಳವಾರ, ರುಕ್ಮವ್ವ ಸಿಡ್ಲಪ್ಪ ತಳವಾರ ಮತ್ತು ಮಲ್ಲಪ್ಪ ಅಂಗಡಿ ಎನ್ನುವವರನ್ನು ಇವರೆಲ್ಲರು ಅಟ್ಟಾಡಿಸಿಕೊಂಡು ಹೋಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು ಎನ್ನುವ ಆರೋಪ ಹೊರಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷಿ ಪುರಾವೆ ಮತ್ತು ದಾಖಲಾತಿಗಳನ್ನು ಪರಿಶೀಲಿಸಿದರೂ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಿದೆ.
ದೂರಿನ ಹಿನ್ನೆಲೆ: ಕೊಲೆಗೂ ಮುಂಚೆ ವರ್ಷದ ಹಿಂದೆ ತಮ್ಮ ಕುಟುಂಬದ ಯುವತಿಯನ್ನು ಆರೋಪಿಗಳ ಪೈಕಿ ನಾಲ್ವರು ಚುಡಾಯಿಸುತ್ತಿದ್ದರು ಎಂದು ತಳವಾರ ಕುಟುಂಬದವರು ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿತರ ಪರ ತೀರ್ಪು ಪ್ರಕಟಿಸಿತ್ತು. ಅಸಮಾಧಾನಗೊಂಡಿದ್ದ ತಳವಾರ ಕುಟುಂಬದ ಸದಸ್ಯರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದರು. ಇದರಿಂದ ಕ್ರುದ್ಧರಾದ ಎತ್ತಿನಗುಡ್ಡ ಕುಟುಂಬದವರು 2011ರ ಜ.29ರಂದು ಸಿಡ್ಲಪ್ಪ ತಳವಾರ, ರುಕ್ಮವ್ವ ಸಿಡ್ಲಪ್ಪ ತಳವಾರ ಮತ್ತು ಇವರಿಗೆ ಕಾನೂನು ಸಲಹೆ ನೀಡುತ್ತಿದ್ದ ಅದೇ ಗ್ರಾಮದ ಮಲ್ಲಪ್ಪ ಅಂಗಡಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿತರ ಪರವಾಗಿ ಹಿರಿಯ ನ್ಯಾಯವಾದಿ ಎ.ಜಿ.ಮುಳವಾಡಮಠ ಮತ್ತು ಕೆ.ಟಿ.ಪಾಟೀಲ ವಕಾಲತ್ತು ವಹಿಸಿದ್ದರು.