ಆ್ಯಪ್ನಗರ

3 ತಿಂಗಳಿಂದ ಗುಡಿಕಟ್ಟಿಯಲ್ಲಿ ಮಂಗಗಳ ಉಪಟಳ

ದೊಡವಾಡ: ಸಮೀಪದ ಗುಡಿಕಟ್ಟಿ ಗ್ರಾಮದಲ್ಲಿ 30 ಕ್ಕೂ ಹೆಚ್ಚು ಮಂಗಳಗಳ ...

Vijaya Karnataka 31 Jan 2019, 5:00 am
ದೊಡವಾಡ : ಸಮೀಪದ ಗುಡಿಕಟ್ಟಿ ಗ್ರಾಮದಲ್ಲಿ 30 ಕ್ಕೂ ಹೆಚ್ಚು ಮಂಗಳಗಳ ಹಿಂಡೊಂದು ಕಳೆದ 2-3 ತಿಂಗಳಿಂದ ಬೀಡು ಬಿಟ್ಟಿದ್ದು ಪ್ರತಿ ನಿತ್ಯ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತ್ತಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.
Vijaya Karnataka Web trouble by monkeys in gudikatti village for 3 months
3 ತಿಂಗಳಿಂದ ಗುಡಿಕಟ್ಟಿಯಲ್ಲಿ ಮಂಗಗಳ ಉಪಟಳ


ಮಂಗಗಳನ್ನು ಹಿಡಿದು ಅರಣ್ಯಕ್ಕೆ ಸಾಗಿಸಲು ಕ್ರಮ ಕೈಗೊಳ್ಳಬೇಕೆಂದು ಗೋವನಕೊಪ್ಪ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ವಿಜಯ ಕರ್ನಾಟಕ ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮನೆಗಳ ಹೆಂಚು ತೆಗೆದು ಒಳಗೆ ಇಳಿದು ಬಂದು ಮನೆ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಪಾರಾಗುತ್ತಿವೆ. ಬೆದರಿಸಲು ಹೋದರೆ ತಿರುಗಿ ದಾಳಿ ಮಾಡಲು ಬರುತ್ತಿವೆ. ಮಂಗಗಳ ಹಿಂಡಿನಲ್ಲಿ ಕೆಲ ಮಂಗಗಳಿಗೆ ಹುಚ್ಚು ತಗಲಿರುವ ಸಂಭವವಿದೆ. ಅವು ಮನುಷ್ಯರನ್ನು ಕಂಡ ಕೂಡಲೇ ಮೈಮೇಲೆ ಎಗರಿ ಕಚ್ಚಿ ಗಾಯಗೊಳಿಸುತ್ತಿವೆ. ಹೀಗೆ ಈಗಾಗಲೇ 50 ಕ್ಕೂ ಹೆಚ್ಚು ಜನ ಮಂಗಗಳ ದಾಳಿಗೆ ತುತ್ತಾಗಿದ್ದಾರೆ.

'ಕಡಲೆ, ಗೋಧಿ ಬೆಳೆಗಳ ಕಟಾವಿನ ಹಂಗಾಮಾಗಿದ್ದರಿಂದ ನಿತ್ಯ ಹೊಲಗಳಿಗೆ ತೆರಳುವ ರೈತರು ಹಾಗೂ ಮಹಿಳೆಯರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ. ಅದರಲ್ಲೂ ಟ್ರ್ಯಾಕ್ಟರ್‌ ಕಂಡರೆ ಮಂಗಗಳಿಗೆ ಎಲ್ಲಿಲ್ಲದ ಕೋಪ. ಟ್ರ್ಯಾಕ್ಟರ್‌ ಹುಡ್‌ ಮೇಲೆ ಕುಳಿತು ಚಾಲಕರನ್ನು ಹೆದರಿಸಿ ಕಚ್ಚಿ ಗಾಯಗೊಳಿಸುತ್ತಿವೆ' ಎಂದು ಮಂಗಗಳ ದಾಳಿಗೊಳಗಾದ ಟ್ರ್ಯಾಕ್ಟರ್‌ ಚಾಲಕ ಸಚಿನ ಸಣ್ಣಕ್ಕಿ ಹೇಳುತ್ತಾರೆ.

ಶಾಲೆಯಿಂದ ದೂರ ಉಳಿದ ಮಕ್ಕಳು :
ಮಂಗಗಳ ವಿಪರೀತ ಕಾಟಕ್ಕೆ ಹೆದರಿರುವ ಗ್ರಾಮದ ಜನ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಕ್ಕಳ ಹಾಜಾರಾತಿ ಕಡಿಮೆಯಾಗಿ ಅವರ ಶಿಕ್ಷ ಣಕ್ಕೂ ಹಿನ್ನಡೆಯಾಗುತ್ತಿದೆ.

ಮಂಗಗಳ ಕಾಟದಿಂದ ಗ್ರಾಮಸ್ಥರನ್ನು ಮುಕ್ತಗೊಳಿಸಲು ಅಧಿಕಾರಿಗಳು ಜನ ಪ್ರತಿನಿಧಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಕೃಷ್ಣಾನಂದ ಆರುಟಗಿ, ಶಿವಾನಂದ ಸಣ್ಣಕ್ಕಿ ಮಹಾಂತೇಶ ಕಿಲ್ಲೇದಾರ, ರಮೇಶ ತಳವಾರ ಆಗ್ರಹಿಸಿದ್ದಾರೆ.

ವೈದ್ಯಾಧಿಕಾರಿಯಿಂದ ಪಿಡಿಒಗೆ ಪತ್ರ :
ಮಂಗಗಳ ಕಡಿತಕ್ಕೊಳಗಾಗಿ ನಿತ್ಯ ದೊಡವಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಅಲೆದಾಡುತ್ತಿರುವ ಗುಡಿಕಟ್ಟಿ ಗ್ರಾಮದ ಜನರ ಸ್ಥಿತಿ ಕಂಡು ಆತಂಕ ವ್ಯಕ್ತ ಪಡಿಸಿರುವ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ. ಮಹೇಶ್ವರಿ ಗೋವನಕೊಪ್ಪ ಅವರು ಪಿಡಿಗೆ ಪತ್ರ ಬರೆದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಂಗಗಳ ಉಪಟಳ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ